Back To Top

 ಕುಂಭಮೇಳದಿಂದ ʻಐಐಟಿಯನ್ ಬಾಬಾ’ ಕಿಕ್‌ ಔಟ್‌
January 20, 2025

ಕುಂಭಮೇಳದಿಂದ ʻಐಐಟಿಯನ್ ಬಾಬಾ’ ಕಿಕ್‌ ಔಟ್‌

Mahakumbh 2025: ʻಐಐಟಿಯನ್ ಬಾಬಾ’ ಎಂದೇ ಜನಪ್ರಿಯರಾಗಿದ್ದ ಅವರನ್ನು ತಮ್ಮ ಗುರು ಮಹಾಂತ ಸೋಮೇಶ್ವರ ಪುರಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ಜುನಾಖಾಡ ಶಿಬಿರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಹೊರ ಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನವದೆಹಲಿ: ಪ್ರಯಾಗರಾಜ್‌ನ ಮಹಾ ಕುಂಭಮೇಳ(Mahakumbh 2025)ದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಐಐಟಿ ಮಾಜಿ ಏರೋಸ್ಪೇಸ್ ಎಂಜಿನಿಯರ್ ಅಭಯ್ ಸಿಂಗ್ ಅವರನ್ನು ಅವರನ್ನು ಅಖಾಡದಿಂದ ಹೊರಹಾಕಲಾಗಿದೆ. ‘ಐಐಟಿಯನ್ ಬಾಬಾ'(IIT Baba) ಎಂದೇ ಜನಪ್ರಿಯರಾಗಿದ್ದ ಅವರನ್ನು ತಮ್ಮ ಗುರು ಮಹಾಂತ ಸೋಮೇಶ್ವರ ಪುರಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ಜುನಾಖಾಡ ಶಿಬಿರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಹೊರ ಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜುನಾಖಾಡದ ಸದಸ್ಯರೊಬ್ಬರು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಅಭಯ್ ಸಿಂಗ್ ಮತ್ತು ನಮ್ಮ ಅಖಾಡಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಅವರು ನಮ್ಮನ್ನು ದೂಷಿಸುತ್ತಿದ್ದರು. ಅವರು ಅಲೆಮಾರಿ, ಸಾಧು ಅಲ್ಲ. ಅವರು ಟಿವಿಯಲ್ಲಿ ಏನನ್ನೂ ಹೇಳುತ್ತಿದ್ದರು. ಅವರನ್ನು ಹೊರಹಾಕಲಾಯಿತು. ಅವರು ಯಾರ ಶಿಷ್ಯರೂ ಅಲ್ಲ ಎಂದರು.
‘ಐಐಟಿಯನ್ ಬಾಬಾ’ ತಮ್ಮನ್ನು ಅಖಾಡದಿಂದ ಹೊರಹಾಕಲಾಗಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ. ಶುಕ್ರವಾರ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ಅವರು, ಅಖಾಡದಲ್ಲಿರುವ ಮಠಾಧೀಶರು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು. ನಾನು ಈಗ ಜನಪ್ರಿಯನಾಗಿದ್ದೇನೆ ಮತ್ತು ಅವರ ಬಗ್ಗೆ ಏನನ್ನಾದರೂ ಬಹಿರಂಗಪಡಿಸಬಹುದು ಎಂದು ಅವರಿಗೆ ಭಯ. ಆದ್ದರಿಂದ ನಾನು ರಹಸ್ಯ ಧ್ಯಾನಕ್ಕೆ ಹೋಗಿದ್ದೇನೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ. ಆ ಜನರು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಯಾರು ಈ ಐಐಟಿಯನ್‌ ಬಾಬಾ?
ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಎಂಜಿನಿಯರಿಂಗ್‌ ಬಾಬಾ, ಹರಿಯಾಣದ ನಿವಾಸಿ. ಅವರು ತಮ್ಮ ಯಶಸ್ವಿ ವೃತ್ತಿ ಜೀವನವನ್ನು ತೊರೆದು ಆಧ್ಯಾತ್ಮಿಕತೆ ಮುಖ ಮಾಡಿದ್ದರು. 36 ವರ್ಷದ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಿಂದ ತಮ್ಮ ಏರೋಸ್ಪೇಸ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಬಾಲ್ಯದಲ್ಲಿ ತಾವು ಎದುರಿಸಿದಂತಹ ಕೆಲವು ಸಮಸ್ಯೆಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂಬ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದರು.

Prev Post

ಖೋ ಖೋ ವಿಶ್ವಕಪ್ ನಲ್ಲಿ ಮಿಂಚಿದ ಮೈಸೂರಿನ ಕ್ರೀಡಾಪಟು ಬಿ. ಚೈತ್ರಾ!! ತವರಲ್ಲಿ…

Next Post

ಪೈಗಂಬರ್‌ಗೆ ಅವಮಾನ: ಇರಾನಿ ಗಾಯಕನಿಗೆ ಗಲ್ಲು ಶಿಕ್ಷೆ!

post-bars

Leave a Comment

Related post