
ಸಂಜು ವೆಡ್ಸ್ ಗೀತಾ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ ಡಿಂಪಲ್ ಕ್ವೀನ್: ದೂರು ( Sanju Weds Geetha 2 news)
ಬೆಂಗಳೂರು: (Sanju Weds Geetha 2 news)ಸಂಜು ವೆಡ್ಸ್ ಗೀತಾ ಸಿನಿಮಾ ಭಾಗ 1 ವ್ಯಾಪಕ ಅಭಿಮಾನಿಗಳ ಮನಸ್ಸಲ್ಲಿ ಪ್ರೀತಿ ಮುಂಗಾರ ಮಳೆ ಹರಿಸಿದ್ದು ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದರ ಹಾಡು ಕೂಡ ಹಿಟ್ ಆಗಿತ್ತು.
ಹತ್ತು ವರುಷಗಳ ಬಿಡುವಿನ ನಂತರ ಸಿನಿಮಾದ ಭಾಗ 2ರನ್ನು ಚಿತ್ರೀಕರಿಸಿ ಎರಡು ತಿಂಗಳ ಹಿಂದೆಯೇ ತೆರೆ ಕೂಡ ಖಂಡಿತು.
ಆದರೆ ಈಗ ಈ ಸಿನಿಮಾಕ್ಕೆ ಹೊಸ ತಲೆನೋವೊಂದು ತಲೆದೋರಿದೆ. ಸಂಜು ವೆಡ್ಸ್ ಗೀತಾ-2 ಚಿತ್ರದ ಪ್ರಚಾರಕ್ಕೆ ಬಾರದಂತ ನಟಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ನೀಡಲಾಗಿದೆ.
ಫಿಲ್ಮ್ ಚೇಂಬರ್ ಗೆ ತೆರಳಿದಂತ ಸಂಜು ವೆಡ್ಸ್ ಗೀತಾ-2 ನಿರ್ದೇಶಕ ನಾಗಶೇಖರ್, ನಟ ಶ್ರೀನಗರ ಕಿಟ್ಟಿಯವರು ನಟಿ ರಚಿತಾ ರಾಮ್ ವಿರುದ್ಧ ದೂರು ನೀಡಿದ್ದಾರೆ.
ಸಂಚು ವೆಡ್ಸ್ ಗೀತಾ-2 ಚಿತ್ರದ ಪ್ರಚಾರ ಕಾರ್ಯವನ್ನು ಮಾಡಲಾಗುತ್ತಿದೆ.
ಆದರೆ ನಟಿ ರಚಿತಾರಾಮ್ ಮಾತ್ರ ಪ್ರಚಾರಕ್ಕೆ ಬರುತ್ತಿಲ್ಲ. ಹೀಗಾಗಿ ನಾವು ಇಂಥ ಕಲಾವಿದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಸಿನಿಮಾ ಪ್ರಚಾರಕ್ಕೆ ಒಂಚೂರು ಸಹಕಾರ ಕೊಟ್ಟಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಭಾಗ 2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ , ಚೇತನ್ ಚಂದ್ರ ಮತ್ತು ರಾಗಿಣಿ ದ್ವಿವೇದಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಛಲವಾದಿ ಕುಮಾರ್ ನಿರ್ಮಿಸಿರುವ ಈ ಚಿತ್ರದ ಸಂಗೀತವನ್ನು ಶ್ರೀಧರ್ ವಿ. ಸಂಭ್ರಮ್ ಸಂಯೋಜಿಸಿದ್ದಾರೆ ಮತ್ತು ಛಾಯಾಗ್ರಹಣ ಸತ್ಯ ಹೆಗ್ಡೆ ನಿರ್ವಹಿಸಿದ್ದಾರೆ ಎಂದು ತಿಳಿದು ಬಂದಿದೆ.ಈ ಸಿನಿಮಾ ಹೈ ಬಜೆಟ್ ಸಿನಿಮಾ ಆಗಿದ್ದು ಸ್ವಿಜರ್ಲೆಂಡ್ ನಲ್ಲಿ ಶೂಟಿಂಗ್ ಮಾಡಲಾಗಿತ್ತು.
ವಿವಿಧ ಬ್ಯೂಟಿ ಸ್ಪಾಟ್ ಗಳಲ್ಲಿ ರೋಮ್ಯಾಂಟಿಕ್ ಸೀನ್ ತೆಗೆಯಲಾಗಿತ್ತು.