April 13, 2025
ಹಣಕ್ಕೋಸ್ಕರ ಹೆತ್ತ ತಾಯಿಯನ್ನೇ ರಾಡ್ನಿಂದ ತಲೆಗೆ ಹೊಡೆದು ಕೊಲೆ
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದೆ. ಪಾಪಿ ಮಗನೊಬ್ಬ ಹಣಕ್ಕೋಸ್ಕರ ಹೆತ್ತ ತಾಯಿಯನ್ನೇ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಘಟನೆ ಬಾಗಲಕುಂಟೆಯ ಮುನೇಶ್ವರ ನಗರದಲ್ಲಿ ತಡರಾತ್ರಿ ನಡೆದಿದೆ. ಆರೋಪಿ ಮಹೇಂದ್ರ ಸಿಂಗ್ ತನ್ನ ತಾಯಿ ಶಾಂತಾಬಾಯಿಯನ್ನು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಂದಿದ್ದಾನೆ.ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
- 3
- 0
- 0