ರಿಯಾಲಿಟಿ ಷೋಗಳ ಡಬಲ್ ಮೀನಿಂಗ್ ಗಳ ಬಗ್ಗೆ ನಟ ರವಿಚಂದ್ರನ್ ಬೇಸರ
ಚಲನಚಿತ್ರಗಳಲ್ಲಿ ಹಾಸ್ಯ ಎಂದರೆ ಡಬಲ್ ಮೀನಿಂಗ್ ಎನ್ನುವಂಥ ಕಾಲ ಬಂದು ಅದೆಷ್ಟೋ ವರ್ಷಗಳೇ ಆಗಿಬಿಟ್ಟಿವೆ. ಅದನ್ನು ನೋಡಿ ಎಂಜಾಯ್ ಮಾಡುವ ಪ್ರೇಕ್ಷಕರೂ ಇದ್ದಾರೆ ಅನ್ನಿ. ಆದರೆ ಇದೀಗ ರಿಯಾಲಿಟಿ ಷೋಗಳು ಆ ಪಾತ್ರ ವಹಿಸುತ್ತಿರುವ ಗಂಭೀರ ಆರೋಪ ಇದೆ.
ಬೆಂಗಳೂರು: ಚಲನಚಿತ್ರಗಳಲ್ಲಿ ಹಾಸ್ಯ ಎಂದರೆ ಡಬಲ್ ಮೀನಿಂಗ್ ಎನ್ನುವಂಥ ಕಾಲ ಬಂದು ಅದೆಷ್ಟೋ ವರ್ಷಗಳೇ ಆಗಿಬಿಟ್ಟಿವೆ. ಅದನ್ನು ನೋಡಿ ಎಂಜಾಯ್ ಮಾಡುವ ಪ್ರೇಕ್ಷಕರೂ ಇದ್ದಾರೆ ಅನ್ನಿ. ಆದರೆ ಇದೀಗ ರಿಯಾಲಿಟಿ ಷೋಗಳು ಆ ಪಾತ್ರ ವಹಿಸುತ್ತಿರುವ ಗಂಭೀರ ಆರೋಪ ಇದೆ.
ಇಲ್ಲಿ ಕೂಡ ಕೆಲವು ಆಯಂಕರ್ಗಳು ಡಬಲ್ ಮೀನಿಂಗ್ಗಳನ್ನೇ ಹಾಸ್ಯ ಎಂದುಕೊಂಡಂತಿರುತ್ತದೆ.
ಅದಕ್ಕೆ ತೀರ್ಪುಗಾರರಾಗಿ ಬರುವವರೂ ಸಾಥ್ ನೀಡುತ್ತಲೇ ಆ ಡಬಲ್ ಮೀನಿಂಗ್ ಅನ್ನು ಮತ್ತಷ್ಟು ಅಶ್ಲೀಲ ಎಂಬಂತೆ ಬಿಂಬಿಸುತ್ತಿದ್ದಾರೆ. ಅದೂ ಸಾಲದು ಎನ್ನುವುದಕ್ಕೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಕೂಡ ಹಾಸ್ಯದ ಹೆಸರಿನಲ್ಲಿ ರಿಯಾಲಿಟಿ ಷೋಗಳಲ್ಲಿ ಅಶ್ಲೀಲತೆಯೇ ತುಂಬಿ ಹೋಗಿದೆ.

ಇಂದಿನ ಹಲವು ರಿಯಾಲಿಟಿ ಷೋಗಳಲ್ಲಿ ಅದರ ಮೂಲ ಉದ್ದೇಶ ಬಿಟ್ಟು ಅಸಭ್ಯ ಮಾತುಗಳು, ಜೋಕ್ಗಳು, ಅಬ್ಬರದ ಕೂಗಾಟ, ಕಿರುಚಾಟಗಳೇ ಹೆಚ್ಚಾಗಿವೆ ಎಂದು ಬೈದುಕೊಳ್ಳುತ್ತಲೇ ಅದನ್ನು ಆಸ್ವಾದಿಸುವ ದೊಡ್ಡ ವರ್ಗವೇ ಇದೆ. ಮಕ್ಕಳ ಕಾರ್ಯಕ್ರಮಗಳಲ್ಲಿಯೂ ಮಕ್ಕಳ ಬಾಯಲ್ಲಿಯೇ ಡಬಲ್ ಮೀನಿಂಗ್ ಹೇಳಿಸಿ ಅದನ್ನು ಹಾಸ್ಯ ಎಂದುಕೊಳ್ಳುವ ಕಾರ್ಯಕ್ರಮಗಳು ಎಷ್ಟಿಲ್ಲ ಹೇಳಿ? ತಾವೇನು ಹೇಳುತ್ತಿದ್ದೇವೆ ಎನ್ನುವುದು ತಿಳಿಯದ ಮಕ್ಕಳು, ತಾವು ಹೇಳಿದ್ದನ್ನು ಕೇಳಿ ಜನರು ನಗುವಾಗ ಖುಷಿ ಪಡುವ ಅಸಭ್ಯ ಸಂಸ್ಕೃತಿಯನ್ನೂ ಇಂದಿನ ರಿಯಾಲಿಟಿ ಷೋಗಳು ಹುಟ್ಟುಹಾಕುತ್ತಿವೆ!
ಇದೀಗ ರಿಯಾಲಿಟಿ ಷೋಗಳಲ್ಲಿನ ಇದೇ ಡಬಲ್ ಮೀನಿಂಗ್ಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್, ಬೇರೆ ಬೇರೆ ವಾಹಿನಿಗಳ ಕೆಲವು ರಿಯಾಲಿಟಿ ಷೋಗಳಿಗೆ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿರುವ, ಈಗಲೂ ತೀರ್ಪುಗಾರರಾಗಿರುವ ರವಿಚಂದ್ರನ್ ಅವರು ಇದೀಗ ಇಂಥ ಷೋಗಳಲ್ಲಿನ ಅಸಭ್ಯ, ಅಶ್ಲೀಲ ಮಾತುಗಳ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ. ಸದ್ಯ ರವಿಚಂದ್ರನ್ ಅವರು, ಜೀ ಕನ್ನಡದಲ್ಲಿ ಪ್ರಸಾರ ಕಾಣುವ ‘ಭರ್ಜರಿ ಬ್ಯಾಚುಲರ್ಸ್ 2’ನಲ್ಲಿ ತೀರ್ಪುಗಾರರಾಗಿದ್ದಾರೆ. ರಿಯಾಲಿಟಿ ಷೋಗಳ ಬಗ್ಗೆ ನಟ ಹೇಳಿರುವುದು ಏನೆಂದರೆ, ‘ನಾನು ಭರ್ಜರಿ ಬ್ಯಾಚುಲರ್ಸ್ ರೀತಿಯ ಶೋ ಮಾಡುತ್ತಿರುತ್ತೇನೆ. ಬೆಳಿಗ್ಗೆ 10 ಗಂಟೆಗೆ ಶೋ ಶೂಟಿಂಗ್ ಆರಂಭ ಆದರೆ, ರಾತ್ರಿ 11 ಗಂಟೆಗವರೆಗೂ ಶೋ ಶೂಟ್ ನಡೆಯುತ್ತದೆ. ಅಲ್ಲಲ್ಲಿ ಬೋರ್ ಹೊಡೆಯುತ್ತೆ, ತುಂಬಾ ಸಿಟ್ಟು ಬರುತ್ತದೆ. ಡಬಲ್ ಮೀನಿಂಗ್ ಜಾಸ್ತಿ ಮಾಡ್ತಾರೆ ಇದು ಬೇಕಿತ್ತಾ ಎನಿಸುತ್ತದೆ ಎಂದು ತಮ್ಮ ಮನಸಿನ ಮಾತನ್ನು ಹೊರಹಾಕಿದ್ದಾರೆ.
ಇದೇ ವೇಳೆ ರಿಯಾಲಿಟಿ ಷೋಗಳ ಕಷ್ಟದ ಕುರಿತು ಹೇಳಿರುವ ಅವರು, ಷೋ ಮುಗಿದ ಮೇಲೆ ವಿಟಿ ಹಾಕ್ತಾರೆ. ನಾಲ್ಕು ತಿಂಗಳ ವಿಟಿ ಎರಡೂವರೆ ನಿಮಿಷ ಇರುತ್ತದೆ. ಅದೇ ರೀತಿ ಜೀವನದಲ್ಲಿ ಒಳ್ಳೆ ಕ್ಷಣಗಳನ್ನು ಕೂಡಿಕೊಳ್ಳುತ್ತಾ ಹೋಗಬೇಕು.
ಇಡೀ ದಿನ ಚೆನ್ನಾಗಿರಲ್ಲ. ಆದರೆ, ಒಂದು ಕ್ಷಣ ಚೆನ್ನಾಗಿರುತ್ತದೆ. ಅದನ್ನು ಹೆಚ್ಚು ಮಾಡಿದಂತೆ ನಿಮ್ಮ ಜೀವನ ಚೆನ್ನಾಗಿರುತ್ತದೆ’ ಎಂದಿದ್ದಾರೆ. ಇಂಥ ಷೋಗಳನ್ನು ನೋಡುವಾಗ ಅದರಲ್ಲಿರುವ ಕೆಟ್ಟದ್ದನ್ನು ಸ್ವೀಕರಿಸಬಾರದು ಎನ್ನುವ ಅರ್ಥದಲ್ಲಿ ಅವರ ಮಾತು ಇದೆ. ಜೊತೆಗೆ, ರಿಯಾಲಿಟಿ ಶೋಗಳ ಕಷ್ಟಗಳ ಬಗ್ಗೆ ಹಾಗೂ ಅದರಿಂದ ನಾವೇನು ಕಲಿಯಬೇಕು ಎಂಬುದನ್ನು ತಿಳಿಹೇಳಿದ್ದಾರೆ.
ಇವರ ವಿಡಿಯೋ ಅನ್ನು ‘ಯುಐಕನ್ನಡ’ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಮಕ್ಕಳ ಬಗ್ಗೆ ನಾವು ಯಾವತ್ತೂ ಕನಸು ಕಾಣಬಾರದು. ಅವರ ಕನಸಿನ ಜೊತೆ ನಾವು ನಿಲ್ಲಬೇಕು. ಓದುವ ಟೈಮ್ನಲ್ಲಿ ನೀವು ಓದಿದರೆ ಜೀವನ ಪೂರ್ತಿ ಆಟಾಡಬಹುದು.
ಈಗ ಆಟಾಡಿದರೆ, ಜೀವನ ಪೂರ್ತಿ ನಿಮ್ಮನ್ನ ಆಟಾಡಿಸುತ್ತದೆ ಎಂದಿರುವ ನಟ, ನಾನು ಆರನೇ ಕ್ಲಾಸ್ ಫೇಲ್. ಪುಸ್ತಕ ಮುಟ್ಟಲ್ಲ ಎಂದು ಶಪತ ಮಾಡಿದೆ. 7ನೇ ಕ್ಲಾಸ್ನಲ್ಲಿ ಇದ್ದಾಗ ಟೀಚರ್ ಬಂದು ನನಗೆ ಪ್ರಶ್ನೆ ಕೇಳಿದರು. ನನಗೆ ಉತ್ತರ ಬರಲ್ಲ ಎಂದು ಅವರಿಗೆ ಗೊತ್ತಿತ್ತು. ಆದರೂ ನನಗೆ ಪ್ರಶ್ನೆ ಮಾಡುತ್ತಿದ್ದರು. ಮೊದಲ ಎರಡು ದಿನ ಬೈಸಿಕೊಂಡೆ. ಆ ಬಳಿಕ ಮೂರನೇ ದಿನ ನಾನೇ ಬೆಂಚ್ ಮೇಲೆ ಎದ್ದು ನಿಂತುಕೊಂಡೆ. ಅಂದು ನಿಂತವನು ಇಂದು ಇಲ್ಲಿ ಬಂದು ನಿಂತುಕೊಂಡಿದ್ದೇನೆ’ ಎಂದಿದ್ದಾರೆ.
ಇದನ್ನು ಓದಿ: