ಪತಿಗೆ ಬರ್ತ್ಡೇ ಸರ್ಪ್ರೈಸ್ ಕೊಡಲು ಹೊರಟಿದ್ದ ಬೆಂಗಳೂರಿನ ಟೆಕ್ಕಿ ವಿಮಾನ ದುರಂತದಲ್ಲಿ ಸಾವು
ಅದೆಷ್ಟೋ ಕನಸುಗಳನ್ನ ಹೊತ್ತು ಲೋಹದ ಹಕ್ಕಿಯ ಬೆನ್ನೇರಿದ್ದ ಪ್ರಯಾಣಿಕರು ವಿಮಾನ ದುರಂತದಲ್ಲಿ ಸಜೀವ ದಹನವಾಗಿದ್ದಾರೆ. ಇದೀಗ ವಿಮಾನ ಪತನದಲ್ಲಿ ಮೃತಪಟ್ಟವರ ಕುಟುಂಬಗಳ ಕಣ್ಣೀರಿನ ಕಥೆಗಳು ಹೊರಬೀಳುತ್ತಿವೆ.
ಬೆಂಗಳೂರು: ಅಹಮದಾಬಾದ್ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಟೆಕ್ಕಿಯೊಬ್ಬರು ಸಾವನ್ನಪ್ಪಿರುವುದು ಖಚಿತವಾಗಿದೆ. ಇಂದೋರ್ ಮೂಲದ ಹರ್ ಪ್ರೀತ್ ಹೊರಾ ಪತಿ ಲಂಡನ್ನಲ್ಲಿ ಟೆಕ್ಕಿಯಾಗಿದ್ದಾರೆ. ಇದೇ ಜೂನ್ 16ರಂದು ಪತಿಯ ಬರ್ತ್ಡೇ ಇತ್ತು. ಈ ಹಿಂದೆ ಜೂನ್ 19 ರಂದು ಲಂಡನ್ ಗೆ ತೆರಳಲು ಆಕೆ ಯೋಜಿಸಿದ್ದರು. ಆದ್ರೆ ಪತಿಯ ಜನ್ಮ ದಿನವನ್ನು ಅವಿಸ್ಮರಣೀಯವಾಗಿಸುವ ಬಯಕೆಯಿಂದ ಹರ್ ಪ್ರೀತ್.. ಜೂನ್ 12ರಂದೇ ತೆರಳಲು ದಿನಾಂಕ ಬದಲಿಸಿದ್ದರಂತೆ.. ಆದ್ರೆ ವಿಧಿಯಾಟವೇ ಬೇರೆ ಇತ್ತು.. ಸದ್ಯ ಇಂಧೋರ್ನಲ್ಲಿ ನೆಲೆಸಿರುವ ಅವರ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದೆ. ಗುಜರಾತ್ ನ ವಸಾದ್ ಮೂಲದ ರಜನಿಕಾಂತ್ ಪಟೇಲ್ ಮತ್ತು ದಿವ್ಯಾಬೇನ್ ರಜನಿಕಾಂತ್ ಅವರ ಮಗಳು ಲಂಡನ್ನಲ್ಲಿದ್ದಾರೆ. ಮಗಳ ಕಾನ್ವಕೇಷನ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಜೂನ್ 17ರಂದು ಲಂಡನ್ಗೆ ತೆರಳಲು ಪ್ಲಾನ್ ಮಾಡಿದ್ರು ಮಗಳ ಜೊತೆ ಹೆಚ್ಚಿನ ಸಮಯ ಕಳೆಯಲು ಹಾಗೂ ಸರ್ಪೈಸ್ ನೀಡಲು, ಜೂನ್ 12ರಂದೇ ಲಂಡನ್ಗೆ ಹೊರಟ್ಟಿದ್ದರು. ಇವರ ಜೊತೆ ಸಂಬಂಧಿರೊಬ್ಬರೂ ಕೂಡ ಇದ್ದರು. ಆದ್ರೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.
ಭೀಕರ ವಿಮಾನ ದುರಂತದಲ್ಲಿ 245 ಇದರ ಜೊತೆಗೆ ಹಾಸ್ಟೆಲ್ನಲ್ಲಿ 24 ಜನರು ಒಟ್ಟು 265 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ದುರಂತದ ಸ್ಥಳಕ್ಕೆ ಪ್ರಧಾನಿ ಮೋದಿ, ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಜೊತೆಗೆ ಗಾಯಾಳುಗಳನ್ನು ಭೇಟಿ ಆಗಿ ಧೈರ್ಯ ತುಂಬಿದ್ರು. ಇದರ ಬೆನ್ನಲ್ಲೇ ಇವತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದುರಂತದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಇದರ ಜೊತೆಗೆ ಮೃತರು ಮತ್ತು ಗಾಯಾಳುಗಳ ಕುಟುಂಬಕ್ಕೂ ಸಾಂತ್ವನ ಹೇಳಲಿದ್ದಾರೆ. ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್ನ ಮಾಜಿ ಸಿಎಂ ವಿಜಯ್ ರೂಪಾನಿ ದುರ್ಮರಣಕ್ಕೀಡಾಗಿದ್ದಾರೆ. ಲಂಡನ್ ನಲ್ಲಿದ್ದು ಪತ್ನಿಯನ್ನು ಕರೆತರಲು ಹೊರಟ್ಟಿದ್ದವರು ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ರು. ಮಾಜಿ ಸಿಎಂ ನಿಧನಕ್ಕೆ ಪ್ರಧಾನಿಯಾದಿಯಾಗಿ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಇವತ್ತು ವಿಜಯ್ ರೂಪಾನಿಯವರ ಅಂತ್ಯಸಂಸ್ಕಾರ ನೆರವೇರಲಿದೆ.
ಇದನ್ನು ಓದಿ: