ಛಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ಪಾಕ್ ಹೆಸರಿಲ್ಲ!!
Champions Trophy: ಯಾವುದೇ ಐಸಿಸಿ ಟೂರ್ನಿಯ ಆತಿಥ್ಯ ವಹಿಸಿದ ದೇಶದ ಹೆಸರನ್ನು ಟೂರ್ನಿಯಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ಜೆರ್ಸಿಯಲ್ಲಿ ಮುದ್ರಿಸಲಾಗುತ್ತದೆ. ಆದರೆ, ಬಿಸಿಸಿಐ ಭಾರತದ ಜೆರ್ಸಿಯಲ್ಲಿ ಪಾಕಿಸ್ತಾನ ಹೆಸರನ್ನು ಹಾಕಲು ನಿರಾಕರಿಸಿದೆ ಎಂದು IANS ವರದಿ ಮಾಡಿದೆ.
ನವದೆಹಲಿ: ಯಾವುದೇ ಐಸಿಸಿ ಟೂರ್ನಿಯ ಆತಿಥ್ಯ ವಹಿಸಿದ ದೇಶದ ಹೆಸರನ್ನು ಟೂರ್ನಿಯಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ಜೆರ್ಸಿಯಲ್ಲಿ ಮುದ್ರಿಸಲಾಗುತ್ತದೆ. ಆದರೆ, ಬಿಸಿಸಿಐ ಭಾರತದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರನ್ನು ಹಾಕಲು ನಿರಾಕರಿಸಿದೆ ಎಂದು IANS ವರದಿ ಮಾಡಿದೆ.
ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಹೊಸ ವಿವಾದವೊಂದು ಸೃಷ್ಟಿಸಿದೆ. ಆರಂಭದಲ್ಲಿ ಭದ್ರತಾ ಕಾರಣದಿಂದ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ್ದ ಭಾರತ, ಇದೀಗ ತನ್ನ ಜೆರ್ಸಿಯಲ್ಲಿ ಛಾಂಪಿಯನ್ ಟ್ರೋಪಿ ಪಾಕಿಸ್ತಾನದ ಹೆಸರನ್ನು ಹಾಕಲು ನಿರಾಕರಿಸಿದೆ ಎಂದು ತಿಳಿದುಬಂದಿದೆ.
ಐಸಿಸಿ ಟೂರ್ನಿಗಳಲ್ಲಿ ಎಲ್ಲಾ ತಂಡಗಳು ಐಸಿಸಿ ಸಂಪ್ರದಾಯ ಪಾಲಿಸುತ್ತಾರೆ. ಆತಿಥ್ಯ ದೇಶದ ಹೆಸರನ್ನು ಹಾಕಿಸಿಕೊಳ್ಳುತ್ತದೆ. ಈ ಹಿಂದೆ ಭಾರತದ ಆತಿಥ್ಯದಲ್ಲಿ ನಡೆದಿದ್ದ ಎಲ್ಲ ಐಸಿಸಿ ಟೂರ್ನಿಯಲ್ಲಿ ವೇಳೆಯೂ ಪಾಕ್ ತಂಡ ಐಸಿಸಿ ನಿಯಮದಂತೆ ಭಾರತದ ಹೆಸರನ್ನು ತನ್ನ ಜೆರ್ಸಿಯಲ್ಲಿ ಹಾಕಿತ್ತು. ಆದರೆ ಇದನ್ನು ಭಾರತ ನಿರಾಕರಿಸಿದೆ. ಭಾರತ ಪ್ರತಿ ಹಂತದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಪಿಸಿಬಿ ಆರೋಪಿಸಿದೆ.
ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ತಟಸ್ಥ ತಾಣವಾದ ದುಬೈನಲ್ಲಿ ಆಡಲಿದೆ. ಫೆ.20 ರಂದು ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ.
19 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್ ಮತ್ತು ಇನ್ನೊಂದು ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ.
ಎಲ್ಲಾ ರೀತಿಯ ಭದ್ರತೆಯ ಭರವಸೆ ನೀಡಿದರೂ ಪಾಕಿಸ್ತಾನ ಪ್ರವಾಸಕ್ಕೆ ಭಾರತ ಒಪ್ಪಿಲ್ಲ. ಹೀಗಾಗಿ ಭಾರತದ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಲಾಯಿತು. ಇದಾದ ಬಳಿಕ ಉದ್ಘಾಟನಾ ಸಮಾರಂಭಕ್ಕೆ ನಾಯಕ ರೋಹಿತ್ ಶರ್ಮಾ ಅವರನ್ನು ಕಳುಹಿಸಲು ಕೂಡ ಬಿಸಿಸಿಐ ನಿರಾಕರಿಸಿತ್ತು. ಇದೀಗ ಜರ್ಸಿಯಲ್ಲಿ ಟೂರ್ನಿಯ ಆತಿಥೇಯ ದೇಶದ ಹೆಸರು ಹಾಕಿಸಲು ನಿರಾಕರಿಸಿದೆ. ಇದು ಸರಿಯಲ್ಲ. ಬಿಸಿಸಿಐ ತನಗೆ ಬೇಕಿದ್ದ ಹಾಗೆ ನಿಯಮಗಳನ್ನು ಬದಲಿಸುವುದಾದದರೆ ಐಸಿಸಿ ಏಕೆ ಬೇಕು? ಎಂದು ಪಾಕ್ ಕ್ರಿಕೆಟ್ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.