T-20 World Cup: ಕೆಎಲ್ ರಾಹುಲ್ ಔಟ್, ಸೂರ್ಯ ಕ್ಯಾಪ್ಟನ್, ಅಯ್ಯರ್ಗೆ ಅವಕಾಶ ಫಿಕ್ಸ್! ಹೀಗಿರಲಿದೆ 2026ರ ಟಿ-20 ವಿಶ್ವಕಪ್ ತಂಡ
ಮೆನ್ ಇನ್ ಬ್ಲೂ ತಂಡವು 2026ರ ಟಿ-20 ವಿಶ್ವಕಪ್ನಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದ್ದು, ಸೂರ್ಯಕುಮಾರ್ ಯಾದವ್ (Suryakumar Yadav) ತಂಡದ ನಾಯಕತ್ವ ವಹಿಸುವುದು ಬಹುತೇಕ ಖಚಿತವಾಗಿದೆ.
ನವದೆಹಲಿ: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮರಳಿ ಬರುವ ಹೊತ್ತಿಗೆ ಭಾರತೀಯ ಕ್ರಿಕೆಟ್ ತಂಡ ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ-20 ವಿಶ್ವಕಪ್ನಲ್ಲಿ (T-20 World Cup) ಆಡಿ ಮುಗಿಸಿರಲಿದೆ. ಮೆನ್ ಇನ್ ಬ್ಲೂ ತಂಡವು ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದ್ದು, ಸೂರ್ಯಕುಮಾರ್ ಯಾದವ್ (Suryakumar Yadav) ತಂಡದ ನಾಯಕತ್ವ ವಹಿಸುವುದು ಬಹುತೇಕ ಖಚಿತವಾಗಿದೆ. ವಿಶ್ವ ಕ್ರಿಕೆಟ್ನಲ್ಲಿ ಪ್ರಾಬಲ್ಯ ಹೊಂದಿರುವ ಭಾರತೀಯ ತಂಡಕ್ಕೆ ಪ್ರವೇಶಿಸಲು ಹೊರಗುಳಿದ ಆಟಗಾರರಿಗೆ 2025 ರ ಐಪಿಎಲ್ ಕೊನೆಯ ಅವಕಾಶವಾಗಿತ್ತು. 2024 ರ ಟಿ-20 ವಿಶ್ವಕಪ್ ಗೆದ್ದ ನಂತರ ರೋಹಿತ್ ನಿವೃತ್ತಿಯ ನಂತರ ಸೂರ್ಯಕುಮಾರ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಮೆನ್ ಇನ್ ಬ್ಲೂ 15 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಸೋತಿದೆ ಮತ್ತು ಬ್ಯಾಟಿಂಗ್ನಲ್ಲಿ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಜೈಸ್ವಾಲ್, ಗಿಲ್, ಅಭಿಷೇಕ್ ಆರಂಭಿಕರು
ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಕಳೆದ ವರ್ಷ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ತಂಡದಲ್ಲಿ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಗಿಲ್ ಮತ್ತು ಜೈಸ್ವಾಲ್ ಇಬ್ಬರೂ ಐಪಿಎಲ್ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ಈ ಇಬ್ಬರೂ ಕೂಡ ವಿಶ್ವ ಕ್ರಿಕೆಟ್ನ ಅತ್ಯುತ್ತಮ ಯುವ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ.
ಶ್ರೇಯರ್ ಅಯ್ಯರ್ ಆಯ್ಕೆ
ಗಿಲ್ ಇತ್ತೀಚೆಗೆ ಭಾರತೀಯ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾದರು ಮತ್ತು ಶ್ರೀಲಂಕಾ ವಿರುದ್ಧದ ಕೊನೆಯ T-20I ಪಂದ್ಯದಲ್ಲಿ ಭಾರತ ಪರ ಉಪನಾಯಕರಾಗಿದ್ದರು. ಮೆಗಾ ಈವೆಂಟ್ಗೆ ಸೂರ್ಯಕುಮಾರ್ ಅವರ ಜೊತೆಗೆ ಉಪನಾಯಕರಾಗಿಯೂ ಅವರನ್ನು ಹೆಸರಿಸಿದರೆ ಆಶ್ಚರ್ಯವೇನಿಲ್ಲ. ಭಾರತದ ಕೊನೆಯ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 37 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅಭಿಷೇಕ್ ಶರ್ಮಾ, ಟಿ-20 ಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದ ಬಗ್ಗೆ ಹೇಳುವುದಾದರೆ, ತಿಲಕ್ ವರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಶತಕಗಳನ್ನು ಗಳಿಸಿದರು. ಹಾಗೂ ಇಂಗ್ಲೆಂಡ್ ವಿರುದ್ಧದ ಕಠಿಣ ರನ್-ಚೇಸ್ನಲ್ಲಿ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಆದ್ರೂ ಕೂಡ ಅವರ ಆಯ್ಕೆ ಇನ್ನೂ ಪ್ರಶ್ನಾತೀತವಾಗಿದೆ. ಶ್ರೇಯಸ್ ಅಯ್ಯರ್ ಡಿಸೆಂಬರ್ 2023 ರಿಂದ ಭಾರತ ಪರ ಟಿ-20ಐ ಆಡಿಲ್ಲ. ಆದರೆ 2025 ರ ಐಪಿಎಲ್ನಲ್ಲಿ ಅವರ ಅಸಾಧಾರಣ ಅಭಿಯಾನ, 2025 ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಮೆನ್ ಇನ್ ಬ್ಲೂ ತಂಡದ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಹಾಗಾಗಿ ಅವರನ್ನು ಸದ್ಯ ನಿರ್ಲಕ್ಷಿಸುವುದು ಕಷ್ಟ. ಶ್ರೇಯಸ್ ನಾಯಕತ್ವದ ಪಾತ್ರಕ್ಕೆ ಕೂಡ ಸ್ಪರ್ಧೆಯಲ್ಲಿರುವ ಸಾಧ್ಯತೆ ಇದೆ.
ರಾಹುಲ್ ಆಯ್ಕೆ ಡೌಟ್
ವಿಕೆಟ್-ಕೀಪರ್ ಬ್ಯಾಟ್ಸ್ಮನ್ಗಳ ವಿಷಯದಲ್ಲಿ ಸಂಜು ಸ್ಯಾಮ್ಸನ್2024 ರಲ್ಲಿ 3 ಶತಕಗಳನ್ನು ಗಳಿಸಿದ ನಂತರ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಎರಡನೇ ವಿಕೀ ಬ್ಯಾಟರ್ ಸ್ಥಾನ ಖಾಲಿಯಿದೆ. ಆದ್ರೆ ಆ ಸ್ಥಾನಕ್ಕೆ ಜುರೆಲ್ ಹಾಗೂ ಜಿತೇಶ್ ಶರ್ಮಾ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಹಾಗಾಗಿ ಕೆಎಲ್ ರಾಹುಲ್ ಆಯ್ಕೆ ಕಷ್ಟ ಎನ್ನಲಾಗಿದೆ. ಆಲ್ರೌಂಡರ್ಗಳ ವಿಷಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಆಯ್ಕೆ ಬಹುತೇಕ ಖಚಿತ. ಜೊತೆಗೆ ಸ್ಟಾರ್ ಸ್ಪಿನ್ನರ್ಗಳಾದ ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಇಬ್ಬರೂ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಜಸ್ಪ್ರೀತ್ ಬುಮ್ರಾಮತ್ತು ಅರ್ಶ್ದೀಪ್ ಸಿಂಗ್ ವೇಗದ ಬೌಲಿಂಗ್ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇನ್ನೊಂದು ಸ್ಥಾನಕ್ಕೆ ಓರ್ವ ಆಲ್ರೌಂಡರ್ ಅಥವಾ ಹೆಚ್ಚುವರಿ ವೇಗಿಗೆ ಅವಕಾಶ ಸಿಗಬಹುದು. ಈ ಸ್ಥಾನಕ್ಕೆ ಹರ್ಷಿತ್ ರಾಣಾ ಆಯ್ಕೆಯಾಗುವ ಸಾಧ್ಯತೆ ಇದೆ. ಜೊತೆಗೆ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್ ಅಥವಾ ಶಿವಂ ದುಬೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. 2026ರ ವಿಶ್ವಕಪ್ ಭಾರತ ಸಂಭಾವ್ಯ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್ ಅಭಿಷೇಕ್ ಶರ್ಮಾ, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೀ), ಜಿತೇಶ್ ಶರ್ಮಾ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಹರ್ಶಿತ್ ರಾಣಾ, ಜಸ್ಪ್ರಿತ್ ಬುಮ್ರಾ, ಅರ್ಷದೀಪ್ ಸಿಂಗ್ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಇದನ್ನು ಓದಿ: