ಅಮರ ಪ್ರೇಮಕ್ಕೆ ಹೆಸರು ಸೂರಿ ಲವ್ಸ್ ಸಂಧ್ಯಾ
ಶರಣ್ಯ ಕೋಲ್ಚಾರ್
.
ಇಂತಹದೇ ಕಥೆಯನ್ನು ಹೊತ್ತ ಸಿನಿಮಾ ಸೂರಿ ಲವ್ಸ್ ಸಂಧ್ಯಾ. ಹೊಸ ಕಲಾವಿದರನ್ನು ಬಳಸಿಕೊಂಡು ಮಾಡಿದ ಈ ಸಿನಿಮಾ ನೋಡುತ್ತಾ ಹೋದಂತೆ ಕೆಲವಾರು ಘಟನೆಗಳು ಕಥೆಯ ಸುತ್ತ ತಿರುಗುತ್ತವೆ.
ಆರಂಭದಲ್ಲಿ ಪೊಲೀಸ್ ಠಾಣೆಯ ವಿಚಾರಣೆ ಮೂಲಕ ತೆರೆದುಕೊಳ್ಳುವ ಸಿನಿಮಾ ರೌಡಿಗಳ ಅಟ್ಟಹಾಸದಲ್ಲೇ ಮೆರೆಯುತ್ತದೆ.
ಸಮಾಜದಲ್ಲಿ ಪ್ರಭಾವಿಯಾಗಿದ್ದ ವ್ಯಕ್ತಿಯ ತಂಗಿ ಸಂಧ್ಯಾಗೂ ತಂದೆ ತಾಯಿ ಇಲ್ಲದೆ ತಂದೆಯ ಗೆಳೆಯನ ಆಶ್ರಯದಲ್ಲಿದ್ದು ಬಿಬಿಎಂಪಿಯಲ್ಲಿ ಗೋಡೆ ಫೈಂಟರ್ ಆಗಿದ್ದ ಸೂರಿಗೂ ಪ್ರೀತಿ ಮೊಳಕೆಯೊಡೆಯುತ್ತದೆ.
ಈ ವಿಚಾರ ಆಕೆಯ ಅಣ್ಣನ ಸ್ನೇಹಿತರಿಗೆ ತಿಳಿದು ವಿಡಿಯೋ ಮಾಡಿ ತೋರಿಸುತ್ತಾರೆ. ಇದರಿಂದ ಕೆಂಡಾಮಂಡಲವಾದ ಅಣ್ಣ ತಂಗಿಗೆ ಹೊಡೆದು ಬೆದರಿಕೆ ಹಾಕಿ ಅವಮಾನಿಸುತ್ತಾನೆ.
ಆದರೆ ಪ್ರೀತಿಗೆ ಬೆಲೆ ಕೊಡುವ ಸಂಧ್ಯಾ ಜೀವ ಹೋದರೂ ಪ್ರೀತಿ ಬಿಟ್ಟುಕೊಡಲ್ಲ ಎನ್ನುತ್ತಾಳೆ. ಆಕೆಯ ಮೊಬೈಲ್ ಕಿತ್ತುಕೊಂಡು ಆತನ ಸಂಪರ್ಕ ಕಡಿತಗೊಳಿಸುತ್ತಾನೆ.
ಸೂರಿಯನ್ನು ಸುಳ್ಳು ಕೇಸಿನಲ್ಲಿ ಜೈಲಿಗಟ್ಟುತ್ತಾನೆ.
ಕೆಲವು ತಿಂಗಳ ಬಳಿಕ ಹೊರಬಂದ ನಾಯಕ ತನ್ನ ಪ್ರಿಯತಮೆಯನ್ನು ಕೇಳತೊಡಗುತ್ತಾನೆ ಆದರೆ ಆಕೆಯ ಸುಳಿವು ಎಲ್ಲೂ ದೊರೆಯುವುದಿಲ್ಲ.
ಆತ ಹುಚ್ಚನಾಗಿ ದುಶ್ಚಟಗಳಿಗೆ ದಾಸನಾಗುತ್ತಾನೆ. ಇದನ್ನು ನೋಡಲಾಗದ ಆತನ ಅಂಕಲ್ ಆಕೆ ಕೊಟ್ಟು ಹೋದ ಪತ್ರ ನೀಡುತ್ತಾರೆ. ಪತ್ರದಂತೆ ಆಕೆಯನ್ನು ಆತ ಮತ್ತೆ ಭೇಟಿಯಾಗುತ್ತಾನೆ.
ಈ ಸಿನಿಮಾದಲ್ಲಿ ನಾಯಕನಾಗಿ ಹಾಸ್ಯ ನಟ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿಯಾಗಿ ಅಪೂರ್ವ ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಪ್ರತಾಪ್ ನಾರಾಯಣ್ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ.
ಈ ಸಿನಿಮಾದ ಸಂಗೀತ ಸಂಯೋಜನೆ ಎಸ್. ಎನ್. ಅರುಣಗಿರಿ ಅವರದ್ದಾಗಿದೆ. ನಿರ್ದೇಶನ ಯಾದವ್ ರಾಜ್ ಅವರದ್ದು, ಕೆ.ಟಿ. ಮಂಜುನಾಥ್ ನಿರ್ಮಾಪಕರಾಗಿದ್ದಾರೆ.
ಪ್ರದೀಪ್ ಕಬೀರ, ಭಜರಂಗಿ ಪ್ರಸನ್ನ, ಪಲ್ಲವಿ, ಬೌ ಬೌ ಜಯರಾಂ, ಕೌಶಿ ಆಚಾರ್ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮೆಲೋಡಿ ಸಂಗೀತ, ಶೋಕ ಗೀತೆಗಳು ಮನರಂಜಿಸುತ್ತದೆ.
ಡ್ರೆಸಿಂಗ್, ಫೈಟಿಂಗ್ ಅತ್ಯದ್ಭುತವಾಗಿದೆ. ಖಳ ನಾಯಕನ ಎಂಟ್ರಿ ಮತ್ತು ಲುಕ್ , ಡೈಲಾಗ್ ಗಳು ನಿರಾಸ ಎನ್ನಿಸುವ ಜಾಗಗಳಿಗೆ ಶಕ್ತಿ ತುಂಬುತ್ತದೆ.
ಸೆಕೆಂಡ್ ಆಫ್ ನಂತರ ಸಿನಿಮಾ ನಿಜವಾದ ಕಥೆ ಶುರುವಾಗುತ್ತದೆ. ಕ್ಲೈಮಾಕ್ಸ್ ಅಂತೂ ಅದ್ಭುತವಾಗಿದ್ದು. ಸಿನಿಮಾದ ಅನಿರೀಕ್ಷಿತ ತಿರುವು ವೀಕ್ಷಕರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತದೆ.
ಅದೇನೆಂದು ನೋಡಲು ನೀವು ಈ ಸಿನಿಮಾ ನೋಡಲೇಬೇಕು.