ನನ್ನ ಯೌವನ, ನನ್ನ ಶ್ರೇಷ್ಠತೆ ಮತ್ತು ನನ್ನ ಅನುಭವ ಎಲ್ಲವನ್ನು ತಂಡಕ್ಕೆ ನೀಡಿದ್ದೇನೆ: ವಿರಾಟ್ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕನಸು ಕೊನೆಗೂ ನನಸಾಗಿದೆ. ದೀರ್ಘ ಕಾಯುವಿಕೆ ಮುಗಿದಿದೆ. 18ನೇ ಆವೃತ್ತಿಯ IPL ವಿಜೇತ ತಂಡವಾಗಿ ಆರ್ಸಿಬಿ ಹೊರಹೊಮ್ಮಿದ್ದು, ತಮ್ಮ ಮೊದಲ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕನಸು ಕೊನೆಗೂ ನನಸಾಗಿದೆ. ದೀರ್ಘ ಕಾಯುವಿಕೆ ಮುಗಿದಿದೆ. 18ನೇ ಆವೃತ್ತಿಯ IPL ವಿಜೇತ ತಂಡವಾಗಿ ಆರ್ಸಿಬಿ ಹೊರಹೊಮ್ಮಿದ್ದು, ತಮ್ಮ ಮೊದಲ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಆರ್ಸಿಬಿ ರೋಚಕ ಗೆಲುವು ದಾಖಲಿಸಿ, ಈ ಇತಿಹಾಸ ಬರೆದಿದೆ. ಪಂದ್ಯದ ನಂತರ ಆಸ್ಟ್ರೇಲಿಯಾ ದಿಗ್ಗಜ ಮ್ಯಾಥ್ಯೂ ಹೇಡನ್ ಜೊತೆ ಮಾತನಾಡಿದ ಕೊಹ್ಲಿ, ನನ್ನ ಯೌವನ, ನನ್ನ ಶ್ರೇಷ್ಠತೆ ಮತ್ತು ನನ್ನ ಅನುಭವ ಎಲ್ಲವನ್ನು ಈ ತಂಡಕ್ಕೆ ನೀಡಿದ್ದೇನೆ. ಇದು ನನಗೆ ತುಂಬಾ ಅರ್ಥಪೂರ್ಣವಾಗಿದೆ. ನಾನು ಹೇಳಿದಂತೆ, ನನ್ನ ಪ್ರತಿಯೊಂದು ಶಕ್ತಿಯನ್ನು ಈ ತಂಡಕ್ಕೆ ನೀಡಿದ್ದೇನೆ ಮತ್ತು ಅಂತಿಮವಾಗಿ ನಾವು ಐಪಿಎಲ್ ಗೆದ್ದಿದ್ದೇವೆ. ಇದು ಅದ್ಭುತ ಭಾವನೆ ಎಂದು ಕೊಹ್ಲಿ ಹೇಳಿದರು.
ಭಾರತೀಯ ತಂಡದೊಂದಿಗೆ ಗೆದ್ದ ಟ್ರೋಫಿಗಳೊಂದಿಗೆ ಐಪಿಎಲ್ ಟ್ರೋಫಿ ಗೆಲುವಿನ ಅನುಭವವನ್ನು ಹೋಲಿಸಲು ಕೇಳಿದಾಗ, 18 ವರ್ಷಗಳಿಂದ ನಾನು ಈ ತಂಡಕ್ಕೆ ಎಲ್ಲವನ್ನೂ ನೀಡಿದ್ದೇನೆ. ಏನೇ ಇರಲಿ, ನಾನು ಈ ತಂಡಕ್ಕೆ ನಿಷ್ಠನಾಗಿದ್ದೇನೆ. ನಾನು ಅವರೊಂದಿಗೆ (ಅಭಿಮಾನಿಗಳು ಮತ್ತು ತಂಡ) ನಿಂತಿದ್ದೆ. ಅವರು ನನ್ನ ಬೆನ್ನಿಗೆ ನಿಂತರು. ನಾನು ಯಾವಾಗಲೂ ಅವರೊಂದಿಗೆ ಈ ಕಪ್ ಗೆಲ್ಲುವ ಕನಸು ಕಂಡಿದ್ದೆ. ಬೇರೆಯವರೊಂದಿಗೆ ಗೆಲ್ಲುವುದಕ್ಕಿಂತ ಇದು ತುಂಬಾ ವಿಶೇಷವಾಗಿದೆ. ಏಕೆಂದರೆ ನನ್ನ ಹೃದಯ ಬೆಂಗಳೂರಿನೊಂದಿಗಿದೆ. ನನ್ನ ಆತ್ಮ ಬೆಂಗಳೂರಿನೊಂದಿಗಿದೆ ಮತ್ತು ನಾನು ಹೇಳಿದಂತೆ, ನಾನು ಐಪಿಎಲ್ ಆಡುವ ಕೊನೆಯ ದಿನದವರೆಗೂ ಆಡಲಿರುವ ತಂಡ ಇದು ಎಂದು ಕೊಹ್ಲಿ ಉತ್ತರಿಸಿದರು. ಇಂತಹ ದಿನ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ನಾನು ಭಾವನೆಗಳಿಂದ ತುಂಬಿಹೋದೆ. ಇದು ನನಗೆ ತುಂಬಾ ಅರ್ಥಪೂರ್ಣವಾಗಿದೆ. ನಾನು ಹೇಳಿದಂತೆ, ನನ್ನ ಪ್ರತಿಯೊಂದು ಶಕ್ತಿಯನ್ನು ಈ ತಂಡಕ್ಕೆ ನೀಡಿದ್ದೇನೆ ಮತ್ತು ಅಂತಿಮವಾಗಿ ಐಪಿಎಲ್ ಗೆದ್ದಿದ್ದೇನೆ, ಇದು ಅದ್ಭುತ ಭಾವನೆ ಎಂದು ಕೊಹ್ಲಿ ಹೇಳಿದರು. ಅಲ್ಲದೆ, ಇಂಪ್ಯಾಕ್ಟ್ ಆಟಗಾರನಾಗಿ ಆಡಲು ಬಯಸುವುದಿಲ್ಲ, ಮೈದಾನಕ್ಕೆ ಹೋಗಿ ಪ್ರಭಾವ ಬೀರುವುದು ತಮ್ಮ ಗುರಿ ಎಂದು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹೇಳಿದರು.
ಇದನ್ನು ಓದಿ: