Back To Top

 ಬಾನೆತ್ತರಕ್ಕೆ ಅಬ್ಬರಿಸಿದ ರಾಕ್ಷಸ
March 8, 2025

ಬಾನೆತ್ತರಕ್ಕೆ ಅಬ್ಬರಿಸಿದ ರಾಕ್ಷಸ

ಬಹುನಿರೀಕ್ಷಿತ ಚಲನಚಿತ್ರ ರಾಕ್ಷಸ ಇಂದು ತೆರೆ ಕಂಡಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕ ನಟನಾಗಿ ಅಭಿನಯಿಸಿರುವ ಈ ಸಿನಿಮಾ ಹೌಸ್ ಫುಲ್ ಕಂಡಿದೆ.
ಪೊಲೀಸ್ ಠಾಣೆಯನ್ನು ಒಂದು ರಾತ್ರಿಯ ಕೆಲವು ಗಂಟೆಗಳಲ್ಲಿ ನಡೆಯುವ ಘಟನೆಗಳನ್ನು ಟೈಂ ಟ್ರಾವೆಲ್ ಆಧರಿಸಿ ಕಥೆ ಹೆಣೆಯಲಾಗಿದೆ.
ಪುನರ್ಜನ್ಮದಲ್ಲಿ ಗತಿಸಿದ ಜನ್ಮದ ಘಟನೆಗಳು ನೇರವಾಗಿ ಸಾಗದೆ. ವಿಮುಖವಾಗಿ ಬರುವ ಸಂದರ್ಭ. ಒಬ್ಬ ಆಧ್ಯಾತ್ಮಿಕ ಪುರುಷನ ಚಲನೆಯಿಂದ ತೆರೆದುಕೊಳ್ಳುವ ಸಿನಿಮಾದ ನಾಯಕ ಪ್ರಜ್ವಲ್ ದೇವರಾಜ್ ಮೂರು ವರುಷಗಳ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದು ಒಂದು ದುರ್ಘಟನೆಯಿಂದ ಗತಿಸಿರುತ್ತಾನೆ. ಆದರೆ ಕಲಿಯುಗದಲ್ಲಿರುವ ಪೊಲೀಸ್ ಕರೆಗೆ ಆತನ ಒತ್ತಾಯದ ಮೇರೆಗೆ ಆತ ಕೆಲಸಕ್ಕೆ ಹಾಜರಾಗುತ್ತಾನೆ.
ಈ ಸಿನಿಮಾದಲ್ಲಿ ಆತನ ಅಸ್ತಿತ್ವ ಪ್ರೇಕ್ಷಕರಿಗೆ ಕಾಣಿಸುತ್ತದೆ. ಆದರೆ ಅದು ಹೋದ ಜನ್ಮದ ಕಥೆಯೆಂದು ಅರ್ಥವಾಗುವುದು ಸಿನಿಮಾ ಪೂರ್ತಿ ನೋಡಿದ ಬಳಿಕ.
ಶಿವನಿ ಎಂಟೈಟೈನ್ಮೆಂಟ್ ಬ್ಯಾನರ್ ಕೆಳಗೆ ತಯಾರಾದ ಸಿನಿಮಾ ನಾಯಕಿಯಾಗಿ ಸೋನಲ್ ಮೊಂತೆರೋ ನಟಿಸಿದ್ದಾರೆ. ಪೋಷಕ ಪಾತ್ರದಲ್ಲಿ ಶೋಭರಾಜ್ ಕಾಣಿಸಿಕೊಂಡಿದ್ದಾರೆ.
ಈ‌ ಸಿನಿಮಾದ ಚಿತ್ರಕಥೆ ಮತ್ತು ನಿರ್ದೇಶನ ಲೋಹಿತ್ ಎಚ್. ಅವರದು. ದೀಪು ಬಿ.ಎಸ್. ನಿರ್ಮಾಪಕರಾಗಿದ್ದಾರೆ.
ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ಈ ಸಿನಿಮಾ ಕ್ಷಣ ಕ್ಷಣವೂ ಕುತೂಹಲ, ಕಾತರದ ಸಮ್ಮಿಶ್ರಣ ನೀಡುತ್ತದೆ.
ಹಾರರ್ ಸಿನಿಮಾ ಇದಾಗಿದ್ದು ಬೆಂಗಳೂರು ಕೆಆರ್ ಎಸ್ ರೈಲು ನಿಲ್ದಾಣದ ಬಸ್ ನಿಲ್ದಾಣದಲ್ಲಿ ಇರುವ ಪೊಲೀಸ್ ಠಾಣೆಯಲ್ಲಿ ಒಂದು ಗ್ರಹಣದ ರಾತ್ರಿ ನಡೆಯುವ ಘಟನೆಯಾಗಿದೆ. ಹೀರೋ ಸತ್ಯನ ತಾಯಿ ಕರೆ ಮಾಡಿ ಹತ್ತೂವರೆ ಗಂಟೆ ತನಕ ಹೊರಗಡೆ ಸಂಚರಿಸಬೇಡ ಎನ್ನುವ ಎಚ್ಚರಿಕೆ ಮಾತು. ಆತನ ಮುಖಕ್ಕೆ ಬೀಳುವ ನೀರಿನ ಹನಿ ನಂತರ ಮುಖ ತೊಳೆದಂತೆ ಮಗಳಿಂದ ಬರುವ ವಿಡಿಯೋ ಕಾಲ್ ನಂತರ ನಡೆಯುವ ನಿಗೂಢ ಘಟನೆಗಳು ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ.
ಬ್ರಹ್ಮ ರಾಕ್ಷಸನನ್ನು ಬಂಧಿಸಿದ್ದ ಪೆಟ್ಟಿಗೆಯೊಂದರ ಮೇಲೆ ದಕ್ಷ ಪೊಲೀಸ್ ಅಧಿಕಾರಿ ಆಗಿದ್ದ ಸತ್ಯನ ಕೈ ಗಾಯದಿಂದ. ರಕ್ತದ ಹನಿ ಬೀಳುತ್ತದೆ. ಆನಂತರ ಆತ ಪೆಟ್ಟಿಗೆ ಎತ್ತಿಕೊಂಡಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಬಂಧಿತ ಬ್ರಹ್ಮ ರಾಕ್ಷಸ ಬಿಡುಗಡೆಯಾಗುತ್ತದೆ. ಮುಂದೆ ನಡೆಯುವ ಅನಾಹುತಗಳು ಸತ್ಯವನ್ನು ಆವರಿಸು ಆ ಕಾಣದ ಶಕ್ತಿಯೂ ಟೈಂ ಟ್ರಾವೆಲರ್ ತರ 100 ಟೈಮ್ಸ್ ಡೈಡ್ ಪ್ರಕಾರ ಪದೇ ಪದೇ ಹಿಂದೆ ಓಡುತ್ತಲೇ ಇರುತ್ತದೆ.
ಈ ಸಿನಿಮಾದಲ್ಲಿ ತಂದೆ ಮತ್ತು ಮಗಳ ಬಾಂಧವ್ಯ ಸಾವಿನ ಸಂದರ್ಭದ ಆ ವೇದನೆ ಅದಕ್ಕೆ ತಕ್ಕುದಾದ ಹಾಡು ವೀಕ್ಷಕರನ್ನು ಭಾವುಕರನ್ನಾಗಿಸುತ್ತದೆ.
ತನ್ನಿಂದ ತಾನೇ ಚಲಿಸುವ ವಸ್ತುಗಳ ನಡುವೆ ಕಾಣದ ಶಕ್ತಿಯ ಜೊತೆ ನಡೆಯುವ ಹೋರಾಟ, ಫೈಟಿಂಗ್ ಸೀನ್, ಮ್ಯೂಸಿಕ್, ವೈವಿಧ್ಯಮಯ ಗ್ರಾಫಿಕ್ಸ್ ವರ್ಕ್ ಮತ್ತು ಕ್ಯಾಮರ ವರ್ಕ್ ಅದ್ಭುತವಾಗಿದೆ.
ಮೊದಲ ಭಾಗವಷ್ಟೇ ತೆರೆದುಕೊಂಡಿದ್ದು ಕಥೆ ಮುಂದಿನ ಸಿನಿಮಾದಲ್ಲಿ ಮುಂದುವರಿಯಲಿರುವುದರಿಂದ ಪ್ರೇಕ್ಷಕರಲ್ಲಿ ಕುತೂಹಲ ಹಾಗೇ ಉಳಿದಿದೆ.

ಶರಣ್ಯ ಕೋಲ್ಚಾರ್

Prev Post

ಬೆಂಕಿಗೆ ಆಹುತಿಯಾದ ಚಿರತೆ : ಕಾನೂನು ಕ್ರಮಕ್ಕೆ ಅರಣ್ಯ ಸಚಿವ ಸೂಚನೆ

Next Post

ಅಮರ ಪ್ರೇಮಕ್ಕೆ ಹೆಸರು ಸೂರಿ ಲವ್ಸ್ ಸಂಧ್ಯಾ

post-bars

Leave a Comment

Related post