Back To Top

 ರಸ್ತೆ ಬದಿ ಕಾರು ಪಾರ್ಕ್ ಮಾಡಿ ಉಸಿರು ನಿಲ್ಲಿಸಿದ ಟೆಕ್ಕಿ!!!!
February 24, 2025

ರಸ್ತೆ ಬದಿ ಕಾರು ಪಾರ್ಕ್ ಮಾಡಿ ಉಸಿರು ನಿಲ್ಲಿಸಿದ ಟೆಕ್ಕಿ!!!!

ಬೆಂಗಳೂರು: ಬದುಕು ಮೂರು ದಿನದ ಬಾಳು ದಿನ ದಿನ ಖುಷಿಯಿಂದ ಬದುಕಿ ಅನ್ನೋದು ಇದಕ್ಕೆ ಅನ್ನಿಸುತ್ತದೆ. ರಸ್ತೆ ಬದಿ ಕಾರು ಪಾರ್ಕ್ ಮಾಡಿದ್ದಾತ ಇಡೀ ದಿನವಾದರೂ ಇಳಿಯಲೇ ಇಲ್ಲ. ಹತ್ತಿರ ಹೋಗಿ ನೋಡಿದವರಿಗೆ ಆಘಾತ ಕಾದಿತ್ತು.
ಆ ವ್ಯಕ್ತಿ ಎಂದಿನಂತೆ ಕಾರಿನಲ್ಲಿ ಕಚೇರಿಗೆ ತೆರಳಿದ್ದರು. ಆದರೆ ಮಾರ್ಗ ಮಧ್ಯೆ ಕಾರನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದರು. ಸಂಜೆಯಾದರೂ ಕಾರಿನಿಂದ ಆ ವ್ಯಕ್ತಿ ಇಳಿಯಲೇ ಇಲ್ಲ! ಕೊನೆಗೆ ಪಕ್ಕದಲ್ಲೇ ಇದ್ದ ಬೀಡಾ ಅಂಗಡಿಯಾತ ಬಂದು ಕಾರಿನ ಕಿಟಿಕಿ ಗಾಜು ಒಡೆದಾಗ ಒಳಗಡೆ ಇದ್ದ ವ್ಯಕ್ತಿಗೆ ಉಸಿರೇ ಇರಲಿಲ್ಲ!
ಹೃದಯಾಘಾತ, ಅನಿರೀಕ್ಷಿತ ಸಾವಂತೂ ನಮ್ಮ ಬೆನ್ನ ಹಿಂದೆಯೇ ಇರುತ್ತದೆ. ಯಾವಾಗ ಸಾವು ಬರುತ್ತದೋ ಗೊತ್ತಾಗುವುದಿಲ್ಲ.
ಬೆಂಗಳೂರಿನ ಬ್ರೂಕ್ ಫಿಲ್ಡ್ ನಲ್ಲಿ ನಡೆದಿದೆ. ಐಟಿಪಿಎಲ್ ರಸ್ತೆಯಲ್ಲಿ ಗುರುವಾರ ಐಟಿ ಉದ್ಯೋಗಿ ಸಂತೋಷ್ ಪ್ರಸಾದ್, ಪಾರ್ಕ್ ಮಾಡಿದ್ದ ಕಾರಿನಲ್ಲೇ ಹೃದಯಾಘಾತದಿಂದ ಜೀವ ಬಿಟ್ಟಿದ್ದಾರೆ.
37 ವರ್ಷ ವಯಸ್ಸಿನ ಸಂತೋಷ್ ಪ್ರಸಾದ್ ಇಂದಿರಾನಗರಲ್ಲಿ ಕುಟುಂಬ ಸಮೇತ ವಾಸವಿದ್ದರು. ಗುರುವಾರ ಬೆಳಗ್ಗೆ ಕೂಡ ಎಂದಿನಂತೆ ತಮ್ಮ ಕಚೇರಿಗೆ ಕಾರಿನಲ್ಲಿ ತೆರಳಿದ್ದರು.
ಆದರೆ, ಮೊದಲೇ ಹೈ ಶುಗರ್ ನಿಂದ ಬಳಲುತ್ತಿದ್ದ ಸಂತೋಷ್, ಐಟಿಪಿಎಲ್ ರಸ್ತೆಯ ದೇಸಿ ಮಸಾಲಾ ಹೋಟೆಲ್ ಮುಂಭಾಗ ಬರುತ್ತಿದ್ದಂತೆಯೇ ಕಾರನ್ನು ಇದ್ದಕ್ಕಿದ್ದಂತೆ ಮರವೊಂದರ ಪಕ್ಕ ಪಾರ್ಕ್ ಮಾಡಿದ್ದಾರೆ.
ಆದರೆ, ಸಂಜೆ ತನಕ ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ.
ಇದರಿಂದ ಕಾರ್ ನಿಲ್ಲಿಸಿದ್ದ ಸ್ಥಳದ ಪಕ್ಕದಲ್ಲೇ ಇದ್ದ ಬೀಡಾ ಅಂಗಡಿಯವನಿಗೆ ಕೊಂಚ ಅನುಮಾನ ಬಂದಿದ್ದು ಕಾರಿನ ಬಳಿ ಹೋಗಿ ಒಳಗಿದ್ದವರನ್ನು ಕರೆದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬರದಾಗ ಕಾರಿನ ಗ್ಲಾಸ್ ಒಡೆದಿದ್ದಾರೆ. ಆಗ ಸಂತೋಷ್ ಮೃ

Prev Post

ಕೊಲೆಸ್ಟ್ರಾಲ್ ಬಗ್ಗೆ ಜನರಲ್ಲಿ ಏನೆಲ್ಲಾ ತಪ್ಪು ಕಲ್ಪನೆಗಳು ಇವೆ?

Next Post

ಮಹಾಕುಂಭಮೇಳ ಚೆಲುವೆ ಮೊನಾಲಿಸಾಗೆ ಸಿನಿಮಾ ಆಫರ್

post-bars

Leave a Comment

Related post