Back To Top

 ಹೈದೆರಾಬಾದಿನಲ್ಲಿ ಟೀನೇಜ್ ಲವ್: ಹೆತ್ತ ತಾಯಿಯ ಉಸಿರು ನಿಲ್ಲಿಸಿದ ಮಗಳು Hyderabad Murder Case

ಹೈದೆರಾಬಾದಿನಲ್ಲಿ ಟೀನೇಜ್ ಲವ್: ಹೆತ್ತ ತಾಯಿಯ ಉಸಿರು ನಿಲ್ಲಿಸಿದ ಮಗಳು Hyderabad Murder Case

Hyderabad Murder Case: ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದ ತಾಯಿಯನ್ನು ಕೊಲ್ಲಲು ನಿರ್ಧರಿಸಿದಳು ಮತ್ತು ಈ ಬಗ್ಗೆ ತನ್ನ ಗೆಳೆಯ ಶಿವನಿಗೆ ಹೇಳಿದಳು. ಒಂದು ವಾರದ ಹಿಂದೆ, ಹುಡುಗಿ ಶಿವನೊಂದಿಗೆ ಓಡಿಹೋದಳು. ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದಾಗ, ಜೀಡಿಮೆಟ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂರು ದಿನಗಳ ನಂತರ ಅವಳು ಮನೆಗೆ ಬಂದಳು.

ಹೈದರಾಬಾದ್: ಮಕ್ಕಳಿಗೆ ಹೆತ್ತವರು ಕಲಿಸುವ ಸಂಸ್ಕಾರ ಅವರ ಮೇಲೆ ಎಂಥಾ ಪರಿಣಾಮ ಬೀರುತ್ತದೆ ಮತ್ತು ಮಕ್ಕಳ ಚಲನವಲನ ಗಮನಿಸದಿದ್ದರೆ ಎಂಥಹಾ ಅನಾಹುತ ಸಂಭವಿಸುತ್ತದೆ ಎನ್ನುವುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

ಹೈದರಾಬಾದ್ ಜೀಡಿಮೆಟ್ಲಾದಲ್ಲಿ ಹತ್ತನೇ ತರಗತಿ ಬಾಲಕಿ ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾಳೆ. ತಮ್ಮ ಪ್ರೇಮ ಸಂಬಂಧಕ್ಕೆ ಅಡ್ಡಬಂದ ತಾಯಿಯನ್ನು ಆಕೆ ಬರ್ಬರವಾಗಿ ಕೊಂದಿದ್ದಾಳೆ.

8 ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಶಿವ (19) ಎಂಬ ಯುವಕನನ್ನು ಪ್ರೀತಿಸುತ್ತಿದ್ದ ಟೀನೇಜ್ ಹುಡುಗಿ ಫೋನ್ ಕರೆ ಮತ್ತು ಮೆಸೇಜ್ ಮಾಡುವ ಮೂಲಕ ಹೊರಗೆ ಭೇಟಿಯಾಗಲು ಪ್ರಾರಂಭಿಸಿದರು. ಈ ವಿಚಾರ ಹುಡುಗಿಯ ತಾಯಿ ಅಂಜಲಿಗೆ ತಿಳಿಯಿತು. ಈ ವಯಸ್ಸಿನಲ್ಲಿ ಲವ್ ಎಲ್ಲ ಬೇಡ, ಓದಿನ ಕಡೆ ಗಮನ ಹರಿಸಬೇಕೆಂದು ತಾಯಿ ತನ್ನ ಮಗಳಿಗೆ ಎಚ್ಚರಿಸಿದ್ದಳು. ತಾಯಿ ವಿರೋಧಿಸಿದ ನಂತರ ಹುಡುಗಿ ತನ್ನ ತಾಯಿಯ ಮೇಲೆ ದ್ವೇಷ ಸಾಧಿಸಿದಳು.

ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದ ತಾಯಿಯನ್ನು ಕೊಲ್ಲಲು ನಿರ್ಧರಿಸಿದಳು ಮತ್ತು ಈ ಬಗ್ಗೆ ತನ್ನ ಗೆಳೆಯ ಶಿವನಿಗೆ ಹೇಳಿದಳು. ಒಂದು ವಾರದ ಹಿಂದೆ, ಹುಡುಗಿ ಶಿವನೊಂದಿಗೆ ಓಡಿಹೋದಳು. (Hyderabad Murder Case) ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದಾಗ, ಜೀಡಿಮೆಟ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂರು ದಿನಗಳ ನಂತರ ಅವಳು ಮನೆಗೆ ಬಂದಳು.

ನಮ್ಮ ಪ್ರೀತಿಗೆ ಅಡ್ಡಿಯಾದ ತಾಯಿಯನ್ನು ಹೇಗಾದರೂ ಮಾಡಿ ಕೊಲ್ಲಬೇಕೆಂದು ನಿರ್ಧರಿಸಿದ ಬಾಲಕಿ ನಲ್ಗೊಂಡದಿಂದ ಬಂದಿದ್ದ ಶಿವ ತನ್ನ ಗೆಳೆಯರೊಂದಿಗೆ ಹುಡುಗಿ ಮನೆಗೆ ಬಂದನು. ಅಂಜಲಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾಗ ಶಿವ ಹಿಂದಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಶಿವ ಅಂಜಲಿಯ ಮುಖವನ್ನು ಬೆಡ್ಶೀಟ್ ನಿಂದ ಮುಚ್ಚಿದ್ದಾನೆ ಮತ್ತು ಹುಡುಗಿ ಸುತ್ತಿಗೆಯಿಂದ ತನ್ನ ತಾಯಿಯ ತಲೆಗೆ ಹೊಡೆದಿದ್ದಾಳೆ. ನಂತರ ಶಿವನ ಕಿರಿಯ ಸಹೋದರ ಯಶವಂತ್ ಅಂಜಲಿಯ ತಲೆಯನ್ನು ಚಾಕುವಿನಿಂದ ಕತ್ತರಿಸಿದ್ದಾನೆ. ಸುತ್ತಿಗೆಯಿಂದ ಹೊಡೆದು, ತಲೆಗೆ ಚಾಕುವಿನಿಂದ ಹೊಡೆದು ಕ್ರೂರವಾಗಿ ಕೊಲೆ ಮಾಡಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೊಲೆಯಾದ ತಾಯಿ ಅಂಜಲಿ ತೆಲಂಗಾಣ ಸಶಸ್ತ್ರ ಹೋರಾಟಗಾರ ಚಕಲಿ ಐಲಮ್ಮ ಅವರ ಮರಿಮೊಮ್ಮಗಳಾಗಿದ್ದಾಳೆ ಎಂದು ತಿಳಿದು ಬಂದಿದೆ. Hyderabad murder case

Prev Post

ಪೂಲ್ ಪಾರ್ಟಿ ವೇಳೆ ನೀರಿನಲ್ಲಿ ಮುಳುಗಿ ಯುವಕ ಸಾವು: kanpur death news

Next Post

ಕೊಬ್ಬರಿಗೆ ಬಂಪರ್ ಬೆಲೆ, ಇದು ಸಾರ್ವಕಾಲಿಕ ದಾಖಲೆ: Agriculture News, dry Coconut…

post-bars

Leave a Comment

Related post