Back To Top

 ನೀರಿನ ಗುಂಡಿಯಲ್ಲಿ ಮುಳುಗಿಸಿ ಮಗಳನ್ನು ಹತ್ಯೆ ಮಾಡಿದ ತಾಯಿ

ನೀರಿನ ಗುಂಡಿಯಲ್ಲಿ ಮುಳುಗಿಸಿ ಮಗಳನ್ನು ಹತ್ಯೆ ಮಾಡಿದ ತಾಯಿ

ಹೆತ್ತಮ್ಮನೆ ಮಗಳ ಪಾಲಿಗೆ ವಿಲನ್ ಆಗಿದ್ದಾಳೆ. ಪ್ರೀತಿಯ ಪುತ್ರಿ ಎಂಬುದನ್ನು ನೋಡದೆ ಕೊಂದು ಹಾಕಿದ್ದಾಳೆ. ರಾಕ್ಷಸಿ ತಾಯಿಯ ವರ್ತನೆಗೆ ಇಡೀ ಕರ್ನಾಟಕ ಬೆಚ್ಚಿಬಿದ್ದಿದೆ.

ಹಾಸನ : ಹೆತ್ತಮ್ಮನೆ ಮಗಳ ಪಾಲಿಗೆ ವಿಲನ್ ಆಗಿದ್ದಾಳೆ. ಪ್ರೀತಿಯ ಪುತ್ರಿ ಎಂಬುದನ್ನು ನೋಡದೆ ಕೊಂದು ಹಾಕಿದ್ದಾಳೆ. ರಾಕ್ಷಸಿ ತಾಯಿಯ ವರ್ತನೆಗೆ ಇಡೀ ಕರ್ನಾಟಕ ಬೆಚ್ಚಿಬಿದ್ದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಕೊಪ್ಪಲಿನಲ್ಲಿ ತಾಯಿಯೇ ಮಗಳನ್ನು ಹತ್ಯೆ ಮಾಡಿದ್ದಾಳೆ. ಸಾನ್ವಿ (6) ಕೊಲೆಯಾದ ಬಾಲಕಿ ಎಂದು ಗುರುತಿಸಲಾಗಿದೆ. ಶ್ವೇತಾ ಎಂಬ ಮಹಿಳೆಯೇ ಆರೋಪಿಯಾಗಿದ್ದಾಳೆ. ಮಗಳನ್ನು ಬೆಳಿಗ್ಗೆ ತೋಟಕ್ಕೆ ಕರೆದೊಯ್ದು ನೀರಿನ ಗುಂಡಿಯಲ್ಲಿ ಮುಳುಗಿಸಿ ಕಾಲಿನಿಂದ ತುಳಿದು ಸಾಯಿಸಿದ್ದಾಳೆ ಎನ್ನಲಾಗಿದೆ. ಸಣ್ಣ ಗುಂಡಿಯಲ್ಲಿ ಸಾನ್ವಿ ಮೃತದೇಹ ಸಿಕ್ಕಿದ್ದು, ಪತಿಯ ಜತೆ ಮಗಳು ಹೋಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿರೋದಾಗಿ ಶ್ವೇತಾ ತಪ್ಪೊಪ್ಪಿಕೊಂಡಿದ್ದಾಳೆ. 2018ರಲ್ಲಿ ಶಿವಮೊಗ್ಗ ಮೂಲದ ರಘು ಜತೆ ಶ್ವೇತಾ ಮದುವೆ ಆಗಿತ್ತು. ಎರಡು ವರ್ಷಗಳಲ್ಲೇ ದಂಪತಿಗಳ ನಡುವೆ ಕಲಹ ಏರ್ಪಟ್ಟಿತ್ತು. ಕಳೆದ ನಾಲ್ಕು ವರ್ಷಗಳಿಂದ ಶ್ವೇತಾ ತನ್ನ ಪತಿಯಿಂದ ದೂರವಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಶ್ವೇತಾಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಇದನ್ನು ಓದಿ:

https://infomindz.in/rss-vijayothsava-durantha-parihara-motta-25-laksha-rupi/
Prev Post

ಪ್ರಿಯಕರನಿಂದಲೇ ಪ್ರಿಯತಮೆ ಬರ್ಬರ ಹತ್ಯೆ

Next Post

9 ವರ್ಷದ ಬಾಲಕಿಯೊಬ್ಬಳ ಶವ ಸೂಟ್‌ಕೇಸ್‌ನಲ್ಲಿ ಪತ್ತೆ

post-bars

Leave a Comment

Related post