ದಿಲ್ಲಿ ಚುನಾವಣೆ 2025: ಬಿಜೆಪಿಗೆ ಬಹಿಮತ; ಆಪ್ಗೆ ಬಿಗ್ ಶಾಕ್! ಗೆಲುವು ಮಾತ್ರ ಕುತೂಹಲ!!!
ನವದೆಹಲಿ: ದೆಹಲಿ ಚುನಾವಣೆ ಬಳಿಕ ಬೆಳಗ್ಗೆ ಎಂಟು ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. ಎರಡು ಬಾರಿ ದೆಹಲಿಯ ಚುಕ್ಕಾಣಿ ಹಿಡಿದಿದ್ದ ಆಮ್ ಆದ್ಮಿ ಭಾರೀ ಹಿನ್ನಡೆಯನ್ನು ಸಾಧಿಸಿದೆ. ಮಾಜಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಹಿನ್ನಡೆಯಲ್ಲಿದ್ದಾರೆ. 27 ವರ್ಷಗಳ ಹಿಂದೆ ಅಧಿಕಾರಕ್ಕೇರಿದ್ದ ಬಿಜೆಪಿ ಈ ಬಾರಿ ಸರಳ ಬಹುಮತ ಗಳಿಸುವ ಮೂಲಕ ಸರ್ಕಾರವನ್ನು ರಚಿಸುವ ಸಾಧ್ಯತೆ ಗೋಚರಿಸುತ್ತದೆ.
ದೆಹಲಿಯಲ್ಲಿ ಒಟ್ಟು 70 ಕ್ಷೇತ್ರಗಳಿದ್ದು, ಆಮ್ ಆದ್ಮಿ ಪಕ್ಷ ಕೇವಲ 20 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ದೆಹಲಿಯಲ್ಲಿ ಈ ಬಾರಿಯೂ ದೆಹಲಿ ಮತದಾರ ಕಾಂಗ್ರೆಸ್ನ ಕೈ ನ ಆಡಳಿತ ಬಯಸಿಲ್ಲ . ಸದ್ಯ ಬಿಜೆಪಿ 44 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಈ ಬಾರಿ ಆಮ್ ಆದ್ಮಿಯ ಘಟಾನುಘಟಿ ನಾಯಕರಿಗೆ ಶಾಕ್ ಎದುರಾಗಿದ್ದು, ದೆಹಲಿ ಸಿಎಂ ಅತಿಶಿ ಕಲ್ಕಾಜಿ ಸ್ಥಾನದಿಂದ ಹಿನ್ನಡೆಯಲ್ಲಿದ್ದಾರೆ. ಬಿಜೆಪಿಯ ರಮೇಶ್ ಬಿಧುರಿ ಮುನ್ನಡೆ ಸಾಧಿಸಿದ್ದಾರೆ. ಇನ್ನು ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರು ಪ್ರವೇಶ್ ವರ್ಮಾ ಅವರು ಬಿಜೆಪಿಯಿಂದ ಮುನ್ನಡೆಯಲ್ಲಿದ್ದಾರೆ.
ಮಾಳವೀಯ ನಗರ ಕ್ಷೇತ್ರದಿಂದ ಎಎಪಿಯ ಸೋಮನಾಥ್ ಭಾರ್ತಿ ಹಿನ್ನಡೆಯಲ್ಲಿದ್ದರೆ, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಂಗ್ಪುರದಿಂದ ಹಿನ್ನಡೆಯಲ್ಲಿದ್ದಾರೆ. ದೆಹಲಿಯ ಮಾಜಿ ಸಚಿವ ಮತ್ತು ಎಎಪಿ ಅಭ್ಯರ್ಥಿ ಸತ್ಯೇಂದರ್ ಜೈನ್ ಕೂಡ ಹಿನ್ನಡೆಯಲ್ಲಿದ್ದಾರೆ.