Back To Top

 ಅಹಮದಾಬಾದ್ ವಿಮಾನ ದುರಂತ ಮಂಗಳೂರಿನ ದುರಂತವನ್ನು ನೆನಪಿಸುತ್ತದೆ: Ahmedabad Air India Crash
June 12, 2025

ಅಹಮದಾಬಾದ್ ವಿಮಾನ ದುರಂತ ಮಂಗಳೂರಿನ ದುರಂತವನ್ನು ನೆನಪಿಸುತ್ತದೆ: Ahmedabad Air India Crash

Ahmedabad Air India Crash: ಗುಜರಾತಿನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ನಿರ್ಗಮನವಾದ ಕೇವಲ ಐದು ನಿಮಿಷದಲ್ಲಿ ಪತನವಾದದ್ದು ನಿಜವಾಗಲೂ ತುಂಬಾ ಬೇಸರದ ಸಂಗತಿ.

Plain crash in ahmedabad

ಇನ್ನು ಈ ವಿಮಾನದದಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಸಾವಿನ ಯಥಾವತ್ ಸಂಖ್ಯೆ ಇನ್ನು ಸಿಕ್ಕಿಲ್ಲ. ಇಂತಿಪ್ಪ ವಿಮಾನ ದುರಂತ ನಮ್ಮ ಕರಾವಳಿಯ ವಿಮಾನ ದುರಂತವನ್ನ ನೆನಪಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಮಾನದ ಅವಶೇಷಗಳು ಹಾಗೂ ಸಾವನ್ನಪ್ಪಿದ ಜನರ ಮೃತದೇಹಗಳನ್ನು ಕಂಡರೆ ಎಂಥವರಿಗೂ ಬೇಸರವಾಗದಿರದು.

ವಿಮಾನ ದುರಂತಕ್ಕೀಡಾದ ಈ ಸಮಯದಲ್ಲಿ ಪೈಲಟ್ “ ಮೇಡೇ “ ( ವಿಮಾನದಲ್ಲಿ ಏನಾದರೂ ತೊಂದರೆಯಾದಲ್ಲಿ ರೇಡಿಯೊ ತರಂಗಗಳ ಮೂಲಕ ತುರ್ತು ಪರಿಸ್ಥಿತಿಯನ್ನು ಈ ಸಂದೇಶದ ಮೂಲಕ ಏರ್ ಕಂಟ್ರೋಲ್ ರೂಮ್ ಗೆ ರವಾನಿಸುತ್ತಾರೆ ) ಹೇಳಿದ ತಕ್ಷಣವೇ ಪತನಗೊಂಡಿತ್ತು.

ಯಾವುದೇ ವಿಮಾನವು ಹಾರುವ ಮುನ್ನ ಸರಿಯಾಗಿ ತಪಾಸಣೆ ಮಾಡಿ ಕ್ಲಿಯರೆನ್ಸ್ ಸಿಕ್ಕದ ಮೇಲೆಯೇ ವಿಮಾನವು ಹಾರಾಟ ನಡೆಸಬೇಕು. ಈ ವಿಮಾನದಲ್ಲಿ ಕಂಡಂತಹ ತಾಂತ್ರಿಕ ದೋಷದ ಬಗ್ಗೆ ಇನ್ನು ತನಿಕೆಯಾಗಿ ಮಾಹಿತಿಯು ಹೊರಬರಬೇಕಾಗಿದೆ.

ಏನೇ ಆದರೂ , ವಿಮಾನದ ಈ ಘೋರ ದುರಂತಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ.

Prev Post

ಆಟೋ ಚಾಲಕನಿಗೆ ಅವಮಾನ ಮಾಡಿದ ಹಿಂದಿ ಮಹಿಳೆ

Next Post

ಕರ್ನಾಟಕದ ಕೆಲವೆಡೆ ಮುಂಗಾರು ಅಬ್ಬರ ಶುರು: ನಾಳೆಯಿಂದ ಮಳೆ ಹೆಚ್ಚಳ

post-bars

Leave a Comment

Related post