ಸಾಹಸಿ ಬಾಹ್ಯಾಕಾಶ ವಿಜ್ಞಾನಿ ಸುನೀತಾ ವಿಲಿಯಮ್ಸ್
ಚಿಂತನೆ. (೧೯೩೪)
(ಶ್ರೀಧರ ಭಟ್ಟ ಶಿರಸಿ)
ಸುನೀತಾ ವಿಲಿಯಮ್ಸ್ ಈ ಹೆಸರು ಇಂದು ಜಗತ್ತಿನ ಎಲ್ಲೆಡೆ ಕೇಳಿಬರುವ ಜನಪ್ರಿಯ ಹೆಸರು .ಹಾಗಂತ ಇವರೇನು ರಾಜಕಾರಣಿ ಯಲ್ಲ. ಸಿನಿಮಾ ನಟಿಯೂ ಅಲ್ಲ. ಅವರೊಬ್ಬ ಬಾಹ್ಯಾಕಾಶ ವಿಜ್ಞಾನಿ. ಕಳೆದ ಒಂಭತ್ತು ತಿಂಗಳುಗಳಿಂದ ಬಾಹ್ಯಾಕಾಶದಲ್ಲಿ ಸಿಲುಕಿ ತಾಂತ್ರಿಕ ಕಾರಣದಿಂದ ವಾಪಸ್ ಬರಲಾಗದೆ ಇಡೀ ಜಗತ್ತು ಆತಂಕದಿಂದ ಇರುವ ಸಮಯದಲ್ಲಿ ಕಳೆದೆರಡು ದಿನಗಳಿಂದ ಆಶಾಕಿರಣವೊದು ಮೂಡಿ ಅದು ಸಫಲಗೊಂಡು ಕೊನೆಗೂ ಅವರು ಸುರಕ್ಷಿತವಾಗಿ ಭೂಮಿಗೆ ಮರಳಿದರು. ಭಾರತೀಯ ಮೂಲದವರಾಗಿದ್ದ ರಿಂದ ಭಾರತೀಯರಿಗೆ ನೆಮ್ಮದಿಯ ದಿನ.

ಅವರ ಸುರಕ್ಷಿತ ಬರುವಿಕೆಗಾಗಿ ಹೊತ್ತಹರಕೆಹಾಡ್ಯ ಗಳೆಷ್ಟೋ ! ಮಾಡಿದ ಪೂಜೆ ಪುನಸ್ಕಾರ ಗಳೆಷ್ಟೋ ! ಅವೆಲ್ಲವೂ ಇಂದು ಫಲ ನೀಡಿವೆ. ಅವರ ಬಂಧುಗಳೊಂದಿಗೆ ಸಮಸ್ತ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ಅವರ ಆರೋಗ್ಯದ ಬಗ್ಗೆ ಇನ್ನೂ ಯಾವುದೇ ನಿಖರ ಮಾಹಿತಿಗಳಿಲ್ಲ. ಕಳೆದ ಒಂಭತ್ತು ತಿಂಗಳುಗಳಿಂದ ಬಾಹ್ಯಾಕಾಶದಲ್ಲಿ ಕಳೆದು ಈಗ ಒಮ್ಮೆಲೇ ಗುರುತ್ವ ಶಕ್ತಿಗೆ ಬಂದಾಗ ಕೆಲವು ಸಮಸ್ಯೆಗಳು ಎದುರಾಗ ಬಹುದು ಎಂಬುದು ಊಹೆ. ಮುಂದಿನ ಕೆಲವು ದಿನಗಳು ಅವರಿಗೆ ಸಂಘರ್ಷದ ದಿನಗಳು ಎಂದರೆ ತಪ್ಪಲ್ಲ. ಅದನ್ನು ಯಶಸ್ವಿಯಾಗಿ ಎದುರಿಸುವ ಮಾನಸಿಕ ಸ್ಥೈರ್ಯ ಅವರಲ್ಲಿದೆ ಎನ್ನುವುದು ಶತಸಿದ್ಧ. ಅದರಿಂದ ಅವರು ಯಶಸ್ವಿಯಾಗಿ ಹೊರಬರಲಿ ಎಂದು ಆಶಿಸೋಣ. ಆದರೆ ಈಗ ಸಾಧ್ಯವಾದದ್ದು ಹಿಂದೇಕೆ ಸಾಧ್ಯವಾಗಿರಲಿಲ್ಲ ಎಂಬುದು ಮಾತ್ರ ಚಿದಂಬರ ರಹಸ್ಯ ! ಈ ದಿಸೆಯಲ್ಲಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಅಸಾಧ್ಯವನ್ನು ಸಾಧ್ಯ ಮಾಡಿದ ಅಮೇರಿಕದ ಅಧ್ಯಕ್ಷ ಟ್ರಂಪ್, ನಾಸಾ ಹಾಗೂ ಎಲಾನ್ ಮಸ್ಕರವರು ಅಭಿನಂದನಾರ್ಹರು. ಲೋಕ ಕಲ್ಯಾಣಕ್ಕೆ ಅವರು ಮಾಡಿದ ಸಾಹಸ, ಸಾಧನೆ,ತ್ಯಾಗಗಳು ಹುಸಿಯಾಗದಿರಲಿ.
ಇದನ್ನು ಓದಿ: