Back To Top

 ಯುನೈಟೆಡ್ ಸ್ಟೇಟ್ಸ್‌ಗಾಗಿ ಕೊಳಕು ಕೆಲಸ ಮಾಡುತ್ತಿರುವ ಪಾಕಿಸ್ತಾನ: ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಪ್ಪೊಪ್ಪಿಗೆ
April 25, 2025

ಯುನೈಟೆಡ್ ಸ್ಟೇಟ್ಸ್‌ಗಾಗಿ ಕೊಳಕು ಕೆಲಸ ಮಾಡುತ್ತಿರುವ ಪಾಕಿಸ್ತಾನ: ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಪ್ಪೊಪ್ಪಿಗೆ

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಆತಂಕಕಾರಿ ಹೇಳಿಕೆಯನ್ನು ನೀಡಿದ್ದಾರೆ. ಕಳೆದ ಮೂರು ದಶಕಗಳಿಂದ ಪಾಕಿಸ್ತಾನವು ಯುನೈಟೆಡ್ ಸ್ಟೇಟ್ಸ್‌ಗಾಗಿ ಕೊಳಕು ಕೆಲಸ ಮಾಡುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.

ಇಸ್ಲಾಮಾಬಾದ್: ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಆತಂಕಕಾರಿ ಹೇಳಿಕೆಯನ್ನು ನೀಡಿದ್ದಾರೆ. ಕಳೆದ ಮೂರು ದಶಕಗಳಿಂದ ಪಾಕಿಸ್ತಾನವು ಯುನೈಟೆಡ್ ಸ್ಟೇಟ್ಸ್‌ಗಾಗಿ ಕೊಳಕು ಕೆಲಸ ಮಾಡುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.
ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ, ತರಬೇತಿ, ಮತ್ತು ಹಣಕಾಸಿನ ನೆರವು ನೀಡುವ ದೀರ್ಘ ಇತಿಹಾಸವನ್ನು ಪ್ರಶ್ನಿಸಿದಾಗ ಅವರು ಈ ಹೇಳಿಕೆ ನೀಡಿದ್ದಾರೆ.
‘ನಾವು ಸುಮಾರು 3 ದಶಕಗಳಿಂದ ಅಮೆರಿಕಕ್ಕಾಗಿ ಮತ್ತು ಬ್ರಿಟನ್ ಸೇರಿದಂತೆ ಪಶ್ಚಿಮ ದೇಶಗಳಿಗಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ’ ಎಂದು ಅವರು ತಪ್ಪೊಪ್ಪಿಕೊಂಡಿದ್ದಾರೆ.
ಈ ಹೇಳಿಕೆಯು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಮಧ್ಯೆ ಬಂದಿದೆ. ಈ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದು, ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಆಸಿಫ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಎರಡೂ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದರಿಂದ, ಇಂತಹ ಸಂಘರ್ಷವು ವಿಶ್ವಕ್ಕೆ ಆತಂಕಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ, ಈ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಬಹುದು ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ಭಾರತವು ಈ ದಾಳಿಯನ್ನು ಕೃತಕವಾಗಿ ರೂಪಿಸಿದೆ ಎಂಬ ಆಧಾರರಹಿತ ಆರೋಪಗಳು ಹರಡಿವೆ. ಆಸಿಫ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ತಮ್ಮ ಸೇನೆಯು ಯಾವುದೇ ಸಂದರ್ಭಕ್ಕೂ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಭಾರತದಿಂದ ಯಾವುದೇ ದಾಳಿ ಆರಂಭವಾದರೆ, ನಾವು ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತೇವೆ. ಒಂದು ವೇಳೆ ಸರ್ವತೋಮುಖ ದಾಳಿಯಾದರೆ, ಸರ್ವತೋಮುಖ ಯುದ್ಧವೇ ಆಗುತ್ತದೆ,ಎಂದು ಅವರು ಎಚ್ಚರಿಸಿದ್ದಾರೆ.
ಈ ಸಂಭಾವ್ಯ ಸಂಘರ್ಷದ ಜಾಗತಿಕ ಪರಿಣಾಮದ ಬಗ್ಗೆ ಪ್ರಶ್ನಿಸಿದಾಗ, ಎರಡು ಪರಮಾಣು ಶಕ್ತಿಗಳ ನಡುವಿನ ಘರ್ಷಣೆ ಯಾವಾಗಲೂ ಆತಂಕಕಾರಿಯಾಗಿರುತ್ತದೆ. ಒಂದು ವೇಳೆ ವಿಷಯಗಳು ತಪ್ಪಾದರೆ, ಈ ಮುಖಾಮುಖಿಯ ದುರಂತದ ಫಲಿತಾಂಶವಾಗಬಹುದು, ಎಂದು ಆಸಿಫ್ ತಿಳಿಸಿದ್ದಾರೆ.

Prev Post

ಇಬ್ಬರು ಭಯೋತ್ಪಾದಕರ ನಿವಾಸ ಧ್ವಂಸಗೊಳಿಸಿದ ಭಾರತೀಯ ಸೇನೆ

Next Post

ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹಣಾಹಣಿ: ಗ್ರಾಹಕರಿಗೆ ಉಚಿತ ಬಿಯರ್ ಘೋಷಿಸಿದ ಪಬ್ ಮಾಲೀಕ

post-bars

Leave a Comment

Related post