Back To Top

 ಧರ್ಮಸ್ಥಳ ವಿವಾದ: ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳಿಗೆ ಎಸ್ಐಟಿಯಿಂದ ತನಿಖೆ
September 5, 2025

ಧರ್ಮಸ್ಥಳ ವಿವಾದ: ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳಿಗೆ ಎಸ್ಐಟಿಯಿಂದ ತನಿಖೆ

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಈ ಹಿಂದೆ ಸಿಬಿಐನಿಂದ ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳನ್ನು ವಿಶೇಷ ತನಿಖಾ ತಂಡ(ಎಸ್‌‍ಐಟಿ) ಪುನಃ ತನಿಖೆ ನಡೆಸಿದೆ.

ಬೆಂಗಳೂರು: ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್‌ ಕೊಲೆ ಪ್ರಕರಣ ತನಿಖೆ ವೇಳೆ ತಾಯಿ ಎಂದುಕೊಂಡು ಸುಜಾತಾ ಭಟ್ ಹೈಡ್ರಾಮಾ ಮಾಡಿ ನಿರಂತರ ಆರೋಪಗಳನ್ನು ಮಾಡುತ್ತಾ ಮಾಧ್ಯಮಗಳಲ್ಲಿ ಆಹಾರ ಆಗಿದ್ದರು.
ಆದರೆ ಸೌಜನ್ಯ ಅತ್ಯಾಚಾರ, rape ಕೊಲೆ ಪ್ರಕರಣದಲ್ಲಿ ಈ ಹಿಂದೆ ಸಿಬಿಐನಿಂದ cleanchit ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳನ್ನು ವಿಶೇಷ ತನಿಖಾ ತಂಡ(ಎಸ್‌‍ಐಟಿ)SIT ಪುನಃ ತನಿಖೆ ನಡೆಸಿದೆ.
ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿದ್ದ ಉದಯ್‌ಕುಮಾರ್‌ ಜೈನ್‌, ಧೀರಜ್‌ ಕೆಲ್ಲಾ ಮತ್ತು ಮಲ್ಲಿಕ ಜೈನ್‌ ಅವರುಗಳಿಂದ ಬೆಳ್ತಂಗಡಿಯ ಎಸ್‌‍ಐಟಿ ಕಚೇರಿಯಲ್ಲಿ ಮಾಹಿತಿ ಪಡೆಯಲಾಗಿದೆ.
ಇತ್ತೀಚೆಗಷ್ಟೇ ಸೌಜನ್ಯ ತಾಯಿ ಎಸ್‌‍ಐಟಿಗೆ ದೂರು ನೀಡಿ ಮಗಳ ಕೊಲೆ ಪ್ರಕರಣವನ್ನು ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಮೂವರನ್ನು ವಿಚಾರಣೆಗೆ ಗುರಿಪಡಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
2012ರ ಅಕ್ಟೋಬರ್‌ನಲ್ಲಿ ಸೌಜನ್ಯ ಕಾಲೇಜಿನಿಂದ ಮನೆಗೆ ತೆರಳುವಾಗ ಕಾಣೆಯಾಗಿದ್ದರು. ಮರುದಿನ ಮೃತದೇಹ ಧರ್ಮಸ್ಥಳದ ಬಳಿಯ ಪಾಂಗಲದಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸರು ಆರಂಭಿಕ ತನಿಖೆ ನಡೆಸಿದ್ದು, ಸಂತೋಷ್‌ ರಾವ್‌ ಎಂಬಾತನನ್ನು ಬಂಧಿಸಿದ್ದರು. ಪ್ರಕರಣವನ್ನು ಸಿಐಡಿ ಮತ್ತು 2013ರಲ್ಲಿ ಸಿಬಿಐಗೆ ವರ್ಗಾಯಿಸಲಾಗಿತ್ತು. ಆದರೆ 2023ರ ಜೂನ್‌ 16ರಂದು ಸಿಬಿಐ ವಿಶೇಷ ನ್ಯಾಯಾಲಯವು ಸಂತೋಷ್‌ ರಾವ್‌ನನ್ನು ಸಾಕ್ಷ್ಯಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿತ್ತು. ತನಿಖೆಯಲ್ಲಿ ಲೋಪದೋಷಗಳಿವೆ ಎಂದು ನ್ಯಾಯಾಲಯ ಟೀಕಿಸಿತ್ತು. ಇದರಿಂದ ಸೌಜನ್ಯ ಕುಟುಂಬಸ್ಥರು ಮತ್ತು ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಈಗ ಎಸ್‌‍ಐಟಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಉದಯ್‌ ಜೈನ್‌ ಸೇರಿದಂತೆ ಆರೋಪಿತರನ್ನು ವಿಚಾರಣೆಗೊಳಪಡಿಸಿದೆ. ಉದಯ್‌ ಜೈನ್‌ ಅವರಿಗೆ ಎಸ್‌‍ಐಟಿ SIT ಕರೆ ಮಾಡಿ ಇಂದು ಬೆಳ್ತಂಗಡಿ ಕಚೇರಿಗೆ ಬರಲು ಸೂಚಿಸಿತ್ತು.
ನಾನು ಯಾವುದೇ ವಿಚಾರಣೆಗೆ ಸಿದ್ಧನಿದ್ದೇನೆ. ಸತ್ಯವನ್ನು ಹೇಳುವವರಿಗೆ ಭಯವಿಲ್ಲ, ಸುಳ್ಳು ಹೇಳುವವರಿಗೇ ಭಯ ಇರುತ್ತದೆ ಎಂದು ಹೇಳಿದರು. ತಾವು ಈಗಾಗಲೇ ಸಿಬಿಐ ತನಿಖೆಯಲ್ಲಿ ಭಾಗಿಯಾಗಿದ್ದು, ಡಿಎನ್‌ಎ, ಬ್ರೈನ್‌ ಮ್ಯಾಪಿಂಗ್‌, ಮತ್ತು ಪಾಲಿಗ್ರಾಫ್‌ ಪರೀಕ್ಷೆಗಳಿಗೆ ಒಳಗಾಗಿದ್ದೇವೆ ಎಂದು ಒತ್ತಿ ಹೇಳಿದರು.
ಇನ್ನೊಮೆ ಬ್ರೈನ್‌ ಮ್ಯಾಪಿಂಗ್‌ ಮಾಡಲಿ, ನಾನು ಸಿದ್ಧನಿದ್ದೇನೆ. ಸಾಯುವವರೆಗೂ ತನಿಖೆಗೆ ತಯಾರಾಗಿದ್ದೇನೆ ಎಂದು ಉದಯ್‌ ಜೈನ್‌ ತಮ ನಿರಪರಾಧಿತ್ವವನ್ನು ಸಮರ್ಥಿಸಿಕೊಂಡರು. ಅವರು ಸೌಜನ್ಯ ಕುಟುಂಬದ ತಾಯಿಯ ಬಗ್ಗೆ ಗೌರವ ವ್ಯಕ್ತಪಡಿಸಿದ್ದು, ಆ ಕುಟುಂಬವು ತಮನ್ನು ಬಾಣವಾಗಿ ಬಳಸಿಕೊಂಡು ತಮ ಖ್ಯಾತಿಗೆ ಕಳಂಕ ತಂದಿದೆ ಎಂದು ಆರೋಪಿಸಿದ್ದಾರೆ.
ಸದ್ಯ ಬುರುಡೆ ರಹಸ್ಯವೆಂದು burude rahasya ಅಸ್ತಿ ಪಂಜರ ಅಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಪೋಲೀಸರ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ.

ಇದನ್ನು ಓದಿ:

Prev Post

ರಾಜ್ಯದ ಡಿಸಿಎಂ ದೇಶದಲ್ಲಿ ಎರಡನೇ ಶ್ರೀಮಂತ ಸಚಿವರಂತೆ!!!

Next Post

ದೇಶದಲ್ಲಿ ಫಲವತ್ತತೆ ದರ ಇದೇ ಮೊದಲ ಬಾರಿಗೆ 1.9ಕ್ಕೆ ಕುಸಿತ

post-bars

Leave a Comment

Related post