Back To Top

 ಪ್ರೀತಿಗಾಗೇ ಪ್ರಾಣ ಪಣಕ್ಕಿಟ್ಟ ಪೈಲ್ವಾನ ಗಜರಾಮ
February 9, 2025

ಪ್ರೀತಿಗಾಗೇ ಪ್ರಾಣ ಪಣಕ್ಕಿಟ್ಟ ಪೈಲ್ವಾನ ಗಜರಾಮ

ಬಲದಲ್ಲಿ ಭೀಮಾ, ತಾಳ್ಮೆಯಲ್ಲಿ ರಾಮ, ಕೋಪದಲ್ಲಿ ವ್ಯಾಘ್ರನಿಗಿಂತ ಜಾಸ್ತಿ, ನನ್ನ ಗಜರಾಮ ಡೈಲಾಗಿಗೆ ಥಿಯೇಟರ್ ತುಂಬಾ ಸಿಳ್ಳೆ, ಕೂಗು ಗಜರಾಮ ಸಿನಿಮಾ ಹವಾ ಮೊದಲ ಶೋ ನಲ್ಲೇ ಪ್ರೇಕ್ಷಕರ ಮನಸ್ಸು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ರಾಜವರ್ಧನ್ ನಾಯಕನಾಗಿ ಅಭಿನಯಿಸಿದ ತಪಸ್ವಿ ಪೂಣಚ್ಚ ನಾಯಕಿಯಾಗಿ ನಟಿಸಿದ ಗಜರಾಮ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಸಿಸ್ಯ ದೀಪಕ್, ಕಬೀರ್ ಸಿಂಗ್, ತುಕಾಲಿ ಸಂತೋಷ್ ಅಭಿನಯವು ತೃಪ್ತಿದಾಯಕವಾಗಿದ್ದು ಲೈಫ್ ಲೈನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನರಸಿಂಹ ಮೂರ್ತಿ ವಿ. ಪ್ರೋಡಕ್ಷನ್, ಕಥೆ ಮತ್ತು ನಿರ್ದೇಶನ ಸುನೀಲ್ ಕುಮಾರ್ ವಿ.ಎ. ಅವರದ್ದಾಗಿದೆ.
ಕಥೆಯ ಆರಂಭದಲ್ಲಿ ಒಂದು ಗ್ರಾಮೀಣ ಬಡ ಕುಟುಂಬದಲ್ಲಿ ಹುಟ್ಟಿದ ನಾಯಕ ತಾಯಿಯ ಆಸರೆಯಲ್ಲಿ ಬೆಳೆಯುತ್ತಾನೆ. ಶಾಲಾ ದಿನಗಳಲ್ಲಿ ಸಹಜ ತುಂಟನಾದ ಆತ ನೆರೆಯ ಸಹಪಾಠಿ ಹುಡುಗಿಯನ್ನು ಪ್ರೀತಿಸುತ್ತಾನೆ. ಆತನ ಗೆಳೆಯನಿಗೆ ಹೊಡೆದ ಕಾರಣಕ್ಕೆ ಪಾಠ ಕಲಿಸುವ ಗುರುವಿಗೆ ಹೊಡೆದು ನಾನು ರಾಮ ಅಲ್ಲಾ ರಾವಣ ಎಂದು ಆರ್ಭಟಿಸಿದ್ದು ಎಳೆ ಹುಡುಗಿಯಲ್ಲಿ ನಡುಕ ಹುಟ್ಟಿಸಿರುತ್ತದೆ. ನಂತರದ ದಿನಗಳಲ್ಲಿ ಆಕೆಯ ಬೆಂಗಾವಲಾಗಿದ್ದ ಹೀರೋ ರಾಮ ತಂದೆ ಮಗಳಿಗೆ ಹೊಡೆದರು ಎನ್ನುವ ಕಾರಣಕ್ಕೆ ಆಕೆಯ ತಂದೆಯ ಕೈಗೆ ಬರೆ ಹಾಕಿಸಿ ರಾಮ ಅಲ್ಲ ರಾವಣ ಎಂಬುದನ್ನು ಪದೇ ಪದೇ ಹೇಳುತ್ತಾ ಬರುತ್ತಾನೆ.
ಹೆಚ್ಚಿನ ಶಿಕ್ಷಣಕ್ಕೆ ಬೆಂಗಳೂರಿಗೆ ಹೊರಟ ಆಕೆಯಿಂದ ಪ್ರೀತಿಯ ಭಾಷೆ ಪಡೆದು ಕಳಿಸಿಕೊಡುತ್ತಾನೆ. ಇತ್ತ ಅಚಾನಕ್ಕಾಗಿ ಗರಡಿ ಮನೆ ಉಸ್ತಾದ್ ಗೆ ನಾಯಕನ ದೇಹ ಬಲ ನೋಡಿ ಗರಡಿ ಮನೆಯಲ್ಲಿ ತರಬೇತಿ ಕೊಟ್ಟು ಪೈಲ್ವಾನ್ ಮಾಡಿಸಬೇಕು ಎಂಬ ಮಹದಾಸೆಯಿಂದ ತಾಯಿ ಅನುಮತಿಯಂತೆ ತರಬೇತಿ ಕೊಡಿಸುತ್ತಾರೆ.
5 ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೇತನಾದ ಕುಸ್ತಿಪಟುವನ್ನು ತನ್ನ ಶಕ್ತಿ ಮತ್ತು ಯುಕ್ತಿಯಿಂದ ಸೋಲಿಸಿದ ನಾಯಕ ರಾಜ್ಯದ ಪ್ರತಿನಿಧಿಯಾಗಿ ಬೆಂಗಳೂರಿನ ಸ್ಪರ್ಧೆಗೆ ಆಗಮಿಸುತ್ತಾನೆ. ಈ ಸಿನಿಮಾದಲ್ಲಿ ಮರೆಯಾಗುತ್ತಿರುವ ಗರಡಿ ಮನೆಯನ್ನು ಸಮಾಜದ ಮುನ್ನೆಲೆಗೆ ತರುವಂತೆ ಮೇಲ್ನೋಟಕ್ಕೆ ಅನ್ನಿಸಿತು.
ಬೆಂಗಳೂರಿನಿಂದ ರಜೆಯಲ್ಲಿ ಊರಿಗೆ ಬಂದ ಪ್ರಿಯತಮೆಯನ್ನು ನೋಡುವ ಖುಷಿಯಲ್ಲಿ ಶ್ರೀಮಂತನನ್ನು ಕೈ ಹಿಡಿಯ ಹೊರಟ ಆಕೆಯ ಮದುವೆ ಆಮಂತ್ರಣ ಪತ್ರಿಕೆ ನಾಯಕನ ಪ್ರೀತಿಯ ನೂರು ಕನಸುಗಳನ್ನು ನುಚ್ಚು ನೂರು ಮಾಡುತ್ತದೆ. ನಿನ್ನನ್ನು ಮದುವೆಯಾಗಲು ಬಿಡಲಾರೆ ಎಂದು ಉಗ್ರವಾಗಿ ನಡೆದುಕೊಂಡ ಹೀರೋ ಒಬ್ಬ ರಾಕ್ಷಸನಂತೆ ಆಕೆಗೆ ಗೋಚರಿಸುತ್ತದೆ ಮತ್ತು ಆತನನ್ನು ದ್ವೇಷಿಸಲು ತೊಡಗುತ್ತಾಳೆ.
ಇದು ಆಕೆಯ ಭೇಟಿಯ ಪ್ರಯತ್ನಕ್ಕೆ ತಡೆಯಾಗುತ್ತದೆ. ಇತ್ತ ಆಕೆ ಮದುವೆಯಾಗಲಿರುವ ಎಸಿಪಿಯೊಂದಿಗೆ ದ್ವೇಷ ಕಟ್ಟಿಕೊಂಡಿದ್ದ ಭೂಗತ ಪಾತಕಿಗಳ ತಂಡವೊಂದು ಕೊಲೆ ಮತ್ತು ಹೆಣ್ಣುಮಕ್ಕಳ ಕಿಡ್ನಾಪ್ ಕೇಸಿನಲ್ಲಿ ಬದ್ದ ಶತ್ರುತ್ವ ಕಟ್ಟಿಕೊಂಡಿರುತ್ತದೆ.
ಪಾತಕಿಗಳು, ಎಸಿಪಿ ಮತ್ತು ನಾಯಕ ನಟ ನ ಸಂಗಮದಲ್ಲಿ ನಾಯಕಿ ಏನಾದಳು?.. ಪ್ರೀತಿ ಗೆದ್ದಿತೇ? ಅಥವಾ ಗರಡಿ ಮನೆ ಕಥೆ ಏನಾಯ್ತು? ಹೀರೋ ರಾಮನಾ ಅಥವಾ ರಾವಣನಾ? ಅಂತಿಮ ಕಥೆ ಏನಾಯ್ತು? ಈ ಎಲ್ವಾ ಪ್ರಶ್ನೆಗೆ ನೀವು ಈ ಸಿನಿಮಾ ನೋಡಲೇಬೇಕು. ಸಿನಿಮಾ ಕಥೆ ಕೊನೆಯವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಣಯಗೀತೆ, ವಿರಹಗೀತೆಗಳು ನೋಡುಗರಲ್ಲಿ ಹಲವು ಭಾವಗಳನ್ನು ಮೂಡಿಸಿದ್ದು ಮನದಲ್ಲಿ ಗುನುಗುನಿಸುತ್ತದೆ.
ಈ ಸಿನಿಮಾದಲ್ಲಿ ಕಾಮಿಡಿ, ಡಾನ್ಸ್, ಸೆಂಟಿಮೆಂಟ್, ಫೈಟಿಂಗ್, ಕ್ಯಾಮೆರಾ ವರ್ಕ್, ಕಾಸ್ಟಿಂಗ್, ಸ್ಕ್ರೀನ್ ಪ್ಲೇ, ಅದ್ಭುತವಾಗಿದೆ.

ಶರಣ್ಯ ಕೋಲ್ಚಾರ್

Prev Post

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಸಿದ್ಧತೆ: ಫೆ.25ರಿಂದ ಪರೀಕ್ಷೆ ಆರಂಭ

Next Post

ದೀಪನಾಥೇಶ್ವರ ದೇವಾಲಯದಲ್ಲಿ ಆರಿದ ದೀಪ: ರಾಜ್ಯ ಆಳುವವರಿಗೆ ತೊಂದರೆ ಆತಂಕ

post-bars

Leave a Comment

Related post