Back To Top

 ಎಳನೀರಿನಿಂದ ವೈನ್‌ ತಯಾರಿ ಸಾಧಕ ಸೆಬಾಸ್ಟಿಯನ್‌ ಆಗಸ್ಟಿನ್‌!!!ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗ
February 28, 2025

ಎಳನೀರಿನಿಂದ ವೈನ್‌ ತಯಾರಿ ಸಾಧಕ ಸೆಬಾಸ್ಟಿಯನ್‌ ಆಗಸ್ಟಿನ್‌!!!ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗ

ಕಾಸರಗೋಡು: ಭೀಮನಡಿಯ 82ರ ಹರೆಯದ ಸೆಬಾಸ್ಟಿಯನ್‌ ಪಿ.ಆಗಸ್ಟಿನ್‌ ಎಳನೀರಿನಿಂದ ವೈನ್‌ ತಯಾರಿಸಿದ್ದಾರೆ.
ಚೀನಾದಲ್ಲಿ ತೆಂಗಿನ ಕಾಯಿ ನೀರಿನಿಂದ ವೈನ್‌ ತಯಾರಿಸಲಾಗುತ್ತಿದ್ದರೂ ಭಾರತದಲ್ಲಿ ಮೊದಲ ಬಾರಿ ಎಳನೀರಿನಿಂದ ವೈನ್‌ ತಯಾರಿಸಿದ ಖ್ಯಾತಿ ಸೆಬಾಸ್ಟಿಯನ್‌ಗೆ ಸಲ್ಲುತ್ತದೆ.
ಕೃಷಿಕ ಮತ್ತು ಉದ್ಯಮಿಯಾಗಿರುವ ಸೆಬಾಸ್ಟಿಯನ್‌ ಭೀಮನಡಿಯ 15 ಎಕರೆ ತೆಂಗಿನ ತೋಪಿನಲ್ಲಿ ಬೆಳೆದ ಎಳನೀರಿನಿಂದ ಮೊದಲು ವೈನ್‌ ತಯಾರಿಸಿದ್ದಾರೆ.
ಸೆಬಾಸ್ಟಿಯನ್‌ ಪಿ.ಆಗಸ್ಟಿನ್‌ ಎಳನೀರಿನಿಂದ ವೈನ್‌ ತಯಾರಿಸಿದ್ದಾರೆ. ಎಳನೀರಿನಿಂದ ಜ್ಯೂಸ್‌, ಶೇಕ್‌ ಮತ್ತು ಐಸ್‌ಕ್ರೀಮ್‌ ತಯಾರಿಸಲಾಗುತ್ತಿದ್ದರೂ, ಉತ್ತಮ ವೈನ್‌ ಪಡೆಯಬಹುದು ಎಂದು ಸೆಬಾಸ್ಟಿಯನ್‌ ಸಾಧಿಸಿ ತೋರಿಸಿದ್ದಾರೆ. ಚೀನಾದಲ್ಲಿ ತೆಂಗಿನ ಕಾಯಿ ನೀರಿನಿಂದ ವೈನ್‌ ತಯಾರಿಸಲಾಗುತ್ತಿದ್ದರೂ ಭಾರತದಲ್ಲಿ ಮೊದಲ ಬಾರಿ ಎಳನೀರಿನಿಂದ ವೈನ್‌ ತಯಾರಿಸಿದ ಖ್ಯಾತಿ ಸೆಬಾಸ್ಟಿಯನ್‌ಗೆ ಸಲ್ಲುತ್ತದೆ. ಕೃಷಿಕ ಮತ್ತು ಉದ್ಯಮಿಯಾಗಿರುವ ಸೆಬಾಸ್ಟಿಯನ್‌ ಭೀಮನಡಿಯ 15 ಎಕರೆ ತೆಂಗಿನ ತೋಪಿನಲ್ಲಿ ಬೆಳೆದ ಎಳನೀರಿನಿಂದ ಮೊದಲು ವೈನ್‌ ತಯಾರಿಸಿದ್ದಾರೆ.
ಕೃಷಿಕ ಮತ್ತು ಉದ್ಯಮಿಯಾಗಿರುವ ಸೆಬಾಸ್ಟಿಯನ್‌ ಭೀಮನಡಿಯ 15 ಎಕರೆ ತೆಂಗಿನ ತೋಪಿನಲ್ಲಿ ಬೆಳೆದ ಎಳನೀರಿನಿಂದ ಮೊದಲು ವೈನ್‌ ತಯಾರಿಸಿದ್ದಾರೆ. ಸೆಬಾಸ್ಟಿಯನ್‌ ಅವರ ರಿವರ್‌ ಐಲ್ಯಾಂಡ್‌ ವೈನರಿ ಫಾರ್ಮ್‌ನಲ್ಲಿ ಡ್ರ್ಯಾಗನ್‌ ಫ್ರುಟ್‌, ಮಾವು, ಬಾಳೆಹಣ್ಣು, ಪಪ್ಪಾಯಿ, ಹಲಸು ಬೆಳೆಸಿದ್ದಾರೆ. 250 ಲೀ. ವೈನ್‌ ಬ್ಯಾಚ್‌ ತಯಾರಿಸಲು ಸುಮಾರು 1,000 ಎಳನೀರು ಹಾಗೂ 250 ಕೆಜಿ ಹಣ್ಣುಗಳನ್ನು ಬಳಸಲಾಗುತ್ತದೆ. ನೀರಿನ ಬದಲು ತಾಜಾ ಎಳನೀರು ಬಳಸುವುದರಿಂದ ವೈನ್‌ ರುಚಿಯಾಗಿರುತ್ತದೆ.
ಕೇವಲ ಶೇ.8-10ರಷ್ಟು ಆಲ್ಕೋಹಾಲ್‌ ಕಂಟೆಂಟ್‌ ಹೊಂದಿರುವ ಈ ವೈನ್‌, ದ್ರಾಕ್ಷಿ ವೈನ್‌ಗಿಂತ ಭಿನ್ನ ರುಚಿ ಹೊಂದಿದೆ. ಸುಮಾರು 20 ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಸೆಬಾಸ್ಟಿಯನ್‌ ಈ ವೈನ್‌ ಮಾರುಕಟ್ಟೆಗೆ ತರುತ್ತಿದ್ದಾರೆ. 2004ರಲ್ಲಿ ತಮ್ಮ ತೋಟದಲ್ಲಿ ಬೆಳೆದ ವಿದೇಶಿ ಹಣ್ಣುಗಳ ರಸಗಳ ಮಿಶ್ರಣದೊಂದಿಗೆ ಎಳನೀರು ಬೆರೆಸಿ ವೈನ್‌ ತಯಾರಿಸಿದ್ದರು. 2007ರಲ್ಲಿ ಪೇಟೆಂಟ್‌ ಪಡೆದಿದ್ದರು. ಕೇರಳದ ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ನೀಡಲಾಗುವ ಕೇರ ಕೇಸರಿ ಪ್ರಶಸ್ತಿಗೆ ಸೆಬಾಸ್ಟಿಯನ್‌ ಭಾಜನರಾಗಿದ್ದರು.
ದೊಡ್ಡ ಪ್ರಮಾಣದಲ್ಲಿ ಎಳನೀರು ವೈನ್‌ ತಯಾರಿಸಿ ಮಾರಾಟ ಮಾಡಲು ರಾಜ್ಯ ಅಬಕಾರಿ ಇಲಾಖೆಯ ಪರವಾನಗಿ ಪಡೆಯಲಾಗಿದೆ. ವಿದೇಶಗಳಲ್ಲೂ ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ರೈತ ಉದ್ಯಮಿ ಸೆಬಾಸ್ಟಿಯನ್‌ ಪಿ.ಆಗಸ್ಟಿನ್‌ ತಿಳಿಸಿದ್ದಾರೆ.
ಹೈನೋದ್ಯಮದಲ್ಲಿ ಇಂತಹ ಪ್ರಯೋಗ ಮಾಡುವುದರಿಂದ ಹೊಸ ಕೃಷಿ ಮತ್ತು ಬೆಳೆಗೆ ಬೇಡಿಕೆ ಹೆಚ್ಚಾಗುತ್ತದೆ ಎಂದು ತಂತ್ರಜ್ಜರು ಅಭಿಪ್ರಾಯ ಪಟ್ಟಿದ್ದಾರೆ.

Prev Post

ಹೆರಿಗೆ ಬಳಿಕ ಕಾಟನ್ ಬಟ್ಟೆ ಹೊಟ್ಟೆಯೊಳಗಿಟ್ಟು ಹೊಲಿಗೆ ಹಾಕಿದ ವೈದ್ಯರು !!

Next Post

ಅರ್ಜಿ ಸಲ್ಲಿಸಿದವರಿಗೆ ಮಾರ್ಚ್ 22 ರಿಂದ ಕೆಇಎ ಪರೀಕ್ಷೆ

post-bars

Leave a Comment

Related post