ಲಿಫ್ಟ್ ನಲ್ಲಿ ಸಿಲುಕಿ ಪರದಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೆಲಕಾಲ ಲಿಫ್ಟ್ನಲ್ಲಿ ಸಿಲುಕಿ ಪರದಾಡಿದ ಘಟನೆ ಮೈಸೂರಿನ ಕರ್ನಾಟಕ ಮುಕ್ತ ವಿವಿಯಲ್ಲಿ ಇಂದು ನಡೆದಿದೆ.
ಮೈಸೂರು : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೆಲಕಾಲ ಲಿಫ್ಟ್ನಲ್ಲಿ ಸಿಲುಕಿ ಪರದಾಡಿದ ಘಟನೆ ಮೈಸೂರಿನ ಕರ್ನಾಟಕ ಮುಕ್ತ ವಿವಿಯಲ್ಲಿ ಇಂದು ನಡೆದಿದೆ.
ಕರ್ನಾಟಕ ಮುಕ್ತ ವಿವಿಯಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗವರ್ನರ್ ಅವರು ಲಿಫ್ಟ್ನಲ್ಲಿ ಸಿಲುಕುವಂತಾಯಿತು. ಓವರ್ ಲೋಡ್ನಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡು ಲಿಫ್ಟ್ ಕೈಕೊಟ್ಟ ಪ್ರಸಂಗ ನಡೆದಿದೆ.
ಲಿಫ್ಟ್ ಕೈಕೊಟ್ಟಿದ್ದರಿಂದ ರಾಜ್ಯಪಾಲರು ಮತ್ತವರೊಂದಿಗೆ ಇದ್ದ ಭದ್ರತಾ ಸಿಬ್ಬಂದಿ ಕೆಲಕಾಲ ಲಿಫ್ಟ್ನಲ್ಲೇ ಸಿಲುಕಿ ಸುಸ್ತಾದರು. ಕೂಡಲೇ ಕೆಲ ಸಿಬ್ಬಂದಿಯನ್ನು ಕೆಳಗಿಳಿಸಿದ ಬಳಿಕ ಲಿಫ್ಟ್ ಮತ್ತೆ ಚಾಲನೆಗೊಂಡಿತು. ನಂತರ ಗವರ್ನರ್ ಅವರು ಲಿಫ್ಟ್ ಸಹವಾಸವೇ ಬೇಡವೆಂದು ನಡೆದುಕೊಂಡು ಸಾಗಿದರು ಎಂದು ತಿಳಿದುಬಂದಿದೆ.