ಕಿಪ್ಪಿ ಕೀರ್ತಿಯ ತ್ರೀಕೋನ ಲವ್ ಸ್ಟೋರಿ: ಹಾರ್ಟ್ ಬ್ರೇಕ್ ಗೆ ಕಿಪ್ಪಿ ಕಣ್ಣೀರು
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಕಿಪ್ಪಿ ಕೀರ್ತಿ ಅವರು ಬ್ರೇಕಪ್ ಮಾಡಿಕೊಂಡಿರುವ ವಿಚಾರವನ್ನೇ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಬೆಂಗಳೂರು: ಹಾಯ್ ಜನರೇ, ಬನ್ನಿ ಬನ್ನಿ ಜನರೇ ಎಂದು ಹೇಳುತ್ತ ರೀಲ್ಸ್ ಮೂಲಕ ಫೇಮಸ್ ಆಗಿರೋ kippi kirthi ಕಿಪ್ಪಿ ಕೀರ್ತಿ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಕಿಪ್ಪಿ ಕೀರ್ತಿ ಅವರು ಬ್ರೇಕಪ್ ಮಾಡಿಕೊಂಡಿರುವ ವಿಚಾರವನ್ನೇ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಅವರು ಕಾರಣವನ್ನು ಕೂಡ ಹೇಳಿದ್ದಾರೆ. ಕಿಪ್ಪಿ ಕೀರ್ತಿ ಅವರು ಮುತ್ತು ಎನ್ನುವವರನ್ನು ಪ್ರೀತಿಸುತ್ತಿದ್ದರಂತೆ.

ಎಲ್ಲೇ ಇರು, ಚೆನ್ನಾಗಿರು, ಖುಷಿಯಾಗಿರು ಅಷ್ಟೇ ಯಾವತ್ತೂ ನಾನಿನಗೆ ಪೆದ್ದು ಮುಖ ತೋರ್ಸೋದಿಲ್ಲ. ನೀನು ನನ್ನ ಬಗ್ಗೆ ತಪ್ಪು ತಿಳ್ಕೊಂಡು ದೂರ ಮಾಡಿದೆ ಅಲ್ವಾ ? ಹೇಗಿರಲಿ ನಾನು ಅಂತ ಗೊತ್ತಿಲ್ಲ. ಎಲ್ಲರಿಗೂ ಹಾಲು ಕುಡಿದಷ್ಟು ಸಂತೋಷ ಆಗಿರಬಹುದು , ಚೆನ್ನಾಗಿರಿ ಅಂತ ಅಷ್ಟೇ ಬಯಸೋದು. ನನಗೆ ಇನ್ನೇನು ಬೇಡ. ನಿನ್ನ ಮರೆಯೋಕೆ ಕಷ್ಟ ಆಗಬಹುದು. ಆದರೆ ಮರೆಯೋದಿಲ್ಲ, ಇನ್ಮುಂದೆ ನಾನು ಯಾರನ್ನೂ ಮದುವೆನೂ ಆಗಲ್ಲ. ಇದು ಪ್ರೀತಿ ಮೇಲೆ ಆಣೆ .

ಸ್ವಲ್ಪ ಆದ್ರೂ ನೀನು ನನ್ನ ಮಾತು ಕೇಳಬಹುದಿತ್ತು, ಆದ್ರೆ ನೀನು ನನ್ ಮೇಲೆ ಅನುಮಾನ ಪಟ್ಟೆ ಎಂದು ಕಿಪ್ಪಿ ಕೀರ್ತಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮಿಂಚುತ್ತಿರುವ ಕಿಪಿ ಕೀರ್ತಿಗೆ ಲವ್ ಬ್ರೇಕಪ್ ಆಗಿದೆ. ಸುನೀಲ್ ಮತ್ತು ಕೀರ್ತಿ ನಡುವೆ ಯಾವುದೇ ಸಂಬಂಧವಿಲ್ಲವಂತೆ. ಅಂದರೂ ಮುತ್ತು ತಪ್ಪು ತಿಳ್ಕೋಂಡು ಅಂತ ಕೀರ್ತಿ ಹೇಳಿಕೊಂಡಿದ್ದಾಳೆ.
ಇನ್ನು ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಕಿಪಿ ಕೀರ್ತಿ, ಎಷ್ಟು ಅಂತ ಸಹಿಸಿಕೊಳ್ಳಬೇಕು, ನಾನು ಮುತ್ತುಗೆ ತುಂಬಾ ಸಹಾಯ ಮಾಡಿದೆ, ಅವನ ಹತ್ರ ಏನೂ ಇದ್ದಿಲ್ಲ.. ನಾನು ಎಲ್ಲಾ ಕೊಟ್ಟೆ.. ಎಲ್ಲಾ ತರಾನೂ ಮಾಡಿದಿನಿ, ಆದ್ರೆ ಇವಾಗ ಅವನು ಲೈವ್ ಬಂದು ಸಿಂಪತಿ ಗಿಟ್ಟಿಸಿಕೊಳ್ಳುತ್ತೀದಿನಿ ಅಂತಾನೆ.. ನಾನು ಸಿಂಪತಿ ಗಿಟ್ಟಿಸಿಕೊಂಡಿಲ್ಲ.. ಸ್ವಂತವಾಗಿ ಬೆಳೆದಿದಿನಿ ಎಂದು ಹೇಳಿಕೊಂಡಿದ್ದಾಳೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ತ್ರಿಕೋನ್ ಪ್ರೇಮಿಗಳ ಲವ್ ಸ್ಟೋರಿ.. ಸಖತ್ ವೈರಲ್ ಆಗುತ್ತಿದ್ದು, ನೋಡಿದವರು ಬಿದ್ದು ಬಿದ್ದು ನಗುತ್ತಿದ್ದಾರೆ.
ಇದನ್ನೂ ಓದಿ: