Back To Top

 100ಕ್ಕೂ ಅಧಿಕ ಉಗ್ರರನ್ನು ಹೊಸಕಿ ಹಾಕಿದ ಭಾರತೀಯ ಸೇನೆ
May 12, 2025

100ಕ್ಕೂ ಅಧಿಕ ಉಗ್ರರನ್ನು ಹೊಸಕಿ ಹಾಕಿದ ಭಾರತೀಯ ಸೇನೆ

ಏ.22ರಂದು ನಡೆದ ಪಾಕ್ ಪೋಷಿತ ಉಗ್ರರ ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಉಗ್ರರನ್ನು ಹೊಸಕಿ ಹಾಕಲಾಗಿದೆ ಎಂದು ಏರ್ ಮಾರ್ಷಲ್ ಎಕೆ ಭಾರ್ತಿ ಅವರು ಮಾಹಿತಿ ನೀಡಿದರು.

ನವದೆಹಲಿ: ಏ.22ರಂದು ನಡೆದ ಪಾಕ್ ಪೋಷಿತ ಉಗ್ರರ ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಉಗ್ರರನ್ನು ಹೊಸಕಿ ಹಾಕಲಾಗಿದೆ ಎಂದು ಏರ್ ಮಾರ್ಷಲ್ ಎಕೆ ಭಾರ್ತಿ ಅವರು ಮಾಹಿತಿ ನೀಡಿದರು. ಮಿಲಿಟರಿ ಮಹಾ ನಿರ್ದೇಶಕರು (DGMO) ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಿಸಲಾಗಿದ್ದು, ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸಕ್ಕೆ ಭಾರತೀಯ ಸೇನೆ ತೆಗೆದುಕೊಂಡಿದ್ದು ಕೇವಲ 23 ನಿಮಿಷ. ಭಾರತ ಸೇನೆಯ ಅಬ್ಬರಕ್ಕೆ ಉಗ್ರರ 9 ನೆಲೆಗಳು ನಾಮಾವಶೇಷವಾಗಿವೆ. 100ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡಿದ್ದೇವೆ ಎಂದರು. ಉಗ್ರನೆಲೆಗಳನ್ನು ಗುರುತಿಸಿ ನಾಶ ಮಾಡಿದ್ದೇವೆ. ಕೆಲ ಉಗ್ರನೆಲೆಗಳನ್ನು ಈಗ ಸಂಪೂರ್ಣ ತೆರವು ಮಾಡಲಾಗಿದೆ. ಲಷ್ಕರ್ನ ಮುರಿಡ್ಕೆಯಲ್ಲಿ ಅಜ್ಮಲ್ ಕಸಬ್, ಡೇವಿಡ್ ಹೆಡ್ಲಿಯಂಥಾ ಉಗ್ರರನ್ನು ತಯಾರಿಸುತ್ತಿತ್ತು. ಆ ಉಗ್ರ ನೆಲೆ ಸಂಪೂರ್ಣ ನಾಶವಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದರು.

9 ಉಗ್ರನೆಲೆಗಳಲ್ಲಿ 100ಕ್ಕೂ ಉಗ್ರರ ಸಂಹಾರ ಮಾಡಿದ್ದೇವೆ. ಆ ಉಗ್ರರ ಪೈಕಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್, ಮುದಸ್ಸಿರ್ ಅಹ್ಮದ್ರನ್ನ ಹತ್ಯೆ ಮಾಡಿದ್ದೇವೆ. ಇವರು ಕಂದಹಾರ್ ಹೈಜಾಕ್, ಪುಲ್ವಾಮಾ ದಾಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. LOC ಯಲ್ಲೂ ಪಾಕಿಸ್ತಾನ ಕಿರಿಕ್ ಮಾಡಿತ್ತು. ಜನಸಾಮಾನ್ಯರನ್ನು ಗುರಿ ಮಾಡಿಕೊಂಡಿತ್ತು. ಅದಕ್ಕೆ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ ಪಿಓಕೆಯಲ್ಲಿದ್ದ ಗುರುದ್ವಾರವೊಂದರ ಮೇಲೆ ದಾಳಿ ನಡೆದಿದ್ದು, ಓರ್ವ ವ್ಯಕ್ತಿಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು. ಪಹಲ್ಗಾಮ್ ದಾಳಿ ಆತಂಕಕಾರಿಯಾಗಿತ್ತು. ಇದರ ಪ್ರತ್ಯುತ್ತರವಾಗಿ ಭಾರತೀಯ ಸೇನೆ ದಾಳಿ ಮಾಡಬೇಕಾಯಿತು. ನಿರ್ದಿಷ್ಟವಾಗಿ ಭಯೋತ್ಪಾದಕರ 9 ನೆಲೆಗಳನ್ನು ಉಡೀಸ್ ಮಾಡಲಾಗಿದೆ ಹೊರತು ಯಾವುದೇ ನಾಗರೀಕರನನ್ನು ಟಾರ್ಗೆಟ್ ಮಾಡಿಲ್ಲ. ಟಾರ್ಗೆಟ್ಗಳ ಮೇಲೆ ಮಾತ್ರ ದಾಳಿ ಮಾಡಿದ್ದೇವೆ ಎಂದು ಸೇನಾಧಿಕಾರಿಗಳು ಜಂಟಿಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದನ್ನು ಓದಿ:

https://infomindz.in/oparation-sindur-banglore-swadeshi-akash/
Prev Post

ವಿರಾಟ್‌ ಕೊಹ್ಲಿ ಟೆಕ್ಸ್ಟ್ ಕ್ರಿಕೆಟ್‌ಗೆ ವಿದಾಯ

Next Post

ಅಲ್ಲಿಂದ ಗುಂಡು ಬಂದರೆ, ಇಲ್ಲಿಂದ ಬಾಂಬ್ ಹೋಗಲಿ: ಪ್ರಧಾನಿ ನರೇಂದ್ರ ಮೋದಿ

post-bars

Leave a Comment

Related post