ಮಂಗಳೂರಿನಲ್ಲಿ ಕೋಮು ಗಲಭೆ ಹೆಚ್ಚಾದ ಹಿನ್ನಲೆ ಜೈಲಿನಲ್ಲಿ ಕೂಡ ಹಿಂದೂ- ಮುಸ್ಲಿಮರಿಗೆ ಪ್ರತ್ಯೇಕ ಬ್ಲಾಕ್ ನಿರ್ಮಾಣ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಲ್ಲಿ ಒಬ್ಬನಾದ ಚೊಟ್ಟೆ ನೌಷದ್ ಮೇಲೆ ಜೈಲಿನ ಕೈದಿಗಳು ಹಲ್ಲೆ ನಡೆಸಿದ ಬೆನ್ನಲ್ಲೇ ಜೈಲಿನಲ್ಲಿ ನಿನ್ನೆ ಮತ್ತೊಂದು ಪ್ರಕರಣ ದಾಖಲಾಗಿದೆ.
ಬೆಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಲ್ಲಿ ಒಬ್ಬನಾದ ಚೊಟ್ಟೆ ನೌಷದ್ ಮೇಲೆ ಜೈಲಿನ ಕೈದಿಗಳು ಹಲ್ಲೆ ನಡೆಸಿದ ಬೆನ್ನಲ್ಲೇ ಜೈಲಿನಲ್ಲಿ ನಿನ್ನೆ ಮತ್ತೊಂದು ಪ್ರಕರಣ ದಾಖಲಾಗಿದೆ. ಕಳೆದ ತಿಂಗಳ ಹಿಂದೆಯಷ್ಟೇ ಮಂಗಳೂರಿನ ಜೈಲಿಗೆ ಡ್ರಗ್ಸ್ ರವಾನಿಸುವ ವಿಡಿಯೋ ಭಾರೀ ವೈರಲ್ ಆಗಿತ್ತು, ಇದಾದ ಬಳಿಕ ಜೈಲಿನಲ್ಲಿ ಸಣ್ಣ ಪುಟ್ಟ ಕಿರಿಕ್, ತಳ್ಳಾಟ ಬೈಗುಳ ನಡೆಯುತ್ತದೆ ಇರುತ್ತದೆ.ಆದರೆ ಸುಹಾಸ್ ಶೆಟ್ಟಿ ಕೊಲೆ ಆರೋಪಿಯ ಮೇಲೆ ಹಲ್ಲೆ ನಡೆಸಿದ ಬಳಿಕ ಜೈಲಿನಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಲಾಗಿದೆ. ಮಂಗಳೂರಿನ ಜೈಲಿನಲ್ಲಿ ಕೈದಿಗಳು ಹೊಡೆದಾಡಿಕೊಳ್ಳುವುದು ಗಾಂಜಾ ಸಹಿತ ಮಾದಕ ವಸ್ತು ಪತ್ತೆಯಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲದೆ ಜೈಲಿನಲ್ಲಿ ಮೊಬೈಲ್ ಬಳಕೆ, ಜೈಲಿನಿಂದ ಪರಾರಿ, ಆತ್ಮಹತ್ಯೆ, ಕೈದಿಗಳ ಬಾಡೂಟ ಮಾಡಿದ ಚಿತ್ರ ಕೂಡ ಕೆಲ ವರ್ಷಗಳ ಹಿಂದೆ ವೈರಲ್ ಆಗಿತ್ತು. ಮಂಗಳೂರಿನಲ್ಲಿ ಕೋಮು ಗಲಭೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆ ಜೈಲಿನಲ್ಲಿ ಕೂಡ ಹಿಂದೂಗಳಿಗೆ ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ಬ್ಲಾಕ್ ಗಳನ್ನು ನಿರ್ಮಿಸಲಾಗಿದೆ. ಆದರೂ ಕೂಡ ಎರಡು ಸಮುದಾಯದ ಯುವಕರ ನಡುವೆ ಗಲಾಟೆಯಾಗುತ್ತಲೆ ಇದೆ.
ಇದೀಗ ಕಾರಾಗೃಹದಲ್ಲಿ ಅಡುಗೆ ಮಾಡುತ್ತಿದ್ದ ಹಿಂದೂ ಕೈದಿಗೆ ಮತ್ತೋರ್ವ ಕೈದಿ ಮುನೀರ್ ಹೊಡೆದಿದ್ದಾನೆ. ಇದರಿಂದ, ಆಕ್ರೋಶಗೊಂಡ ಇತರ ಕೈದಿಗಳು ಮುನೀರ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಕೂಡಲೇ ಎಚ್ಚೆತ್ತ ಜೈಲಿನ ಅಧಿಕಾರಿಗಳು ಗಲಾಟೆಯನ್ನು ತಡೆದಿದ್ದಾರೆ. ಮಂಗಳೂರು ಜೈಲಿನಲ್ಲಿ 200 ಮಂದಿ ಪುರುಷ ಮತ್ತು 10 ಮಂದಿ ಮಹಿಳಾ ಕೈದಿಗಳನ್ನು ಇರಿಸಲಷ್ಟೇ ಅವಕಾಶವಿದೆ. ಆದರೆ ಸದ್ಯ 310ರಷ್ಟು ಕೈದಿಗಳಿದ್ದಾರೆ. ಮುಡಿಪು ಸಮೀಪ ಸುಮಾರು 65 ಎಕರೆ ಜಾಗದಲ್ಲಿ 1,000 ಕೈದಿಗಳನ್ನು ಇರಿಸಲು ಸಾಧ್ಯವಾಗುವಂತಹ ಸುಸಜ್ಜಿತ ಜೈಲು ನಿರ್ಮಾಣ ಕಾಮಗಾರಿ 110 ಕೋ.ರೂ. ವೆಚ್ಚದಲ್ಲಿ ನಡೆಯುತ್ತಿದೆ.
ಇದನ್ನು ಓದಿ: