Back To Top

 ಎಚ್ಡಿಕೆ ಬಿಡದಿ ತೋಟದ ಮನೆಗೆ ಏಕಾಏಕಿ ಜೆಸಿಬಿ ದಾಳಿ

ಎಚ್ಡಿಕೆ ಬಿಡದಿ ತೋಟದ ಮನೆಗೆ ಏಕಾಏಕಿ ಜೆಸಿಬಿ ದಾಳಿ

ಕೆಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಕುಟುಂಬದ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದ ಹಿನ್ನೆಲೆ ಒತ್ತುವರಿ ತೆರವು ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.

ರಾಮನಗರ: ಕೆಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (H D Kumaraswamy) ಕುಟುಂಬದ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದ ಹಿನ್ನೆಲೆ ಒತ್ತುವರಿ ತೆರವು (Land Encroachment) ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ತೆರವು ಮಾಡಲು ವಿಳಂಬವಾಗಿದ್ದೇಕೆ ಎಂದು ಹೈಕೋರ್ಟ್ (High Court) ತರಾಟೆಗೆ ತೆಗೆದುಕೊಳ್ತಿದ್ದಂತೆ, ಇಂದು ಕಂದಾಯ ಇಲಾಖೆ ಸಿಬ್ಬಂದಿ ಬಿಡದಿ ತೋಟದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿದ್ರು. 14 ಎಕರೆ ಜಾಗವನ್ನು ತೆರವು ಮಾಡಲಾಗ್ತಿದೆ.
ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಕುಟುಂಬದ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿ ಬಂದ ಹಿನ್ನೆಲೆ ಒತ್ತುವರಿ ತೆರವು ಮಾಡುವಂತೆ ಹೈಕೋರ್ಟ್ ಖಡಕ್ ಸೂಚನೆ ನೀಡಿತ್ತು. ಇಂದು ಕಂದಾಯ ಇಲಾಖೆ ತೆರವು ಕಾರ್ಯಾಚರಣೆ ಮಾಡಿದ್ದಾರೆ.

ಪ್ರಕರಣ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌ಐಟಿ ರಚನೆ ಮಾಡಿದ್ರು. ಬಿಡದಿಯ ಕೇತಗಾನಹಳ್ಳಿಯ ಸರ್ವೇ 7, 8, 9, 10, 16, 17 ಮತ್ತು 79ರಲ್ಲಿ ಒತ್ತುವರಿ ಆರೋಪ ಕೇಳಿ ಬಂದಿತ್ತು. ಕುಮಾರಸ್ವಾಮಿ ವಿರುದ್ಧ 14 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯಿಂದ ಜಂಟಿ ಸರ್ವೆ ನಡೆದಿದೆ. ಸರ್ವೆ ವರದಿ ಸರ್ಕಾರಕ್ಕೆ ಸಲ್ಲಿಸಿ ಇಂದು ಒತ್ತುವರಿ ತೆರವು ಕಾರ್ಯಕ್ಕೆ ಕಂದಾಯ ಇಲಾಖೆ ಮುಂದಾಗಿದೆ. ಎರಡು ಜೆಸಿಬಿಗಳ ಮೂಲಕ ಹೆಚ್.ಡಿ.ಕುಮಾರಸ್ವಾಮಿ ತೋಟದ ಮನೆಯ ಸುತ್ತಮುತ್ತಲಿನ ಒತ್ತುವರಿ ಜಾಗ ತೆರವು ಮಾಡಲಾಗ್ತಿದೆ.

ಇದನ್ನು ಓದಿ:

https://infomindz.in/dakshina-kannada-jileyalli-yerida-tapamana-sulliadalli-rajyadalle-athyadika-41-4-d-c-garista-tapamana/
Prev Post

ಮಟನ್ ಕರಿ ಮಾಡಿಕೊಡದ ಪತ್ನಿಯನ್ನು ಮಸಣ ಸೇರಿಸಿದ ಪತಿ

Next Post

ಬೆಂಗಳೂರಲ್ಲಿ ಕಸಕ್ಕೂ ಸೇವಾ ಶುಲ್ಕ: ಬೆಂಗಳೂರಿಗರಿಗೆ ತಲೆಬಿಸಿ

post-bars

Leave a Comment

Related post