
ಫಲಿತಾಂಶ ಕಳಪೆ: ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ಬಿಸಿ,ವೇತನಾನುದಾನ ಕಡಿತ ಭೀತಿ Karnataka Education Effect
ಬೆಂಗಳೂರು: ( Karnataka Education Effect )ದೇಶದ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳಿಂದಲೂ ಕೊಡುಗೆ ಇದ್ದು ವಿಧ್ಯಾರ್ಥಿಗಳು ಪ್ರತಿಷ್ಠೆ ಮತ್ತು ಗುಣಮಟ್ಟದ ಶಿಕ್ಷಣ ಪಡೆಯುವ ಉದ್ದೇಶದಿಂದ ಖಾಸಗಿ ಶಾಲಾ ಮೊರೆ ಹೋಗುತ್ತಿದ್ದಾರೆ.
ಈ ನಡುವೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸತತ 2 ವರ್ಷಗಳಿಂದ ನಿರೀಕ್ಷಿತ ಫಲಿತಾಂಶ ಬಾರದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆಯು ಇದೀಗ ಅನುದಾನಿತ ಶಾಲಾ ಶಿಕ್ಷಕರಿಗೆ, ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯನ್ನು ಎಚ್ಚರಿಸಿದೆ. ಫಲಿತಾಂಶ ಕಳಪೆ ಮತ್ತು ಕರ್ತವ್ಯ ಪಾಲನೆ ಬಗ್ಗೆ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಈ ಬಾರಿಯ ಎಸೆಸೆಲ್ಸಿಯಲ್ಲಿ ಶೇ. 62.14 ಫಲಿತಾಂಶ ಬಂದಿತ್ತು. ಅನುದಾನಿತ ಶಾಲೆಗಳ ಒಟ್ಟು ಫಲಿತಾಂಶ ಶೇ. 58.97 ಮಾತ್ರವಿದ್ದರೆ, ಸರಕಾರಿ ಶಾಲೆಗಳು ಶೇ. 62.7 ಮತ್ತು ಖಾಸಗಿ ಶಾಲೆಗಳು ಶೇ. 75.59 ಫಲಿತಾಂಶ ಪಡೆದಿವೆ. ಈ ಫಲಿತಾಂಶವನ್ನು ಹೋಲಿಸಿದಾಗ ಅನುದಾನಿತ ಶಾಲೆಗಳಲ್ಲಿ ಫಲಿತಾಂಶ ಕಡಿಮೆ ಬಂದಿದೆ. ಈ ಹಿನ್ನೆಲೆಯಲ್ಲಿ ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳ ಮೇಲೆ ಈ ಕ್ರಮಕ್ಕೆ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.
(karnataka education effect) ಶಾಲೆಗೆ 3 ವರ್ಷಗಳಲ್ಲಿ ವಿಷಯ ಶಿಕ್ಷಣದಲ್ಲಿ ಕಡಿಮೆ ಫಲಿತಾಂಶ ಬಂದರೆ ಕ್ರಮ ಕೈಗೊಳ್ಳಬೇಕು.
ಸತತ 5 ವರ್ಷ ಶೇ. 50 ಫಲಿತಾಂಶ ಬಾರದ ಶಾಲೆಗೆ ಅನುದಾನವೇ ಬಂದ್ ಮಾಡಲಾಗುತ್ತದೆ.
2 ವರ್ಷಗಳಿಂದ ನಿರೀಕ್ಷಿತ ಫಲಿತಾಂಶ ಬಾರದ್ದರಿಂದ ಸರಕಾರದಿಂದ ಕ್ರಮ ಕೈಗೊಳ್ಳಲಾಗುವುದು.
ಸತತ 5 ವರ್ಷಗಳಲ್ಲಿ ಶೇ. 50ರಷ್ಟು ಫಲಿತಾಂಶ ಬಾರದ ಶಾಲೆಗಳ ಅನುದಾನವನ್ನು ತಡೆಹಿಡಿಯುವುದು. ಖಾಲಿ ಹುದ್ದೆಗೆ ನೇಮಕವಾಗಿರುವ ವಿಷಯ ಶಿಕ್ಷಕರ ವಿಷಯದಲ್ಲಿ ಶೇ. 60ರಷ್ಟು ಫಲಿತಾಂಶ ಬಾರದೇ ಇದ್ದರೆ ಶಿಕ್ಷಕರ ವಾರ್ಷಿಕ ವೇತನವನ್ನು ತಡೆಹಿಡಿಯುವುದು. 3 ವರ್ಷ ಸತತವಾಗಿ ಫಲಿತಾಂಶ ಕಡಿಮೆ ಬಂದರೆ ವೇತನಾನುದಾನ ಕಡಿತ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ. ಶಾಲಾ ಮುಖ್ಯಸ್ಥರಿಂದ ಲಿಖಿತ ಸಮಜಾಯಿಷಿಯನ್ನು 7 ದಿನಗಳೊಳಗಾಗಿ ಶಾಲಾ ಶಿಕ್ಷಣ ಇಲಾಖೆ ಕಚೇರಿಗೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಆಯುಕ್ತ ಡಾ. ತ್ರಿಲೋಕಚಂದ್ರ ಕೆ.ವಿ. ನೋಟಿಸ್ನಲ್ಲಿ ಸೂಚಿಸಿದ್ದಾರೆ. ಸದ್ಯ ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ಶೇಕಡಾ ಫಲಿತಾಂಶ ಬಗ್ಗೆ ಬಿಸಿ ಮುಟ್ಟಿದ್ದು ಮಕ್ಕಳ ಶಿಕ್ಷಣದ ಗುಣಮಟ್ಟಕ್ಕೆ ಮತ್ತು ಫಲಿತಾಂಶದ ಹಿಂದೆ ಬೀಳಬೇಕಾಗಿದೆ.