Back To Top

 ದಬ್ಬಾಳಿಕೆ, ಅನ್ಯಾಯದ ವಿರುದ್ಧದ ಹೋರಾಟದ ಚಿತ್ರಕಥೆ – ದಸ್ಕತ್!
February 16, 2025

ದಬ್ಬಾಳಿಕೆ, ಅನ್ಯಾಯದ ವಿರುದ್ಧದ ಹೋರಾಟದ ಚಿತ್ರಕಥೆ – ದಸ್ಕತ್!

ತುಳು ಸಿನಿಮಾ ಅಂದರೆ ಅದನ್ನ ತುಳು ನಾಟಕಗಳ ಸಾಲಿನಲ್ಲೇ ನೋಡ್ತಾರೆ. ಇಲ್ಲಿ comedy ಯೇ ಜೀವಾಳ. ಕಾಮಿಡಿ ಇಲ್ಲದ ಸಿನಿಮಾಗಳು ಥಿಯೇಟರ್ ನಲ್ಲಿ ಓಡೋದೇ ಭಾರಿ ಕಷ್ಟ. ಪ್ರಯತ್ನಗಳು ನಡೆದರೂ ಅವು ಮಾಸ್ ಹಿಟ್ ಆಗಿಲ್ಲ. ಆದರೆ ಒಂದಷ್ಟು ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿದೆ. ಗಗ್ಗರ (2008), ಪಿಂಗಾರ (2019), ಜೀಟಿಗೆ (2022) ಹೀಗೆ content specific ಆಗಿರುವ ತುಳು ಸಿನಿಮಾಗಳು ರಾಷ್ಟ್ರಪ್ರಶಸ್ತಿಯನ್ನೇ ಬಾಚಿವೆ. ಇಂತಹ ಸಾಲಿಗೆ ಸೇರಿಸಬಹುದಾದ ಸಿನಿಮಾವೇ ದಸ್ಕತ್.

Music ಮತ್ತೆ ಛಾಯಾಗ್ರಹಣದ ಮೇಲೆ ಬಹಳ ವರ್ಕ್ ಮಾಡಿರುವುದು ಸಿನಿಮಾ ನೋಡಿದಾಗ ಗೊತ್ತಾಗುತ್ತೆ. ಒಂದು ಮ್ಯೂಸಿಕ್ ಅಂತೂ ಥಿಯೇಟರ್ ನಿಂದ ಹೊರ ಬಂದಬಳಿಕವೂ ತಲೆಯಲ್ಲಿ ಗುನುಗುತ್ತಿರುತ್ತೆ. ತುಳುವರಿಂದ ತುಳುವರಿಗಾಗಿ ಮಾಡಿದ ಸಿನಿಮಾ ಇದು. ತುಳುವರ ಜೀವನಶೈಲಿಯ ಆನಾವರಣ ಈ ಸಿನಿಮಾದಲ್ಲಿ ಆಗುತ್ತೆ. ಪುರುಷವೇಷ, ಆಟಿಕಳಂಜ, ಕೋಳೀ ಅಂಕ, ಶಿವರಾತ್ರಿ, ದೈವಾರಾಧನೆ, ಹುಲಿವೇಷ ಈ ಸಿನಿಮಾದಲ್ಲಿದೆ. ಒಂದು ಕ್ಷಣ ಇವೆಲ್ಲವನ್ನೂ ತೆರೆಯ ಮೇಲೆ ತರಬೇಕಿತ್ತಾ ಅನ್ಞೋ ಪ್ರಶ್ನೆ ಮೂಡುತ್ತೆ. ಆದರೆ ಸರಿಯಾಗಿ ಗಮನಿಸಿದಾಗ, ಎಲ್ಲವೂ indirect ಆಗಿ ಯಾವ್ದೋ ಸನ್ನಿವೇಶವನ್ನು symbolically ತೋರಿಸಲು ಬಳಸಿರುವುದು ತಿಳಿಯುತ್ತೆ.

ನಿರ್ದೇಶಕರಾಗಿ ಅನೀಶ್ ಪೂಜಾರಿ ವೇಣೂರು ಗೆದ್ದಿದ್ದಾರೆ. ಇದೊಂದು ಹೊಸಬರ ಸಿನಿಮಾ ಎಂದು ಅನಿಸುವುದೇ ಇಲ್ಲ. ಈ ವಿಷಯದಲ್ಲಿ ಇಡೀ ಚಿತ್ರತಂಡ ಗೆದ್ದಿದೆ. ಈ ಸಿನಿಮಾ ಗೆದ್ದರೆ ತುಳುವಿನಲ್ಲಿ ಇಂತಹ ಮತ್ತಷ್ಟು ಪ್ರಯತ್ನಗಳು ಆಗಲು ಸಾಧ್ಯ. ತುಳುನಾಡಿನಲ್ಲಿ ಗೌಪ್ಯವಾಗೇ ಇರುವ ಸಾವಿರಾರು ಕಥೆಗಳಿವೆ. ಅದನ್ನು ಕೋಟ್ಯಂತರ ಜನರಿಗೆ ತಲುಪಿಸಲು ಸಿನಿಮಾ ಒಂದು ಉತ್ತಮ ಮಾರ್ಗ. ಹಾಗಾಗಿ ತುಳುವರ, ತುಳುನಾಡಿನ ಮಣ್ಣಿನ ಕಥೆಗಳು ಸಿನಿಮಾವಾಗಲು ನಮ್ಮ ಪ್ರೋತ್ಸಾಹ ಅತ್ಯಗತ್ಯ. ದಸ್ಕತ್ ಗೆಲ್ಲಲಿ. ಇಂತಹ ಇನ್ನೂ ನೂರು ಸಿನಿಮಾಗಳು ನಿರ್ಮಾಣಗೊಳ್ಳಲಿ.

Aneesh Poojary Venur Smithesh Barya

ದಬ್ಬಾಳಿಕೆ, ಅನ್ಯಾಯದ ವಿರುದ್ಧದ ಹೋರಾಟದ ಚಿತ್ರಕಥೆ – ದಸ್ಕತ್!

Prev Post

ಮಾಧ್ಯಮ ರಂಗದಲ್ಲಿ ಅಂಬಾನಿ – ರಿಲಯನ್ಸ್‌ – Network 18 – Viacom…

Next Post

ಡಾಲಿ ಧನಂಜಯ ಮದುವೆಯಲ್ಲಿ ಭೋಜನಕ್ಕೆ ಅದ್ಭುತ ವ್ಯವಸ್ಥೆ

post-bars

Leave a Comment

Related post