Back To Top

 ಕುಡಿದ ಮತ್ತಿನಲ್ಲಿ ತಾಯಿ ದೇಹ ಮುಟ್ಟಲು ಹೋದ ಪಾಪಿ ಪುತ್ರ ಮಸಣಕ್ಕೆ
April 13, 2025

ಕುಡಿದ ಮತ್ತಿನಲ್ಲಿ ತಾಯಿ ದೇಹ ಮುಟ್ಟಲು ಹೋದ ಪಾಪಿ ಪುತ್ರ ಮಸಣಕ್ಕೆ

ಮಗನ ವರ್ತನೆಯಿಂದ ಬೇಸತ್ತು ತಾಯಿಯೊಬ್ಬಳು ಅವನನ್ನು ಭೀಕರವಾಗಿ ಕೊಂದು ಹಾಕಿರುವ ಘಟನೆ ತೆಲಂಗಾಣದ ಮುತ್ತರಂ ಮಂಡಲ ಕೇಂದ್ರದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ತಾಯಿಯ ದೇಹ ಮುಟ್ಟಲು ಹೋದ ಪಾಪಿ ಪುತ್ರ ಮಸಣದ ಹಾದಿ ಹಿಡಿದಿದ್ದಾನೆ.

ತೆಲಂಗಾಣ: ಮಗನ ವರ್ತನೆಯಿಂದ ಬೇಸತ್ತು ತಾಯಿಯೊಬ್ಬಳು ಅವನನ್ನು ಭೀಕರವಾಗಿ ಕೊಂದು ಹಾಕಿರುವ ಘಟನೆ ತೆಲಂಗಾಣದ ಮುತ್ತರಂ ಮಂಡಲ ಕೇಂದ್ರದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ತಾಯಿಯ ದೇಹ ಮುಟ್ಟಲು ಹೋದ ಪಾಪಿ ಪುತ್ರ ಮಸಣದ ಹಾದಿ ಹಿಡಿದಿದ್ದಾನೆ.
ತೆಲಂಗಾಣದ ಮುತ್ತರಂ ಗ್ರಾಮದ ನರೇಶ್ ಮಹೇಶ್ (33) ಕೆಲವು ದಿನಗಳ ಹಿಂದೆ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದನು. ಮದ್ಯ ವ್ಯಸನಿಯಾಗಿದ್ದ ನರೇಶ್‌ ಕುಡಿಯಲು ಹಣ ನೀಡದಿದ್ದರೆ, ಹೆತ್ತವರ ಮೇಲೆ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸುತ್ತಿದ್ದ ಎನ್ನಲಾಗಿದೆ.
ಇನ್ನು ಕುಟುಂಬ ಸದಸ್ಯರು ಮಲಗಿದ್ದಾಗ, ಅತಿಯಾದ ಮದ್ಯ ಸೇವಿಸಿದ್ದ ಮೃತ ನರೇಶ್ ಮನೆಗೆ ನುಗ್ಗಿ ಮತ್ತೊಂದು ಕೋಣೆಯಲ್ಲಿದ್ದ ತನ್ನ ತಾಯಿ ಲಕ್ಷ್ಮಿ ಬಳಿಗೆ ಹೋಗಿ, ಆಕೆಯ ಕೈ ಹಿಡಿದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದರಿಂದ ಕೋಪಗೊಂಡ ತಾಯಿ, ಅವನನ್ನು ಪಕ್ಕಕ್ಕೆ ತಳ್ಳಿ, ಕಲ್ಲಿನಿಂದ ತಲೆ, ಹಣೆ ಮತ್ತು ಎದೆಗೆ ಹೊಡೆದಿದ್ದಾಳೆ., ಇದರಿಂದ ನರೇಶ್‌ಗೆ ಗಂಭೀರ ಗಾಯಗಳಾಗಿದ್ದವು.
ಕುಟುಂಬ ಸದಸ್ಯರು ಅವರನ್ನು ಪೆದ್ದಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದರು. ಮೃತ ನರೇಶ್ ತಂದೆ ಮಹೇಶ್ ರಾಜಯ್ಯ ನೀಡಿದ ದೂರಿನ ಆಧಾರದ ಮೇಲೆ ಲಕ್ಷ್ಮಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮಂತಿನಿ ಸಿಐಬಿ ರಾಜು ಮತ್ತು ಮುತ್ತಾರ ಸಬ್ ಇನ್ಸ್‌ಪೆಕ್ಟರ್ ಗೋಪತಿ ನರೇಶ್ ತಿಳಿಸಿದ್ದಾರೆ.

ಇದನ್ನು ಓದಿ:

https://infomindz.in/jilleyalli-a-17rvregu-male/
Prev Post

ಪತ್ನಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಉದ್ಯಮಿ ಬಂಧನ

Next Post

ಮುಸ್ಲಿಂ ಮಹಿಳೆಯ ಸ್ಕಾನಿಂಗ್ ವೇಳೆ ಮೈ ಮುಟ್ಟಿದ ಆರೋಪ: ವೈದ್ಯ ವಿದ್ಯಾರ್ಥಿ ಹಲ್ಲೆ

post-bars

Leave a Comment

Related post