
ತಲೆ ಮೇಲೆ ಬಿದ್ದ ಕೊಂಬೆ: ಕೋಮಾದಲ್ಲಿದ್ದ ಅಕ್ಷಯ್ ಗೆ ಹೃದಯ ಸ್ತಂಭನ, ಫಲಿಸಲಿಲ್ಲ ಹೆತ್ತವರ ಪೂಜೆ: Akshay Shivaram
ಬೆಂಗಳೂರು: Akshay Shivaraman ವಿಧಿ ಯಾವಾಗ? ಹೇಗೆ ಬರುತ್ತದೆ ಎಂದು ಗೊತ್ತಾಗಲ್ಲ. ಯುವಕರು ಹೃದಯಘಾತಕ್ಕೆ ಬಲಿಯಾದರೆ, ಸಾಕಷ್ಟು ಜನ ವಿವಿಧ ಕಾರಣಗಳಲ್ಲಿ ಇಹಲೋಕ ತ್ಯಜಿಸುತ್ತಿದ್ದಾರೆ. ಮೊನ್ನೆ ಬಂದ ಗಾಳಿ ಮಳೆಯಿಂದ ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ಮರದ ಕೊಂಬೆ ಬೈಕ್ ಸವಾರನ ಮೇಲೆ ಮುರಿದು ಬಿದ್ದ ಪರಿಣಾಮ ಅಕ್ಷಯ್ ಎಂಬ ಯುವಕನ ತಲೆಗೆ ಗಂಭೀರವಾದ ಗಾಯವಾಗಿದ್ದು, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.
ಆದರೆ ಇಂದು ಆತ ಹೃದಯಸ್ಥಂಭನದಿಂದ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬೈಕ್ ಸವಾರ ಅಕ್ಷಯ್ (Akshay Shivaram) ತಂದೆಯ ಹುಟ್ಟು ಹಬ್ಬ ಆಚರಿಸಲೆಂದು ಮಟನ್ ತರಲು ರಸ್ತೆಯಲ್ಲಿ ಬರುತ್ತಿದ್ದ ಆ ಸಂದರ್ಭದಲ್ಲಿ ಮರದಲ್ಲಿ ಅವಿತ ಜವರಾಯ ಕೊಂಬೆ ಮುರಿದು ಬೀಳಿಸಿದ ಪರಿಣಾಮ ಆತ ಗಂಭೀರ ಗಾಯಗೊಂಡಿದ್ದ. ತೀವ್ರ ರಕ್ತಸ್ರಾವದಿಂದ ಬಳಲಿದ್ದ ಆತನ ತಲೆಗೆ ಶಸ್ತ್ರ ಚಿಕಿತ್ಸೆ ಸಹ ಮಾಡಲಾಗಿತ್ತು.
ಆದ್ರೆ, ಅಕ್ಷಯ್ ಬ್ರೈನ್ ಡೆಡ್ ಆಗಿದೆ ಎನ್ನುವ ಮಾಹಿತಿ ತಿಳಿದುಬಂದಿತ್ತು, ದೇವರ ಮೇಲೆ ಭಾರ ಹಾಕಿ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ನಿನ್ನೆ ಅಕ್ಷಯ್ ಅವರ ತಾತ ಅಜ್ಜಿ ಮೊಮ್ಮಗ ಉಳಿಯಲಿ, ಆಯಸ್ಸು ಗಟ್ಟಿಯಾಗಲಿ ಎಂದು ಸೀತಾ ಸರ್ಕಲ್ ನಲ್ಲಿರೋ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಜಯ ಮೃತ್ಯುಂಜಯ ಹೋಮ ಕೂಡ ಮಾಡಿಸಿದ್ದರು.
ಆದರೆ ಇಂದು ಹೃದಯ ಸ್ತಂಭನದಿಂದ ಅಕ್ಷಯ್ ಸಾವನ್ನಪ್ಪಿದ್ದಾನೆ.

ಜೂನ್ 15ರಂದು ಮರದ ಕೊಂಬೆ ಬಿದ್ದು ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದ. ಆದರೆ ಇಂದು ಮಧ್ಯಾಹ್ನ 1.15ಕ್ಕೆ ಅಕ್ಷಯ್ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾನೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.