Back To Top

 39ನೇ ರಾಜ್ಯ ಪತ್ರಕರ್ತರಸಮ್ಮೇಳನದಲ್ಲಿ ಛಾಯಾಚಿತ್ರ ಪ್ರದರ್ಶನ
January 4, 2025

39ನೇ ರಾಜ್ಯ ಪತ್ರಕರ್ತರಸಮ್ಮೇಳನದಲ್ಲಿ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು:
ತುಮಕೂರಿನಲ್ಲಿ ಜ.18 & 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಪೋಟೋ ಜರ್ನಲಿಸ್ಟ್ ಗಳು ಈ ಪ್ರದರ್ಶನದಲ್ಲಿ ಭಾಗವಹಿಸಬಹುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ.

ಛಾಯಾಚಿತ್ರ ಪ್ರದರ್ಶನ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಛಾಯಾಚಿತ್ರ ಪ್ರದರ್ಶನ ಸಂಚಾಲಕರಾದ
ಭವಾನಿ ಸಿಂಗ್ ಠಾಕೂರ್8431373511,
ಶಾಂತರಾಜು9448101828
ಶರಣು9945536889
ಇವರನ್ನು ಸಂಪರ್ಕಿಸಬಹುದು.

ಛಾಯಾಚಿತ್ರ ಪ್ರದರ್ಶನಕ್ಕೆ ನಿಬಂಧನೆಗಳು,

I.ಛಾಯಾಚಿತ್ರವು ಉತ್ತಮ ಗುಣಮಟ್ಟದ ಹಾಯ್ ರೆಜುಲೇಷನ್ ಇರುವ ಛಾಯಾಚಿತ್ರವಾಗಿರಬೇಕು.

2.ಛಾಯಾಚಿತ್ರದ ಗಾತ್ರ
12*18 ಸೈಜ್ ನಲ್ಲಿ ಕಳುಹಿಸಿಕೊಡಬೇಕು.

3.ಒಬ್ಬ ಛಾಯಾಗ್ರಾಹಕರ ಎರಡು ಉತ್ತಮವಾದ ಚಿತ್ರಗಳ ಬಳಸಿಕೊಳ್ಳಲಾಗುವುದು.

4.ತಮ್ಮ ಛಾಯಾಚಿತ್ರಗಳು 10-01-2025ರ ಒಳಗಾಗಿ ತಲುಪಬೇಕು.

39thkuwjphotos@gmail.com & anufotoflash@gmail.com
ಇಲ್ಲಿಗೆ ಕಳುಹಿಸಿಕೊಡಿ.

5.ಪತ್ರಿಕಾ ಛಾಯಾಗ್ರಾಹಕರು ತಮ್ಮ ಪೂರ್ಣ ಹೆಸರು, ಯಾವ ಪತ್ರಿಕೆಯ ಛಾಯಾಗ್ರಾಹಕರು ಹಾಗೂ ಛಾಯಾಚಿತ್ರದ ಶೀರ್ಷಿಕೆ ಕಳುಹಿಸಿ ಕೊಡುವುದು ಕಡ್ಡಾಯ.

6.ಕ್ಯಾಮೆರಾದಿಂದ ತೆಗೆದ ಛಾಯಾಚಿತ್ರಗಳು ಮಾತ್ರ ಬಳಸಲಾಗುವುದು, ಮೊಬೈಲ್ ನಲ್ಲಿ ತೆಗೆದ ಛಾಯಾಚಿತ್ರಗಳು ಬಳಸಲಾಗುವುದಿಲ್ಲ.
ಪ್ರದರ್ಶನಕ್ಕೆ ಛಾಯಾ ಚಿತ್ರಗಳ ಆಯ್ಕೆ ಛಾಯಾಚಿತ್ರ ಪ್ರದರ್ಶನ ಸಮಿತಿಗೆ ಸೇರಿದ್ದು ಅವರ ನಿರ್ಧಾರವೇ ಅಂತಿಮ.

ವಂದನೆಗಳೊಂದಿಗೆ,

ಶಿವಾನಂದ ತಗಡೂರು, ಅಧ್ಯಕ್ಷರು

ಜಿ.ಸಿ.ಲೋಕೇಶ,ಪ್ರಧಾನ ಕಾರ್ಯದರ್ಶಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು.

Prev Post

2025 ಹೊಸ ವರ್ಷದಲ್ಲಿ ನಿಮ್ಮ ಅದೃಷ್ಟ ಬದಲಾಯಿಸುವ ರಾಶಿಚಕ್ರಗಳು ವಾರಭವಿಷ್ಯ ಏನು ಹೇಳುತ್ತವೆ…

Next Post

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾರ ಈ ಸುದ್ದಿಯು ಕೇವಲ ಊಹಪೋಹವೆ?

post-bars

Leave a Comment

Related post