ವಿಮಾನ ದುರಂತದಲ್ಲಿ ಬದುಕಿದ ಏಕೈಕ ಪ್ರಯಾಣಿಕ ರಮೇಶ್
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪವಾಡ ಸದೃಶವಾಗಿ ಬದುಕಿದ ಏಕೈಕ ಪ್ರಯಾಣಿಕ 40 ಯಾವ ವರ್ಷದ ವಿಶ್ವಾಸ್ ಕುಮಾರ್ ರಮೇಶ್ (Vishwash Kumar Ramesh), ತುರ್ತು ನಿರ್ಗಮನ ಡೋರ್ ಬಳಿಯ 11A ಸೀಟಿನಲ್ಲಿ ಕುಳಿತುಕೊಂಡಿದ್ದ ವಿಶ್ವಾಸ್, ಪತನಗೊಳ್ಳುವ ಕೊನೆ ಕ್ಷಣದಲ್ಲಿ ವಿಮಾನದಿಂದ ಹಾರಿದ್ದರಿಂದ ಪಾರಾಗಿದ್ದಾರೆ.
ಗುಜರಾತ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪವಾಡ ಸದೃಶವಾಗಿ ಬದುಕಿದ ಏಕೈಕ ಪ್ರಯಾಣಿಕ 40 ಯಾವ ವರ್ಷದ ವಿಶ್ವಾಸ್ ಕುಮಾರ್ ರಮೇಶ್ (Vishwash Kumar Ramesh), ತುರ್ತು ನಿರ್ಗಮನ ಡೋರ್ ಬಳಿಯ 11A ಸೀಟಿನಲ್ಲಿ ಕುಳಿತುಕೊಂಡಿದ್ದ ವಿಶ್ವಾಸ್, ಪತನಗೊಳ್ಳುವ ಕೊನೆ ಕ್ಷಣದಲ್ಲಿ ವಿಮಾನದಿಂದ ಹಾರಿದ್ದರಿಂದ ಪಾರಾಗಿದ್ದಾರೆ. ವಿಶ್ವಾಸ್ ಅವರ ಎದೆ , ಕಣ್ಣು, ಪಾದಗಳು ಗಾಯಗೊಂಡಿದ್ದು, ಅವರು ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಮಾನ ಪತನಗೊಂಡ ಸ್ಥಳದಿಂದ ಅವರು ನಡೆದುಕೊಂಡೇ ಅಂಬುಲೆನ್ಸ್ ಹತ್ತುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಟೇಕಾಫ್ ಆದ 30 ಸೆಕೆಂಡ್ನಲ್ಲಿ ದೊಡ್ಡ ಶಬ್ಧ ಬಂತು, ಕೊನೆ ಕ್ಷಣದಲ್ಲಿ ವಿಮಾನದಿಂದ ಹಾರಿದ್ದ ನಾನು ಎದ್ದು ನೋಡಿದಾಗ ನನ್ನ ಸುತ್ತಲೂ ಶವಗಳ ರಾಶಿ ಇತ್ತು. ಸುತ್ತಲೂ ಛಿದ್ರಗೊಂಡ ವಿಮಾನದ ಭಾಗಗಳು ಬಿದ್ದಿದ್ದವು. ಭಯಗೊಂಡು ನಾನು ಓಡಲು ಆರಂಭಿಸಿದ್ದೆ. ಈ ವೇಳೆ ಯಾರೋ ನನ್ನನ್ನು ಹಿಡಿದು ಅಂಬುಲೆನ್ಸ್ ಮೂಲಕ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದಾರೆ ಎಂದು ವಿವರಿಸಿದರು.
ನನ್ನ ಸಹೋದರ ಅಜಯ್ ಬೇರೆ ಸಾಲಿನಲ್ಲಿ ಕುಳಿತಿದ್ದರು. ಅವರು ನನಗೆ ಸಿಕ್ಕಿಲ್ಲ. ಅವರನ್ನು ದಯವಿಟ್ಟು ಪತ್ತೆ ಹಚ್ಚಲು ನನಗೆ ಸಹಾಯ ಮಾಡಿ ಎಂದು ಅವರು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.