Back To Top

 ಆಕಸ್ಮಿಕ ಬೆಂಕಿ ಅವಘಡ : ಬೋನಿನಲ್ಲಿದ್ದ ಚಿರತೆ ಸಾವು
March 5, 2025

ಆಕಸ್ಮಿಕ ಬೆಂಕಿ ಅವಘಡ : ಬೋನಿನಲ್ಲಿದ್ದ ಚಿರತೆ ಸಾವು

ತಿಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷದಿಂದ 4ವರ್ಷದ ವನ್ಯಜೀವಿ ಚಿರತೆ ಬೆಂಕಿಗೆ ಬಲಿಯಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ,ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆ ಅರಣ್ಯ ಇಲಾಖೆ ಮದ್ಲೇಹಳ್ಳಿ ಗ್ರಾಮದ ಸರ್ವೇ ನಂಬರ್ 10ರಲ್ಲಿ ನಾರಾಯಣಪ್ಪ ಬಿನ್ ಶಂಕರಪ್ಪ ಎಂಬುವವರ ಜಮೀನಿನಲ್ಲಿ ಚಿರತೆ ಹಿಡಿಯಲು ಬೋನ್ ಇಡಲಾಗಿತ್ತು, ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಚಿರತೆ ಸೆರೆಯಾಗಿದೆ, ಮಧ್ಯಾಹ್ನ 12.00 ಗಂಟೆಯ ಸಮಯದಲ್ಲಿ ಈ ಪ್ರದೇಶದಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಉಂಟಾಗಿ ಬೋನಿನಲ್ಲಿದ್ದ ಚಿರತೆ ಹೊರ ಬರಲಾಗದೆ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಿಬ್ಬನಹಳ್ಳಿ ಪೊಲೀಸ್ ಸಿಬ್ಬಂದಿ ಸಿದ್ದಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಮರಣೋತ್ತರ ಪರೀಕ್ಷೆಯನ್ನು ಕುಪ್ಪಾಳು ಹಿರಿಯ ಪಶುವೈದ್ಯಾಧಿಕಾರಿ ಡಾ.ರಂಗನಾಥ್ ನಡೆಸಿದ್ದಾರೆ. ಘಟನೆ ನಡೆದು ಸುಮಾರು ಗಂಟೆಗಳು ಕಳೆದರೂ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಬಾರದೇಯಿದ್ದು ಕಾರಣ ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ ಆದರೆ ರಾತ್ರಿ ಕಳೆದರೂ ಕಿಬ್ಬನಹಳ್ಳಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲು ಆಗಿರುವುದಿಲ್ಲ.

Prev Post

ʻಭಾರತ್‌ ಜೋಡೋʼದಲ್ಲಿ ಕಾಣಿಸಿಕೊಂಡ ಕಾರ್ಯಕರ್ತೆ ಶವ ಪತ್ತೆ

Next Post

ಹಕ್ಕಿ ಜ್ವರ ಹಿನ್ನೆಲೆ ಕೋಳಿಗೆ ಡಿಮ್ಯಾಂಡ್‌ ಇಲ್ಲದಿದ್ದರೂ ಬೆಲೆ ಏರಿಕೆ!!! ಗಗನಕ್ಕೇರಿದ ಮಟನ್‌

post-bars

Leave a Comment

Related post