Back To Top

 ದಂಪತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಪತಿ ಕೊಂದ ಪತ್ನಿ ಸತ್ಯ ಬಹಿರಂಗ
June 9, 2025

ದಂಪತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಪತಿ ಕೊಂದ ಪತ್ನಿ ಸತ್ಯ ಬಹಿರಂಗ

ಹನಿಮೂನ್(Honeymoon)ಗೆಂದು ಮೇಘಾಲಯಕ್ಕೆ ಹೋದ ಇಂದೋರ್ನ ದಂಪತಿ ಕಾಣೆಯಾಗಿದ್ದರು. ಎರಡು ತ್ತರ ಪ್ರದೇಶ, ಜೂನ್ 09: ಹನಿಮೂನ್(Honeymoon)ಗೆಂದು ಮೇಘಾಲಯಕ್ಕೆ ಹೋದ ಇಂದೋರ್ನ ದಂಪತಿ ಕಾಣೆಯಾಗಿದ್ದರು.

ಉತ್ತರ ಪ್ರದೇಶ: ಹನಿಮೂನ್(Honeymoon)ಗೆಂದು ಮೇಘಾಲಯಕ್ಕೆ ಹೋದ ಇಂದೋರ್ನ ದಂಪತಿ ಕಾಣೆಯಾಗಿದ್ದರು. ಎರಡು ತ್ತರ ಪ್ರದೇಶ, ಜೂನ್ 09: ಹನಿಮೂನ್(Honeymoon)ಗೆಂದು ಮೇಘಾಲಯಕ್ಕೆ ಹೋದ ಇಂದೋರ್ನ ದಂಪತಿ ಕಾಣೆಯಾಗಿದ್ದರು. ಎರಡು ದಿನಗಳ ಬಳಿಕ ಪತಿ ರಾಜಾ ರಘುವಂಶಿ ಶವ ಪತ್ತೆಯಾಗಿತ್ತು. ಅದು ಕ್ರಿಮಿನಲ್ಸ್ಗಳಿರುವ ಪ್ರದೇಶ ಹೀಗಾಗಿ ಯಾರೋ ಇಬ್ಬರಿಗೂ ಏನೋ ಮಾಡಿರಬಹುದು ಎಂದು ಊಹಿಸಲಾಗಿತ್ತು. ಬಳಿಕ ಪತಿ ರಾಜಾ ರಘುವಂಶಿ ಶವ ಪತ್ತೆಯಾಗಿತ್ತು. ಅದು ಕ್ರಿಮಿನಲ್ಸ್ಗಳಿರುವ ಪ್ರದೇಶ ಹೀಗಾಗಿ ಯಾರೋ ಇಬ್ಬರಿಗೂ ಏನೋ ಮಾಡಿರಬಹುದು ಎಂದು ಊಹಿಸಲಾಗಿತ್ತು. ಆದರೆ ಇದೆಲ್ಲವೂ ಪತ್ನಿ ಸೋನಮ್ ಪ್ಲ್ಯಾನ್ ಎಂಬುದು ಇದೀಗ ತಿಳಿದುಬಂದಿದೆ. ಸೋನಮ್ ತನ್ನ ಪತಿಯನ್ನು ಕೊಲೆ ಮಾಡಲು ಮೂವರನ್ನು ನೇಮಿಸಿಕೊಂಡಿದ್ದಳು ಎನ್ನುವ ಸತ್ಯ ಬಹಿರಂಗಗೊಂಡಿದೆ. ಸೋನಮ್ ಸೇರಿ ಮೂವರನ್ನು ಉತ್ತರ ಪ್ರದೇಶದ ಗಾಜಿಪುರದಲ್ಲಿ ಬಂಧಿಸಲಾಗಿದೆ.

ರಾಜಾ ರಘುವಂಶಿ ಹತ್ಯೆಗೆ ಕಾರಣವೇನು?

ಸೋನಮ್ಗೆ ಬೇರೆಯೊಬ್ಬರ ಜತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಪತಿಯನ್ನು ಕೊಲೆ ಮಾಡಲು ಬಯಸಿದ್ದಳು. ಈ ಹನಿಮೂನ್ ಟ್ರಿಪ್ನ್ರಾ ಜಾನನ್ನು ಕೊಲ್ಲುವುದಕ್ಕಾಗಿಯೇ ಪ್ಲ್ಯಾನ್ ಮಾಡಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. ಸೋನಮ್ ಪೊಲೀಸರಿಗೆ ಶರಣಾಗಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮೇಘಾಲಯದ ಉಪ ಪೊಲೀಸ್ ಮಹಾನಿರ್ದೇಶಕ ಡೇವಿಸ್ ಮರಕ್ ಇಂಡಿಯಾ ಟುಡೇಗೆ ಸಂದರ್ಶನ ನೀಡಿದ್ದಾರೆ ಅದರಲ್ಲಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಒಂದು ನಿರ್ದಯ ಕೊಲೆಯಾಗಿದ್ದು, ರಾಜಾನನ್ನು ಕೊಲ್ಲಲು ಈ ಪ್ರವಾಸವನ್ನು ಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ನಂತರ, ವಿವಾಹೇತರ ಸಂಬಂಧವೇ ಪ್ರಾಥಮಿಕ ಉದ್ದೇಶವೆಂದು ತೋರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಸೋನಂ ಘಾಜಿಪುರದ ನಂದಗಂಜ್‌ನಲ್ಲಿರುವ ರಸ್ತೆ ಬದಿಯ ಹೋಟೆಲ್ ಬಳಿ ತಲುಪಿ, ತನ್ನ ಸಹೋದರನಿಗೆ ಆ ಉಪಾಹಾರ ಗೃಹದ ಮಾಲೀಕರ ಸಂಖ್ಯೆಯಿಂದ ಕಾಲ್ ಮಾಡಿದ್ದಳು.ಆಕೆಯ ಸಹೋದರ ಕೂಡಲೇ ಇಂದೋರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಜತೆಗೆ ಹೋಟೆಲ್ ಮಾಲೀಕರು ಕೂಡ 112ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಪೊಲೀಸರ ತಂಡ ಧಾವಿಸಿತ್ತು.ಬಳಿಕ ಅವರನ್ನು ಬಂಧಿಸಿತ್ತು. ಬಂಧನದ ನಂತರ, ಸೋನಮ್ ರಘುವಂಶಿ ಅವರ ಮೊದಲ ಚಿತ್ರ ಹೊರಬಿದ್ದಿದೆ. ಅದರಲ್ಲಿ ಅವರು ಅಸಹಾಯಕರಾಗಿರುವಂತೆ ಕಾಣುತ್ತಿದ್ದಾರೆ. ಸೋನಮ್ ಕಪ್ಪು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದಾರೆ. ಸೋನಮ್ ಅವರ ಮುಖದಲ್ಲಿ ಅಸಹಾಯಕತೆ ಗೋಚರಿಸುತ್ತಿದೆ. ಸೋನಮ್ ಅವರನ್ನು ಮರಳಿ ಕರೆತರಲು ಕುಟುಂಬವು ಘಾಜಿಪುರಕ್ಕೆ ತೆರಳಿದೆ.

ಮೇ 22 ರಂದು ದಂಪತಿ ಕಾಣೆಯಾಗುವ ಒಂದು ದಿನ ಮೊದಲು ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಲಾಗಿತ್ತು . ಅಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಶಿಲ್ಲಾಂಗ್‌ನಲ್ಲಿ ಸಾಮಾನ್ಯವಾಗಿ ಪರಸ್ಪರ ಮಾತನಾಡುತ್ತಿರುವುದನ್ನು ಕಾಣಬಹುದು.ಜೂನ್ 2 ರಂದು ಶಿಲ್ಲಾಂಗ್‌ನಲ್ಲಿರುವ ಅವರ ಹೋಂಸ್ಟೇಯಿಂದ 20 ಕಿಲೋಮೀಟರ್ ದೂರದಲ್ಲಿರುವ ಚಿರಾಪುಂಜಿ ಪ್ರದೇಶದಲ್ಲಿ ರಾಜಾ ಶವ ಪತ್ತೆಯಾಗಿತ್ತು. ಇನ್ನೂ ಕೊಲೆಯ ಬಗ್ಗೆ ಸಂಪುರ್ಣ ಮಾಹಿತಿ ಹೊರಬರಬೇಕಿದೆ.

ಇದನ್ನು ಓದಿ:

https://infomindz.in/prathi-jillege-20-rinda-25-electrick-bus-needalu-chinthane/
Prev Post

ಪಡಿತರ ಚೀಟಿ: ದೈನಂದಿನ 10 ಅಗತ್ಯ ವಸ್ತುಗಳು ಉಚಿತ ವಿತರಣೆ

Next Post

ಪ್ರಿಯಕರನಿಂದಲೇ ಪ್ರಿಯತಮೆ ಬರ್ಬರ ಹತ್ಯೆ

post-bars

Leave a Comment

Related post