Back To Top

 ಬಾಲಕಿಗೆ ಬಲವಂತದ ಬಾಲ್ಯವಿವಾಹ: ದೂರು ದಾಖಲು
March 11, 2025

ಬಾಲಕಿಗೆ ಬಲವಂತದ ಬಾಲ್ಯವಿವಾಹ: ದೂರು ದಾಖಲು

ತಮಿಳುನಾಡು: ಆಧುನಿಕ ಸಮಾಜದಲ್ಲಿ ಎಷ್ಟೇ ಅಕ್ಷರಸ್ಥರಾದರೂ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತವಾಗಿದೆ. ಕೃಷ್ಣಗಿರಿಯಲ್ಲಿ 14 ವರ್ಷದ ಬಾಲಕಿಯನ್ನು ಬಲವಂತವಾಗಿ ಎಳದೊಯ್ದು ಬಾಲ್ಯವಿವಾಹ ನಡೆಸಿರುವ ಘಟನೆ ವರದಿಯಾಗಿದೆ. ಬಾಲಕಿಯ ಪೋಷಕರು, ಮಾವ, ಅತ್ತೆ, ಪತಿ ವಿರುದ್ಧ ದೂರು ದಾಖಲಿಸಲಾಗಿದೆ. 7ನೇ ತರಗತಿಗೆ ಓದು ನಿಲ್ಲಿಸಿದ್ದ ಬಾಲಕಿಯನ್ನು ಕಾಳಿಕುಟ್ಟೈನ ಮಾದೇಶ್ (30) ಎಂಬಾತ ಆಕೆಯ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾನೆ. ಫೆಬ್ರವರಿ 3 ರಂದು ಬೆಂಗಳೂರಿನಲ್ಲಿ ಮದುವೆ ನಡೆದಿತ್ತು.
ಮದುವೆಯ ನಂತರ, ಆಕೆಯನ್ನು ಮಾದೇಶ್ ಮನೆಗೆ ಕರೆದೊಯ್ಯಲಾಯಿತು. ಹುಡುಗಿ ಪದೇ ಪದೇ ತನ್ನ ಆಕ್ಷೇಪ ವ್ಯಕ್ತಪಡಿಸಿದ್ದಳು ಮತ್ತು ಯಾರೂ ಹತ್ತಿರದಲ್ಲಿ ಇಲ್ಲದಿದ್ದಾಗ, ಅವಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು. ಆಕೆ ಮನೆ ಬಿಟ್ಟು ಓಡಿ ಹೊರಟಾಗ ಆಕೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಬಲವಂತವಾಗಿ ಮನೆಗೆ ಕರೆತಂದಿರುವ ವಿಡಿಯೋ ವೈರಲ್ ಆಗಿದೆ.

Prev Post

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಮತ್ತೊಂದು ಸಂಕಷ್ಟ: ಸ್ನೇಹಮಯಿ ಕೃಷ್ಣ ತಕರಾರು

Next Post

ಬಜೆಟ್ಟಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಭರಪೂರ ಕೊಡುಗೆ

post-bars

Leave a Comment

Related post