
Mandya Crime News Kannada: ಅಕ್ರಮ ಮೋಹದ ಹಿಂದೆ ಬಿದ್ದ ಮಹಿಳೆ ಮಸಣಕ್ಕೆ ಯುವಕ ಜೈಲಿಗೆ
Crime News Kannada Mandya: ಹಾದಿ ತಪ್ಪಿದ ಸಮಾಜದಲ್ಲಿ ಇಂತಹ ಘಟನೆಗೆ ಮತ್ತೊಂದು ಸಾಕ್ಷಿ ಎನ್ನುವಂತೆ ಮಂಡ್ಯದ ಯುವಕನೋರ್ವ ಪ್ರಿಯತಮೆಯನ್ನು ಕೊಂದು ತನ್ನ ಜಮೀನಿನಲ್ಲಿ ಶವ ಬಚ್ಚಿಟ್ಟ ಘಟನೆ ಕರೋಟಿ ಗ್ರಾಮದಲ್ಲಿ ನಡೆದಿದ್ದು ಹತ್ಯೆಯಾದ ಮಹಿಳೆಯನ್ನು ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಅಕ್ರಮ ಸಂಬಂಧಗಳಿಂದ , ಪ್ರಿಯಕರ, ಪ್ರೇಯಸಿ ಕೊಲೆ, ಚಿನ್ನಾಭರಣ ದೋಚಿ ಪರಾರಿ ಇತ್ಯಾದಿ ವಿಕೃತ ಮತ್ತು ಅಮಾನವೀಯ ಘಟನೆಗಳು ಕೊಲೆಯಲ್ಲಿ ಅಂತ್ಯಗೊಳ್ಳುವಂತಹ ಘಟನೆಗಳು ದಿನನಿತ್ಯ ನೋಡುತ್ತಿದ್ದೇವೆ.
ಹಾದಿ ತಪ್ಪಿದ ಸಮಾಜದಲ್ಲಿ ಇಂತಹ ಘಟನೆಗೆ ಮತ್ತೊಂದು ಸಾಕ್ಷಿ ಎನ್ನುವಂತೆ ಮಂಡ್ಯದ ( Mandya ) ಯುವಕನೋರ್ವ ಪ್ರಿಯತಮೆಯನ್ನು ಕೊಂದು ತನ್ನ ಜಮೀನಿನಲ್ಲಿ ಶವ ಬಚ್ಚಿಟ್ಟ ಘಟನೆ ಕರೋಟಿ ಗ್ರಾಮದಲ್ಲಿ ನಡೆದಿದ್ದು ಹತ್ಯೆಯಾದ ಮಹಿಳೆಯನ್ನು ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂದು ಗುರುತಿಸಲಾಗಿದೆ.
https://www.facebook.com/watch/?v=746920744407159&rdid=bgbvYDWDMTrjrjMc
ಇನ್ಸ್ ಗ್ರಾಮ್ ನಲ್ಲಿ ಪರಿಚಯವಾದ ಮಹಿಳೆ ಪ್ರೀತಿ ಜೊತೆ ಲವ್ ಲಿ ಬಿದ್ದ ಯುವಕ, ನಂತರ ಆಕೆಯ ಜೊತೆ ಸುತ್ತಾಡಿ ದೈಹಿಕ ಸಂಬಂಧವನ್ನು ಹೊಂದಿದ್ದ ಎನ್ನಲಾಗಿದೆ.
ಮದುವೆಯಾಗಿ ಮಕ್ಕಳಿದ್ದರೂ ಪುನೀತ್ ಹಿಂದೆ ಬಿದ್ದಿದ್ದ ಪ್ರೀತಿ. ಕಳೆದ ಭಾನುವಾರ ಮೈಸೂರು, ಮಂಡ್ಯ ಅಂತ ಟ್ರಿಪ್ ಹೋಗಿದ್ದ ಇಬ್ಬರು ಜಾಲಿ ಜಾಲಿಯಾಗಿ ಸಮಯ ಕಳೆದಿದ್ದರು. ಆದರೆ ಅವರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಸಾವಿನಲ್ಲಿ ಅಂತ್ಯವಾಗಿದೆ.
ತಲೆ ಮೇಲೆ ಬಿದ್ದ ಕೊಂಬೆ: ಕೋಮಾದಲ್ಲಿದ್ದ ಅಕ್ಷಯ್ ಗೆ ಹೃದಯ ಸ್ತಂಭನ, ಫಲಿಸಲಿಲ್ಲ ಹೆತ್ತವರ ಪೂಜೆ:
ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ನಂತರ ಈತ ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟು ಪರಾರಿಯಾಗಿದ್ದಾನೆ. ಈ ಘಟನೆ ಕುರಿತು ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದು ಪುನೀತ್ ಪೋಲಿಸ್ ಅತಿಥಿಯಾಗಿದ್ದಾನೆ.

ಅಕ್ರಮ ಸಂಬಂಧದ ಮೋಜಿಗೆ ಹೋದ ಮಹಿಳೆ ಮಸಣ ಸೇರಿದರೆ ಯುವಕ ಜೈಲು ಪಾಲಾಗಿದ್ದು ದುರಂತ ಘಟನೆಯೊಂದು ನಡೆದಿದೆ.