Back To Top

 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಲ್ಲಿ ಮನಮೋಹಕ ಪ್ರದರ್ಶನ
April 15, 2025

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಲ್ಲಿ ಮನಮೋಹಕ ಪ್ರದರ್ಶನ

ಕ್ಯಾಪ್ಟನ್ ರಜತ್ ಪಾಟಿದಾರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಲ್ಲಿ ಮನಮೋಹಕವಾಗಿ ಪ್ರದರ್ಶನ ನೀಡುತ್ತಿದೆ. ರಾಜಸ್ಥಾನ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ಕಿಂಗ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಬ್ಯಾಟಿಂಗ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿ ತಂಡವನ್ನು ಗೆಲ್ಲಿಸಿದ್ದರು. ಸದ್ಯ ಗೆಲುವಿನ ಟ್ರ್ಯಾಕ್ಗೆ ಮರಳಿದ ಆರ್ಸಿಬಿಯ ಮುಂದಿನ ಮ್ಯಾಚ್ ಯಾವಾಗ, ಎಲ್ಲಿ ನಡೆಯಲಿದೆ?.

ಬೆಂಗಳೂರು: ಕ್ಯಾಪ್ಟನ್ ರಜತ್ ಪಾಟಿದಾರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಲ್ಲಿ ಮನಮೋಹಕವಾಗಿ ಪ್ರದರ್ಶನ ನೀಡುತ್ತಿದೆ. ರಾಜಸ್ಥಾನ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ಕಿಂಗ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಬ್ಯಾಟಿಂಗ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿ ತಂಡವನ್ನು ಗೆಲ್ಲಿಸಿದ್ದರು. ಸದ್ಯ ಗೆಲುವಿನ ಟ್ರ್ಯಾಕ್ಗೆ ಮರಳಿದ ಆರ್ಸಿಬಿಯ ಮುಂದಿನ ಮ್ಯಾಚ್ ಯಾವಾಗ, ಎಲ್ಲಿ ನಡೆಯಲಿದೆ?.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲಿ ಆರ್ಸಿಬಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು ಇದರಲ್ಲಿ 4 ಮ್ಯಾಚ್ಗಳಲ್ಲಿ ರೋಚಕ ಗೆಲುವು ಸಾಧಿಸಿದೆ. ಆದರೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಸೋಲುಂಡಿದೆ. ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ತವರಲ್ಲಿ ಮಕಾಡೆ ಮಲಗಿ ಅಭಿಮಾನಿಗಳಿಗೆ ಭಾರೀ ನಿರಾಸೆ ಮಾಡಿದೆ.
ತವರಿನಲ್ಲಿ ನಿರಾಸೆ ಮೂಡಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಪಂದ್ಯ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ. ತವರಲ್ಲಿ ನಡೆಯುವ ಪಂದ್ಯದ ಕುರಿತು ಆರ್ಸಿಬಿ ಅಭಿಮಾನಿಗಳು ಹೃದಯ ಗಟ್ಟಿ ಮಾಡಿಕೊಳ್ಳಬೇಕು. ಏಕೆಂದರೆ ಹೊರಗೆ ವೀರಾವೇಶದಿಂದ ಹೋರಾಡುವ ರಜತ್ ಪಡೆ, ಮನೆಯಂಗಳದಲ್ಲಿ ನೆಲ ಕಚ್ಚುತ್ತಿರುವುದು ಲಾಯಲ್ ಫ್ಯಾನ್ಸ್ಗೆ ಬೇಸರ ಮೂಡಿಸಿದೆ.
ಮುಂದಿನ ಪಂದ್ಯದ ಫಲಿತಾಂಶ ಆರ್ಸಿಬಿ ವಿರುದ್ಧ ಬರಬಹುದು ಅಥವಾ ಬಾರದೇ ಇರಬಹುದು. ಏಕೆಂದರೆ ಆರ್ಸಿಬಿ ಮುಂದಿನ ಮ್ಯಾಚ್ ಅನ್ನು ಏಪ್ರಿಲ್ 18 ರಂದು ಸಂಜೆ 7:30ಕ್ಕೆ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲಿದೆ. ಈಗಾಗಲೇ ಆರ್ಸಿಬಿ ಜೈಪುರದಿಂದ ಬೆಂಗಳೂರಿಗೆ ಬಂದು ಇಳಿದಿದೆ. ಹೈದ್ರಾಬಾದ್ ತಂಡಕ್ಕೆ ಪಂಜಾಬ್ ಕಿಂಗ್ಸ್ 246 ರನ್ಗಳ ಟಾರ್ಗೆಟ್ ಕೊಟ್ಟಂತಹ ತಂಡ. ಇನ್ನು ಆರ್ಸಿಬಿ ವಿರುದ್ಧ ಪಂಜಾಬ್ ಹೇಗೆ ಬ್ಯಾಟ್ ಬೀಸಬಹುದು ಎನ್ನುವುದು ಫ್ಯಾನ್ಸ್ ಊಹೆಗೆ ಬಿಟ್ಟದ್ದು.
ಏಪ್ರಿಲ್ 18 ರಂದು ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ಮುಗಿದ ನಂತರ ಇನ್ನೊಂದು ಪಂದ್ಯವನ್ನು ಇದೇ ಪಂಜಾಬ್ ಜೊತೆ ಆರ್ಸಿಬಿ ಆಡಲಿದೆ. ಆದರೆ ಈ ಪಂದ್ಯ ಏಪ್ರಿಲ್ 20 ರಂದು ಚಂಡೀಗಢದ ಮುಲ್ಲನ್ಪುರ್ ನಗರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ 3:30ಕ್ಕೆ ನಡೆಯಲಿದೆ. ಮುಂದಿನ ಎರಡು ಪಂದ್ಯಗಳು ಬ್ಯಾಕ್ ಟು ಬ್ಯಾಕ್ ಪಂಜಾಬ್ ಜೊತೆಯೇ ಆರ್ಸಿಬಿ ಸೆಣಸಾಟ ನಡೆಸಲಿದೆ.

ಇದನ್ನು ಓದಿ:

https://infomindz.in/thirupathi-mudi-samarpane-madida-nata-pavan-kalyan/
Prev Post

ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ

Next Post

ಹೊಸ ಕಾರು ಖರೀದಿಸಿದ ಕಾಂತಾರ ನಟ ರಿಷಬ್ ಶೆಟ್ಟಿ!

post-bars

Leave a Comment

Related post