Back To Top

 ಪ್ರೇಯಸಿ ಬಾಯಲ್ಲಿ ಮೊಬೈಲ್ ಬ್ಯಾಟರಿ ಸ್ಪೋಟಿಸಿ ಕೊಂದ ಪಾಪಿ

ಪ್ರೇಯಸಿ ಬಾಯಲ್ಲಿ ಮೊಬೈಲ್ ಬ್ಯಾಟರಿ ಸ್ಪೋಟಿಸಿ ಕೊಂದ ಪಾಪಿ

ಆರೋಪಿಯು ಠಾಣೆಗೆ ತೆರಳಿ, ಪ್ರೇಯಸಿಯು ಮೊಬೈಲ್‌ ಫೋನ್‌ ಸಿಡಿದು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ’ ಎಂದು ಪೊಲೀಸರು ವಿವರಿಸಿದ್ದಾರೆ.

ಸಾಲಿಗ್ರಾಮ: ಅಕ್ರಮ ಸಂಬಂಧ ಹಿನ್ನೆಲೆ ಮಹಿಳೆಯನ್ನು ಲಾಡ್ಜ್ ಗೆ ಕರೆಸಿ ಮನೆ ಬಿಟ್ಟು ಬಂದು ಮದುವೆಯಾಗುವಂತೆ ಒತ್ತಾಯಿಸಿದ ವ್ಯಕ್ತಿಯನ್ನು ಮಹಿಳೆ ಒಪ್ಪದಾಗ ಬಾಯಿಯಲ್ಲಿ ಮೊಬೈಲ್‌ ಫೋನ್‌ ಇಟ್ಟು, ವೈರ್‌ಗಳ ನೆರವಿನಿಂದ ಅದರ ಬ್ಯಾಟರಿಯನ್ನು ಸಿಡಿಸಿ ಕೊಲೆ murderಮಾಡಿದ್ದಾನೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಿದ್ದರಾಜು ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿಯು ತಾಲೂಕಿನ ಭೇರ್ಯ ಗ್ರಾಮದ ಲಾಡ್ಜ್‌ನಲ್ಲಿ ಪ್ರೇಯಸಿಯನ್ನು ಕೊಲೆ ಮಾಡಿದ್ದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಣಸೂರು ತಾಲೂಕಿನ ಗೆರಸನಹಳ್ಳಿ ರಕ್ಷಿತಾ (20) ಕೊಲೆಯಾದ ಮಹಿಳೆ.
‘ಕೇರಳ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದ ಮಹಿಳೆ ಹಾಗೂ ಆರೋಪಿಯ ನಡುವೆ ಅನೈತಿಕ ಸಂಬಂಧವಿತ್ತು. ಕಪ್ಪಡಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಇಬ್ಬರೂ ಶನಿವಾರ ಭೇರ್ಯಕ್ಕೆ ಬಂದು ಲಾಡ್ಜ್‌ನಲ್ಲಿ ತಂಗಿದ್ದರು.
ಭಾನುವಾರ ಬೆಳಿಗ್ಗೆ ಆರೋಪಿಯು ಠಾಣೆಗೆ ತೆರಳಿ, ಪ್ರೇಯಸಿಯು ಮೊಬೈಲ್‌ ಫೋನ್‌ mobile battary ಸಿಡಿದು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ’ ಎಂದು ಪೊಲೀಸರು ವಿವರಿಸಿದ್ದಾರೆ.
‘ಪರಿಶೀಲನೆ ನಡೆಸಿದಾಗ ಯುವತಿಯು ಹಾಸಿಗೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿದ್ದು, ಬಾಯಿ ಛಿದ್ರವಾಗಿತ್ತು. ಅಲ್ಲಲ್ಲಿ ಎಲೆಕ್ಟ್ರಿಕ್‌ ವೈರ್‌ಗಳು ಸಿಕ್ಕಿವೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಯೇ ಕೊಲೆ ಮಾಡಿರುವುದು ಗೊತ್ತಾಯಿತು’ ಎಂದು ತಿಳಿಸಿದ್ದಾರೆ.
‘ಮಹಿಳೆಯ ಬಾಯಿಯಲ್ಲಿ ಮೊಬೈಲ್‌ ಫೋನ್‌ ಇಟ್ಟು, ವೈರ್‌ಗಳನ್ನು ಬಳಸಿ ಅದನ್ನು ಸ್ಫೋಟಿಸಿರುವಂತೆ ಕಂಡುಬಂದಿದೆ. ವಿಚಾರಣೆ ನಡೆದಿದೆ’ ಎಂದು ಸಿಪಿಐ ಶಶಿಕುಮಾರ್‌ ಅವರು ತಿಳಿಸಿದರು.
ಪ್ರೀತಿ ನಿರಾಕರಿಸಿದಳು ಎನ್ನುವ ಕಾರಣಕ್ಕೆ ಆಕೆಯನ್ನು ಹೊಡೆಯುವ ಭರದಲ್ಲಿ ಆಕೆ ಉಸಿರು ಕಟ್ಟಿ ಸತ್ತೋದಳು. ನಂತರ ಆತ ಇದು ಕೊಲೆಯಲ್ಲ ಅಸಹಜ ಸಾವು ಎಂದು ಬಿಂಬಿಸಲು ಆತ ಮೊಬೈಲ್ ಬ್ಯಾಟರಿ ಸ್ಪೋಟಿಸಿ ಕಥೆ ಕಟ್ಟಿದ್ದನು.

ಇದನ್ನು ಓದಿ:

Prev Post

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತಾಯಿ ಮಗು ಆತ್ಮಹತ್ಯೆ

Next Post

ಭೂಕಂಪಕ್ಕೆ ಬೇಸರ ವ್ಯಕ್ತಪಡಿಸಿದ ಮೋದಿ: 21 ಟನ್ ಸಹಾಯ ಸಾಮಗ್ರಿ ಕಳುಹಿಸಿದ ಭಾರತ

post-bars

Leave a Comment

Related post