Back To Top

 ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೇಹಿತೆಯನ್ನೇ ಕೊಂದ ಮಹಿಳೆ

ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೇಹಿತೆಯನ್ನೇ ಕೊಂದ ಮಹಿಳೆ

ಬಡಾವಣೆ ನಿವಾಸಿ ಸುಲೋಚನಾ (65) ಅವರನ್ನು ಅದೇ ಬಡಾವಣೆಯ ನಿವಾಸಿ ಆಕೆಯ ಸ್ನೇಹಿತೆ ಶಕುಂತಲಾ (40) ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ವಿಚಾರಣೆ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಮೈಸೂರು: ನೀಡಿದ್ದ ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೇಹಿತೆಯನ್ನೇ ಮಹಿಳೆ ಕೊಲೆ ಮಾಡಿ ಜೈಲು ಪಾಲಾಗಿರುವ ಘಟನೆ ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಜೆಸಿ ಲೇಔಟ್‌ನಲ್ಲಿ ನಡೆದಿದೆ.
ಬಡಾವಣೆ ನಿವಾಸಿ ಸುಲೋಚನಾ (65) ಅವರನ್ನು ಅದೇ ಬಡಾವಣೆಯ ನಿವಾಸಿ ಆಕೆಯ ಸ್ನೇಹಿತೆ ಶಕುಂತಲಾ (40) ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ವಿಚಾರಣೆ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಇಬ್ಬರು ಒಂದೇ ಬಡಾವಣೆಯ ನಿವಾಸಿಗಳಿದ್ದು, ಸ್ನೇಹಿತರಾಗಿದ್ದಾರೆ. ಸುಲೋಚನಾ ಅವರ ಬಳಿ ಶಕುಂತಲಾ ಅವರು 2.5 ಲಕ್ಷ ರೂ. ಸಾಲ ಮಾಡಿದ್ದು, ಕೆಲ ತಿಂಗಳ ಹಿಂದೆ ಅವರ ಬಳಿ ಇದ್ದ ಚಿನ್ನದ ಬಳೆಗಳನ್ನು ಸಹ ಪಡೆದು ಚಿನ್ನದಂಗಡಿಯಲ್ಲಿ ಅಡವಿಟ್ಟಿದ್ದರು. ಹಣ ಪಡೆದು ಸಾಕಷ್ಟು ದಿನಗಳು ಕಳೆದರೂ ಶಕುಂತಲಾ ಹಣ ವಾಪಸ್‌ ನೀಡದ ಹಿನ್ನಲೆಯಲ್ಲಿ ಕಳೆದ ಮಾ. 5 ರಂದು ಸುಲೋಚನಾ ಅವರು ಶಕುಂತಲಾ ಮನೆಗೆ ತೆರಳಿದ್ದರು. ಹಣ ವಾಪಸ್‌ ನೀಡುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡ ಶಕುಂತಲಾ ಅವರು, ಸುಲೋಚನಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಬಳಿಕ ಅವರ ಮೈಲಿದ್ದ ಚಿನ್ನಾಭರಣಗಳನ್ನು ಕಳಚಿಕೊಂಡು ಟೆರಿಷಿಯನ್‌ ಕಾಲೇಜು ಬಳಿಕ ಚಿನ್ನದಂಗಡಿಯಲ್ಲಿ ಅಡವಿಟ್ಟು ಹಣದೊಂದಿಗೆ ಹಿಂದಿರುಗಿ ಮನೆ ಮಾಲೀಕರಿಗೆ ನೀಡಬೇಕಾಗಿದ್ದ 35 ಸಾವಿರ ರೂ. ಬಾಕಿ ಹಣ ಸೇರಿದಂತೆ ಬೇರೆಯವರಿಂದ ಪಡೆದಿದ್ದ ಸಾಲವನ್ನು ತೀರಿಸಿದ್ದಾರೆ. ಬಳಿಕ ಮನೆಯೊಳಗೆ ಬಂದು ಸುಲೋಚನಾ ಅವರ ಪುತ್ರ ರವಿಚಂದ್ರ ಅವರಿಗೆ ಕರೆ ಮಾಡಿ ನಿಮ್ಮ ತಾಯಿ ಜ್ಞಾನ ತಪ್ಪಿ ಮನೆಯಲ್ಲಿ ಬಿದ್ದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ತಕ್ಷಣ ಆಗಮಿಸಿ ಪುತ್ರ ರವಿಚಂದ್ರ ಅವರು ತಾಯಿ ಸುಲೋಚನಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಜತೆಗೆ ಶಕುಂತಲಾ ಕೂಡ ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು, ಮನೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ತಾಯಿ ಸತ್ತ ಸುದ್ದಿ ತಿಳಿದು ಮಗಳು ಕವಿತಾ ಮತ್ತು ಕುಟುಂಬದವರು ಮತ್ತು ಬಂಧು ಬಳಗ ಕೂಡ ಆಗಮಿಸಿದ್ದು, ತಾಯಿಯ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ವೇಳೆ ಸುಲೋಚನಾ ಅವರ ಪುತ್ರಿ ಕವಿತಾ ಅವರು ತಾಯಿಯ ಮೈಮೇಲಿದ್ದ ಚಿನ್ನಾ ಭರಣಗಳು ಕಾಣುತ್ತಿಲ್ಲ ಎಂದು ಸಾವಿನ ಬಗ್ಗೆ ಅನುಮಾನಗೊಂಡು ನಜರ್‌ ಬಾದ್‌ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಶಕುಂತಲಾ ಅವರ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

ಇದನ್ನು ಓದಿ:

https://infomindz.in/nayi-mele-kamukana-athyachara-sthaliyarinda-dalitha/
Prev Post

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ವಿಶೇಷ ಪೂಜೆ ನಡೆಸಿದ ಬಾಲಿವುಡ್‌ ನಟಿ ಕತ್ರಿನಾ…

Next Post

ಭೀಕರ ಸುಂಟರಗಾಳಿಗೆ 34 ಜನ ಸಾವುಅಮೇರಿಕಾವನ್ನೇ ತಲ್ಲಣಗೊಳಿಸಿದ ದೈತ್ಯ ಗಾಳಿ

post-bars

Leave a Comment

Related post