Back To Top

 ಹಾಸ್ಯ ನಟ ಮನು ಮಡೆನೂರು ವಿರುದ್ಧ ಲವ್, ಅತ್ಯಾಚಾರ ,ದೋಖಾ ಆರೋಪ
May 22, 2025

ಹಾಸ್ಯ ನಟ ಮನು ಮಡೆನೂರು ವಿರುದ್ಧ ಲವ್, ಅತ್ಯಾಚಾರ ,ದೋಖಾ ಆರೋಪ

ನಾಳೆ ರಿಲೀಸ್‌ ಆಗಬೇಕಿದ್ದ ಸಿನೆಮಾ ಕುಲದಲ್ಲಿ ಕೀಳ್ಯಾವುದೋ ಚಿತ್ರದಲ್ಲಿ ಮಡೆನೂರು ಮನು ನಟಿಸುತ್ತಿದ್ದರು.

ಬೆಂಗಳೂರು: ಸಾಂಡಲ್‌ವುಡ್ ನಟ, ಹಾಸ್ಯ ನಟ ಮನು ಮಡೆನೂರು ವಿರುದ್ಧ ಲವ್ ಸೆ*ಕ್ಸ್ ದೋಖಾ ಆರೋಪ ಕೇಳಿಬಂದಿದೆ. ಮದುವೆಯಾಗುವ ಭರವಸೆ ನೀಡಿ ಯುವತಿಗೆ ಮೂರು ವರ್ಷಗಳಿಂದ ಅತ್ಯಾ*ಚಾರ ಎಸಗಿದ ಆರೋಪ ಕೇಳಿಬಂದಿದೆ. ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಕಾಮಿಡಿ ಕಿಲಾಡಿ ಸೀಸನ್-೨’ ವಿಜೇತನಾಗಿದ್ದ ನಟ ಮನು ಅದೇ ರಿಯಾಲಿಟಿ ಶೋನಲ್ಲಿ ಪರಿಚಿತರಾದ ಸಹ ಕಲಾವಿದೆಯೊಂದಿಗೆ ಪ್ರೀತಿಯಲ್ಲಿ ತೊಡಗಿದ್ದರು.ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ನಂತರ ಮದುವೆಯಾಗುವುದಿಲ್ಲ ಎಂದು ಮೋಸ ಮಾಡಿದ ಆರೋಪದ ಮೇಲೆ ಯುವತಿ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಹ ನಟಿ ಮಾತ್ರವಲ್ಲದೆ ಇತರ ಮಹಿಳೆಯರ ಜೊತೆಗೆ ಕೂಡ ನಟ ಮನು ಅನೈತಿಕ ಸಂಬಂಧ ಹೊಂದಿದ್ದ. ಈ ಸಂಬಂಧವನ್ನು ಪ್ರಶ್ನಿಸಿದಾಗ ‘ಬ್ರೇಕಪ್’ ಎಂದು ನಿರ್ಲಕ್ಷ್ಯ ತೋರಿಸಿದ್ದಾನೆ. ಯುವತಿಗೆ ತಾಳಿ ಕಟ್ಟಿದರೂ ಮದುವೆಯಾಗದೆ ವಂಚನೆ ಮಾಡಿದ ಆರೋಪವೂ ಇದೆ. ‘ದಪ್ಪಗೆ ಇದ್ದೀಯಾ ನೀನು ಚೆನ್ನಾಗಿಲ್ಲ’ ಎಂದು ಅವಹೇಳನ ಮಾಡಿದ್ದನ್ನು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕುಲದಲ್ಲಿ ಕೀಳ್ಯಾವುದೋ ಚಿತ್ರ‌ನಟ ಮನು ವಿರುದ್ಧ ಲವ್ ಸೆ*ಕ್ಸ್ ದೋಖಾ ಆರೋಪ ಕೇಳಿಬಂದಿದ್ದು, 3 ವರ್ಷಗಳಿಂದ ಸಹ ಕಲಾವಿದೆ ಮೇಲೆ‌ ಅತ್ಯಾ*ಚಾರ ಎಸಗಿದ್ದಾನಂತೆ. ರಿಯಾಲಿಟಿ ಶೋ ನಲ್ಲಿ ಹೀರೋ ತರ ಮಿಂಚಿ ವಿನ್ನರ್ ಆದ ಮನು ರಿಯಲ್‌ ಲೈಫ್ ನಲ್ಲಿ ಖಳನಾಯಕನಾದ. 2018ರಲ್ಲಿ ಇವರಿಬ್ಬರ ಮಧ್ಯೆ ಪರಿಚಯವಾಗಿದೆ. ನಾವಿಬ್ಬರೂ ಬಹಳ ಒಳ್ಳೆಯ ಪ್ರೆಂಡ್ಸ್ ಆಗಿದ್ದೆವು. 2022ರ ನವೆಂಬರ್‌ ನಲ್ಲಿ ಶಿಕಾರಿಪುರಕ್ಕೆ ಹಾಸ್ಯ ಕಾರ್ಯಕ್ರಮಕ್ಕೆ ಹೋಗಿದ್ದಾಗ ಹೊಟೇಲ್‌ ನಲ್ಲಿ ನಟ ಮನು ಬಲತ್ಕಾರ ಮಾಡಿದ್ದಾನೆ ಎಂದು ಸಹ ನಟಿ ಆರೋಪಿಸಿದ್ದಾರೆ. ಆ ಬಳಿಕ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ಅತ್ಯಾ*ಚಾರ ಮಾಡಿದ ಆರೋಪ ಕೇಳಿಬಂದಿದೆ.

ದೈಹಿಕ ಕಿರುಕುಳ, ಹಲ್ಲೆ ಹಾಗೂ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ FIR ದಾಖಲಾಗಿದೆ. ಆರೋಪಿ ಮನು ಪರಾರಿಯಾಗಿದ್ದು, ಅವನಿಗಾಗಿ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ನಟ ಮನುಗೆ ಈಗಾಗಲೇ ಮದುವೆಯಾಗಿ ಮಗುವಿದೆ ಎನ್ನಲಾಗಿದೆ. ಹಾಗಿದ್ದರೂ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ನಟಿಸುತ್ತಿದ್ದ ನಟಿಯನ್ನು ನಂಬಿಸಿ ಪ್ರೀತಿಸಿ, ಅತ್ಯಾ*ಚಾರ‌ ಎಸಗಿ ವಂಚನೆ ಮಾಡಿದ್ದಾನೆ. ಶಿಕಾರಿಪುರಕ್ಕೆ ಹೋಗಿದ್ದಾಗ ರಿಯಾಲಿಟಿ ಶೋ ವೇಳೆಯೇ ಅತ್ಯಾ*ಚಾರ ನಡೆದಿದೆ ಎಂದು ಯುವತಿ ಆರೋಪಿಸಿದ್ದಾಳೆ. ಅತ್ಯಾ*ಚಾರ ಎಸಗಿದ ಬಳಿಕ ದೂರು ಕೊಡುತ್ತೇನೆ ಎಂಬ ಭಯದಲ್ಲಿ ಮನೆಯಲ್ಲಿ‌ ತಾಳಿ ಕಟ್ಟಿದ್ದಾನೆ. ಸದ್ಯ FIR ದಾಖಲಿಸಿಕೊಂಡು ತನಿಖೆ ನಡೆಸ್ತಿರುವ ಪೊಲೀಸರು ಆರೋಪಿ ಮನುಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ನಾಳೆ ರಿಲೀಸ್‌ ಆಗಬೇಕಿದ್ದ ಸಿನೆಮಾ

ಇನ್ನು ಮಡೆನೂರು ಮನು ನಟಿಸಿದ್ದ ಕುಲದಲ್ಲಿ ಕೀಳ್ಯಾವುದೋ ಚಿತ್ರ ನಾಳೆ ಅಂದರೆ ಮೇ 23ರಂದು ರಿಲೀಸ್ ಆಗಬೇಕಿತ್ತು. ಅದಕ್ಕೂ ಮುನ್ನವೇ ಈ ಆರೋಪ ಕೇಳಿಬಂದಿದ್ದು, ಸದ್ಯ ಮನು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ.

ನಟಿ ನೀಡಿದ ದೂರಿನ ಸಾರಾಂಶ ಇಲ್ಲಿದೆ

ನಾನು ಈ ಹಿಂದೆ ಬನಶಂಕರಿ 3ನೇ ಹಂತ, ಕಾಮಾಕ್ಯ ಬೆಂಗಳೂರು ಇಲ್ಲಿ ಸುಮಾರು 5 ವರ್ಷಗಳ ಕಾಲ ವಾಸವಾಗಿದ್ದೆ. ಸದರಿ ನಾಗರಭಾವಿ ಬಾಡಿಗೆ ಮನೆಯನ್ನು ಮಡೆನೂರು ಮನುರವರೇ ಹುಡುಕಿ ಮಾಡಿಕೊಟ್ಟಿರುತ್ತಾರೆ. 2018ನೇ ಸಾಲಿನಲ್ಲಿ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಮಡೆನೂರು ಮನು ಎಂಬುವರು ನನಗೆ ಪರಿಚಯ ಆಗಿ ಇಬ್ಬರು ಸ್ನೇಹಿತರಾಗಿರುತ್ತೇವೆ. ಸದರಿ ಮಡೆನೂರು ಮನು ಈತನು ಈಗಾಗಲೇ ದಿವ್ಯಾ ಎಂಬುವರನ್ನು ಮದುವೆ ಆಗಿ ಅವರಿಗೆ ಒಂದು ಹೆಣ್ಣು ಮಗು ಇದೆ. 29-11-2022 ರಂದು ಶಿವಮೊಗ್ಗದ ಶಿಕಾರಿಪುರದಲ್ಲಿ ಒಂದು ಕಾರ್ಯಕ್ರಮ ಇದ್ದು, ಸದರಿ ಕಾರ್ಯಕ್ರಮಕ್ಕೆ ನನ್ನನ್ನು ಹಾಗೂ ಇತರೆ ಕಾಮಿಡಿ ನಟರನ್ನು ಕರೆದುಕೊಂಡು ಹೋಗಿ ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ ಮಾಡಿರುತ್ತಾನೆ. ಈ ಕಾರ್ಯಕ್ರಮ ಮುಗಿದ ಮೇಲೆ ನಾನು ಶಿಕಾರಿಪುರದ ಹೋಟೆಲ್ ರೂಮಿನಲ್ಲಿದ್ದಾಗ ನನಗೆ ಸಂಭಾವನೆ ನೀಡುವ ನೆಪದಲ್ಲಿ ರೂಮಿಗೆ ಬಂದು ನನ್ನ ಮೇಲೆ ಆತ್ಯಾಚಾರ ಮಾಡಿರುತ್ತಾನೆ. ಇದಾದ ಮೇಲೆ 2022ನೇ ಸಾಲಿನ ಡಿಸೆಂಬರ್ ನಲ್ಲಿ ನನ್ನ ಮನೆಗೆ ಬಂದು ನನ್ನ ವಿರೋಧದ ನಡುವೆ ನನಗೆ ತಾಳಿ ಕಟ್ಟಿರುತ್ತಾನೆ. ನಂತರ ಅದೇ ಮನೆಯಲ್ಲಿ ಮನು ನನ್ನ ಮೇಲೆ ಹಲವಾರು ಬಾರಿ ಆತ್ಯಾಚಾರ ಮಾಡಿರುತ್ತಾನೆ. ಈ ನಡುವೆ ನಾನು ಪ್ರೆಗ್ನೆಂಟ್ ಆಗಿದ್ದು, ಇದನ್ನು ತಿಳಿದ ಮನು ಮನೆಗೆ ಬಂದು ನನಗೆ ಗರ್ಭಪಾತ ಆಗುವ ಮಾತ್ರೆ ನೀಡಿ ನನಗೆ ಗರ್ಭಪಾತ ಮಾಡಿಸಿರುತ್ತಾನೆ.

ಇದಾದ ಮೇಲೆ ಮತ್ತೆ ನಾನು ಪ್ರೆಗ್ನೆಂಟ್ ಆಗಿದ್ದು, ಮತ್ತೆ ಅದೇ ರೀತಿ ನನಗೆ ಗರ್ಭಪಾತ ಮಾಡಿಸಿರುತ್ತಾನೆ. ನಂತರ ಮನು ರವರು ನನಗೆ ಈ ಮೇಲ್ಕಂಡ ಮನೆಯನ್ನು ಬಾಡಿಗೆಗೆ ಮಾಡಿ ಈ ಮನೆಯಲ್ಲಿಯೂ ಸಹ ನನ್ನ ಮೇಲೆ ಆತ್ಯಾಚಾರ ಮಾಡಿ ನನ್ನ ಖಾಸಗಿ ವಿಡಿಯೋವನ್ನು ಆತನ ಪೋನ್ನಲ್ಲಿ ರೆಕಾರ್ಡ್ ಮಾಡಿಕೊಂಡು ನನಗೆ ಹೊಡೆದು ಹಲ್ಲೆ ಮಾಡಿ ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿರುತ್ತಾನೆ.ಆತನು ಒಂದು ನಾಯಕ ನಟನಾಗಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದು, ಇದಕ್ಕೆ ನಾನು ಸುಮಾರು ಲಕ್ಷಾಂತರ ರೂಪಾಯಿಗಳನ್ನು ಮನುಗೆ ನೀಡಿರುತ್ತೇನೆ. ಆದ್ದರಿಂದ ಈ ರೀತಿ ನನ್ನ ಮೇಲೆ ಆತ್ಯಾಚಾರ ಮಾಡಿ, ಮದುವೆ ಮಾಡಿಕೊಂಡಂತೆ ನಾಟಕ ಮಾಡಿ, ನನಗೆ ಗರ್ಭಪಾತ ಮಾಡಿಸಿ ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದು, ಇದನ್ನು ಕೇಳಿದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿರುವ ಮಡೆನೂರು ಮನು ರವರ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರು ಇತ್ಯಾದಿ.

ಇದನ್ನು ಓದಿ:

https://infomindz.in/%e0%b2%b8%e0%b3%8b%e0%b2%ab%e0%b2%bf%e0%b2%af%e0%b2%be-%e0%b2%96%e0%b3%81%e0%b2%b0%e0%b3%87%e0%b2%b7%e0%b2%bf-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6-%e0%b2%b8/
Prev Post

ಮೆಡಿಕಲ್ ಶಾಪ್‌ ಸಿಬ್ಬಂದಿ ನಿರ್ಲಕ್ಷ್ಯ:ಹಲ್ಲು ನೋವಿನ ಬದಲು ಬೇರೆ ಔಷಧ ಸೇವಿಸಿ ಮಹಿಳೆ…

Next Post

ಶ್ರೀನಗರಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನಕ್ಕೆ ತಡೆಯಾದ ಹವಮಾನ: ಆಲಿಕಲ್ಲು ಮಳೆಯಿಂದ ಕೋನ್‌ಗೆ ಹಾನಿ

post-bars

Leave a Comment

Related post