ಒಳ ನುಸುಳುಕೋರ ತಡೆಗೆ BSF ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ: ಮಮತಾ ಬ್ಯಾನರ್ಜಿ
ಕೋಲ್ಕತಾ: ಪಶ್ಚಿಮ ಬಂಗಾಳವನ್ನು ಅಸ್ಥಿರಗೊಳಿಸಲು ಬಾಂಗ್ಲಾದೇಶದಿಂದ ಒಳನುಸುಳುವಿಕೆಗೆ ಗಡಿ ಭದ್ರತಾ ಪಡೆ ಅನುಕೂಲ ಮಾಡಿಕೊಟ್ಟಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಆರೋಪವನ್ನು BSF ನಿರಾಕರಿಸಿದ್ದು, ದೇಶದ ಗಡಿಯನ್ನು ಶ್ರದ್ಧೆಯಿಂದ ಕಾಪಾಡುತ್ತಿದ್ದೇವೆ ಎಂದು ಪ್ರತಿಪಾದಿಸಿದೆ.
ರಾಜ್ಯ ಕಾರ್ಯದರ್ಶಿ ಕಚೇರಿಯನ್ನು ನಡೆದ ಆಡಳಿತಾತ್ಮಕ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಇಸ್ಲಾಂಪುರ, ಸೀತಾಯ್ ಮತ್ತು ಚೋಪ್ರಾ ಪ್ರದೇಶಗಳ ಮೂಲಕ ಒಳನುಸುಳುಕೋರರನ್ನು ಪ್ರವೇಶಿಸಲು BSF ಅವಕಾಶ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ನುಸುಳುಕೋರರನ್ನು ಪ್ರವೇಶಿಸಲು BSF ಅವಕಾಶ ನೀಡಿರುವುದು ಇದು ರಾಜ್ಯವನ್ನು ಅಸ್ಥಿರಗೊಳಿಸುವ ಉದ್ಧೇಶಪೂರ್ವಕ ಪ್ರಯತ್ನವಾಗಿದೆ. ಕೇಂದ್ರ ಸರಕಾರ ಒಳಗೊಂಡು ಷಡ್ಯಂತ್ರವಿದೆ ಎಂದು ಹೇಳಿದ್ದಾರೆ.
ನರೆಯ ಬಾಂಗ್ಲಾದೇಶದೊಂದೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿದ್ದು ಗೂಂಡಾಗಳು ಭಾರತ ಪ್ರವೇಶಿಸುತ್ತಿದ್ದಾರೆ. ನಮಗೆ ಎರಡೂ ಕಡೆ ಶಾಂತಿ ಬೇಕು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಗಡಿ ಭದ್ರತೆ ರಾಜ್ಯದ ಜವಾಬ್ದಾರಿಯಲ್ಲ BSF ನಿಂದ ಮಹಿಳೆಯರು ಹಿಂಸೆಗೆ ಒಳಪಡುತ್ತಿದ್ದಾರೆ. ಅವರು ಮಹಿಳೆಯರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಆದರೂ ನೀವು ಯಾರು ಪ್ರಶ್ನಿಸುದಿಲ್ಲ ಎಂದು ಮಮತಾ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
BSF ಅಧಿಕಾರಿಯೊಬ್ಬರು ಈ ಆರೋಪವನ್ನು ತಳ್ಳಿ ಹಾಕಿದ್ದು ಸೇನೆ ತನ್ನ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ . ಗಡಿಯಲ್ಲಿ 24+7 ಕಟ್ಟೆಚ್ಚರ ವಹಿಸಿದೆ ಗಡಿ ಸುರಕ್ಷತೆ ಮತ್ತು ದೇಶದ ಭದ್ರತೆಗೆ ನಾವು ಜವಾಬ್ದಾರಿ ಮತ್ತು ಶ್ರದ್ದೆಯಿಂದ ಕೆಲಸ ನಿರ್ವಹಿಸುತ್ತಿದ್ದೇವೆ. ಅನಾಮಧೇಯ ಷರತ್ತಿನೊಂದಿಗೆ ಪ್ರತಿಕ್ರಿಯಿಸಿದೆ. ಒಳನುಸುಳುವಿಕೆ ಸಮಸ್ಯೆಗೆ ಸರಕಾರ ಅನ್ಯಾಯವಾಗಿ ದೂಷಿಸುತ್ತಿದೆ. ಟಿಆರ್ಪಿಗಾಗಿ ಮಾಧ್ಯಮಗಳು ತಪ್ಪು ಮಾಹಿತಿ ಹರಡಿಸುತ್ತಿದೆ ಎಂದು ಹೇಳಿಕೆ ನೀಡಿದೆ.