“ಯಕ್ಷ ಕೋಲ್ಮಿಂಚು”: yaksha kolminchu Rajesh bhandari
ಕಳೆದ 21 ವರ್ಷಗಳಿಂದ ಯಕ್ಷಗಾನವನ್ನೇ ವೃತ್ತಿಯಾಗಿಸಿಕೊಂಡು ತಮ್ಮದೇ ವಿಶೇಷ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿದ ಕಲಾವಿದ ರಾಜೇಶ್ ಭಂಡಾರಿ ಗುಣವಂತೆ.
ವಸ್ತ್ರವಿನ್ಯಾಸದ ಮೆರುಗು, ಕುಣಿತದ ಶ್ರೀಮಂತಿಕೆ, ಮಾತುಗಾರಿಕೆಯ ಅಬ್ಬರದಲ್ಲಿ ಪ್ರೇಕ್ಷಕರನ್ನು ರಂಜಿಸುವ ಕಲೆಯ ಮತ್ತೊಂದು ಹೆಸರೇ ಯಕ್ಷಗಾನ. ಕಳೆದ 21 ವರ್ಷಗಳಿಂದ ಯಕ್ಷಗಾನವನ್ನೇ ವೃತ್ತಿಯಾಗಿಸಿಕೊಂಡು ತಮ್ಮದೇ ವಿಶೇಷ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿದ ಕಲಾವಿದ ರಾಜೇಶ್ ಭಂಡಾರಿ ಗುಣವಂತೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಣವಂತೆಯ ಮಂಜುನಾಥ ಭಂಡಾರಿ ಹಾಗೂ ರಾಧ ಭಂಡಾರಿ ಇವರ ಮಗನಾಗಿ 28.02.1985ರಲ್ಲಿ ಜನನ. ವಿನಂತಿ ರಾಜೇಶ್ ಇವರ ಪತ್ನಿ ಧಾತ್ರಿ ಹಾಗೂ ದಿಯಾ ಇವರ ಇಬ್ಬರು ಮಕ್ಕಳು. ಹೆರಂಜಾಲು ವೆಂಕಟರಮಣ ಗಾಣಿಗರು ಹಾಗೂ ಕೃಷ್ಣ ಭಂಡಾರಿ ಗುಣವಂತೆ ಇವರ ಯಕ್ಷಗಾನ ಗುರುಗಳು.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಕಾರಣ ತಂದೆಯವರು. ಸಣ್ಣವ ಇರುವಾಗ ಒಂದು ವೃಶಸೇನಾ ಮಾಡಿದ್ದೆ ಅಲ್ಲಿ ಕೆರೆಮನೆ ಮಹಾಬಲ ಹೆಗಡೆಯವರು ನನ್ನ ತಂದೆಯ ಬಳಿ ಬಂದು ನಿಮ್ಮ ಜಾತಿಯಲ್ಲಿ ಎಲ್ಲಾ ಹಿಮ್ಮೇಳಕ್ಕೆ ಹೆಚ್ಚು ಬರೋದು ಇವನಿಗೆ ಭವಿಷ್ಯ ಇದೆ ಮುಮ್ಮೇಳ ಕಳಿಸಿ ಎಂದರು̤ ಆಮೇಲೆ ಆ ಕಡೆ ಹೆಚ್ಚಿನ ಗಮನ ಹರಿಸುವ ಹಾಗೇ ಆಯಿತು.

ನೆಚ್ಚಿನ ಪ್ರಸಂಗಗಳು:-
ಅಭಿಮನ್ಯು ಕಾಳಗ, ವ್ರಶಸೇನಾ ಕಾಳಗ, ಚಂದ್ರವಳಿ ವಿಲಾಸ, ಜಾಂಬವತಿ ಕಲ್ಯಾಣ, ಚಕ್ರ ಚಂಡಿಕೆ, ಗದಾಯುದ್ಧ, ನರಕಾಸುರ ವಧೆ.
ನೆಚ್ಚಿನ ವೇಷಗಳು:-
ಅಭಿಮನ್ಯು, ಕೃಷ್ಣ, ಲವ, ಕುಶ, ಬರ್ಬರಿಕ, ನರಕಾಸುರ, ಸುಧನ್ವ, ರಾವಣ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮಾಡುವ ಪಾತ್ರಗಳ ಬಗ್ಗೆ ಪೂರ್ವಜ್ಞಾನ, ಪ್ರಸಂಗ ನಡೆ, ಹಿರಿಯ ಕಲಾವಿದರ, ಎದುರು ಕಲಾವಿದರೊಂದಿಗೆ, ಭಾಗವತರೊಂದಿಗೆ ಮುಕ್ತವಾಗಿ ಮಾತನಾಡಿಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ರಾಜೇಶ್.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಕಲೆ ನಿರಂತರ. ಅದಕ್ಕೆ ಅಳಿವು ಇಲ್ಲ, ಆದರೆ ಕಾಲ ಬದಲಾದ ಹಾಗೆ ಯಕ್ಷಗಾನದ ಸ್ವರೂಪವು ಕೂಡ ಗಣನೀಯವಾಗಿ ಬದಲಾಗುತ್ತಾ ಸಾಗುತ್ತಿದ, ಕೆಲವೊಂದು ಬದಲಾವಣೆ ಅಗತ್ಯ ಹಾಗೂ ಸ್ವಾಗತಾರ್ಹ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರಜ್ಞಾವಂತ ಪ್ರೇಕ್ಷಕರ ಕೊರತೆ ಕಾಣುತ್ತಿದೆ.
ಕಲಾ ಆರಾಧನೆ ಬಿಟ್ಟು ಕಲಾವಿದರ ಆರಾಧನೆ ಮಾಡುತ್ತಿರುವುದು ಕಂಡು ಬರುತ್ತ ಇದೆ. ಯಕ್ಷಗಾನ ಸಮಷ್ಟಿ ಕಲೆ ಎಲ್ಲವನ್ನೂ ಸಮಾನ ದ್ರಷ್ಟಿಯಿಂದ ನೋಡಬೇಕು. ಕೇವಲ ಒಂದು ವಿಭಾಗವನ್ನು ಮಾತ್ರ ಪೋಶಿಸುವುದು ಸೂಕ್ತವಲ್ಲ.

ಹೈದ್ರಾಬಾದ್ ಯಕ್ಷೋತ್ಸವ ಸನ್ಮಾನ, ಬೆಂಗಳೂರು ಸನ್ಮಾನ ಹಾಗೂ ಹಲವು ಸನ್ಮಾನ ಪ್ರಶಸ್ತಿಗಳು ದೊರೆತಿರುತ್ತದೆ.
ಗುಂಡಬಾಳ ಮೇಳದಲ್ಲಿ ಪುಂಡು ವೇಷಧಾರಿಯಾಗಿ ಯಕ್ಷಗಾನ ರಂಗ ಪ್ರವೇಶಿಸಿ 3 ವರ್ಷ ದುಡಿದು, ಕಮಲಶಿಲೆ ಮೇಳದಲ್ಲಿ 3 ವರ್ಷ ಕಾಲ ಸೇವೆ ಸಲ್ಲಿಸಿ, ಬಡಗುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಡೇರೆ ಮೇಳವಾದ ಸಾಲಿಗ್ರಾಮ ಮೇಳದಲ್ಲಿ ಸುಧೀರ್ಘ 14 ವರ್ಷಗಳ ಕಾಲ ಕಲಾ ಸೇವೆಯನ್ನು ಮಾಡಿ ಪ್ರಸ್ತುತ ಮೆಕ್ಕೆಕಟ್ಟು ಮೇಳದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ರಾಜೇಶ್.

ಪುಸ್ತಕ ಓದುವುದು, ಚಂಡೆ ಮದ್ದಳೆ ಬರಿಸುವುದು, ಅಪ್ಪ ಅಣ್ಣ ಚಂಡೆ ಮದ್ದಳೆ ರೆಡಿ ಮಾಡ್ತಾರೆ ಅದರ ಕೆಲಸ ಸ್ವಲ್ಪ ಕೆಲಸ ಮಾಡುತ್ತೇನೆ, ಶಹನಾಯಿ ಬಾರಿಸುವುದು, ಕ್ರಿಕೆಟ್ ಆಡುವುದು ಇವರ ಹವ್ಯಾಸಗಳು.ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ರಾಜೇಶ್ ಭಂಡಾರಿ ಗುಣವಂತೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
:- +918317463705