ಬೆಂಗಳೂರು- ಚೆನ್ನೈ ಕಾರಿಡಾರ್ ಸಂಚಾರಕ್ಕೆ ಮುಕ್ತ:
ಬೆಂಗಳೂರು: ನಗರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತದೆ. ಕಾರಿಡಾರ್ ಮೂಲಕ ಸಂಚರಿಸಲು ಇನ್ನೂ ಕನಿಷ್ಠ ಎರಡು ವರ್ಷ ಬೇಕಿದ್ದರೂ, ಸದ್ಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಮತ್ತು ಕೃಷ್ಣಪುರ ಬಳಿ ಸ್ಥಾಪಿಸಲಾಗಿರುವ ಟೋಲ್ ಮುಖಾಂತರ ಹೊಸಕೋಟೆ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಸಿರು ನಿಶಾನೆ ನೀಡಿದೆ. ಉಚಿತ ಪ್ರಯಾಣಕ್ಕೆ ಕೂಡ ತಾತ್ಕಾಲಿಕಅವಕಾಶ ಮಾಡಿಕೊಟ್ಟಿದೆ.
ಕೃಷ್ಣಪುರ ಬಳಿ ಸ್ಥಾಪಿಸಲಾಗಿರುವ ಟೋಲ್ ಮುಖಾಂತರ ಹೊಸಕೋಟೆ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗ್ರೀನ್ ಸಿಗ್ನಲ್ ನೀಡಿದೆ.
ದ್ವಿಚಕ್ರ, ಆಟೋ, ಟ್ರ್ಯಾಕ್ಟರ್ಗಳಿಗೆ ರಸ್ತೆಯಲ್ಲಿ ಸಂಚರಿಸಲು ಅವಕಾಶ ನಿರಾಕರಿಸಲಾಗಿದೆ.
ಹೊಸಕೋಟೆ ನಂತರ ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಜಿಎಫ್ನಿಂದ ಕೇವಲ ಒಂದು ಗಂಟೆಯಲ್ಲಿ ತಲುಪಬಹುದಾಗಿದೆ.
ಕೋಲಾರ ಜಿಲ್ಲೆಯಲ್ಲಿ ಹಾದುಹೋಗಿರುವ 71 ಕಿಮೀ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಶುಲ್ಕವಿಲ್ಲದೆ ವಾಹನಗಳಿಗೆ ಸಂಚರಿಸಲು ಅವಕಾಶ ನೀಡಲಾಗಿದ್ದು, ಬಹುನಿರೀಕ್ಷಿತ ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಸಂಚಾರ ಮಾಡಬೇಕೆಂಬ ಕನಸು ಕೊನೆಗೂ ನನಸಾಗುತ್ತಿದೆ.
ಸುಂದರಪಾಳ್ಯ ಟೋಲ್ ಬಳಿ ಪ್ರವೇಶ ಮಾಡಿ ಕನಿಷ್ಠ 100 ರಿಂದ 120 ಕಿಮೀ ವೇಗದ ಚಾಲನೆಯಲ್ಲಿ ತಲುಪಲು ಕನಿಷ್ಠ 30 ರಿಂದ 40 ನಿಮಿಷ ಹಾಗೂ ಕೃಷ್ಣಾಪುರ ಟೋಲ್ ದ್ವಾರದ ಮೂಲಕ ಹೋದರೆ ಹೊಸಕೋಟೆಗೆ ಕನಿಷ್ಠ 25ರಿಂದ 35 ನಿಮಿಷಗಳಲ್ಲಿ, ಬೆಂಗಳೂರಿನ ಕೆ.ಆರ್. ಪುರಕ್ಕೆ 45 ನಿಮಿಷ ಹಾಗೂ ವಿಧಾನಸೌಧ ಸೇರಿ ಇತರೆಡೆಗೆ ಕೇವಲ 1 ಗಂಟೆಯಿಂದ ಒಂದೂವರೆ ಗಂಟೆ ಒಳಗಡೆ ತಲುಪಬಹುದು ಎಂದು ರಸ್ತೆ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.